ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸಿಎಂಗೆ ಮನವಿ:
ಸಹಕಾರ ಸಂಘಗಳ ಕಚೇರಿ ಕಟ್ಟಡಗಳಿಗೆ ಅನುದಾನ ಸಹಕಾರ ಇಲಾಖೆಗೆ ನೀಡುತ್ತಿಲ್ಲ. ಮುಂದಿನ ಬಜೆಟ್ನಲ್ಲಿ ಅನುದಾನ ಹಾಗೂ ಸಹಕಾರ ಕ್ಷೇತ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು. ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ಮಾತನಾಡಿ, ಸಹಕಾರ ಸಂಘಗಳಲ್ಲಿ ರಾಜಕೀಯ ಬೆರಸಬಾರದು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಒಳ ಪ್ರವೇಶಿಸಿದರೆ ಪ್ರಗತಿ ಆಗುವುದಿಲ್ಲ ಎಂದರು. ಹಿರಿಯ ಸಹಕಾರಿ ದೇಪಾಪುರ ಸಿದ್ದಪ್ಪ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ರೈತರಲ್ಲಿ ಅನೇಕರು ಕಟ್ಟುವುದಿಲ್ಲ. ಬದಲಾಗಿ ರಿನ್ಯೂವಲ್ಗೆ ಮೊರೆ ಹೋದರೆ ಮುಂದೆ ರೈತರಿಗೆ ಬಹಳ ತೊಂದರೆಯಾಗುತ್ತದೆ ಎಂದರು. ಸಹಕಾರ ರತ್ನ ಪುರಸ್ಕೃತ ಆಲತ್ತೂರು ಜಯರಾಂಗೆ ಸನ್ಮಾನಿಸಿ ಗೌರವಿಸಲಾಯಿತು. ಸಹಕಾರ ಸಂಘಗಳ ನಿಬಂಧಕಿ ಜಿ.ಸಿ.ಜ್ಯೋತಿ ಅರಸ್ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿ, ಸಿಇಒಗಳು ಸಂಘದ ಬೈಲಾ ಓದಬೇಕು. ಬೈಲಾ ಓದೋದು ಕರ್ತವ್ಯ. ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಜಾಸ್ತಿಯಾಗುತ್ತಿದೆ. ಯಶಸ್ವಿನಿ ಯೋಜನೆ ಅವಧಿಯೊಳಗೆ ಮಾಡಿಸಬೇಕು ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಯೂನಿಯನ್ ನಿರ್ದೇಶಕರಾದ ಜಿ.ಮಡಿವಾಳಪ್ಪ,ಮುದ್ದಯ್ಯ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಸ್.ಬಸವಣ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪಿ.ಶೋಭಾ, ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಪಿ.ಪದ್ಮನಾಭ, ಮುಖಂಡರಾದ ನಂಜುಂಡಸ್ವಾಮಿ, ಎಚ್.ಎಲ್.ಶಿವಪ್ಪ, ಪುಟ್ಟಬಸಪ್ಪ, ಎಚ್.ಎನ್.ಬಸವರಾಜು, ಸೋಮಹಳ್ಳಿ ಶಿವನಾಗಪ್ಪ, ಜಿಲ್ಲಾ ಯೂನಿಯನ್ ಸಿಇಒ ಮನುಜ ಇದ್ದರು.