ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಇಲ್ಲಿನ ರೈತ ಭವನದಲ್ಲಿ ತಾಲೂಕಿನ ರೈತ ಸಂಘದಿಂದ ಪ್ರೊ.ಎಂ.ಡಿ ನಂಜುಡಸ್ವಾಮಿ ಅವರ 88ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, 1965ರ ನಂತರ ಸಾರ್ವಜನಿಕ ಚಳುವಳಿಯಲ್ಲಿ ಭಾಗವಹಿಸುತ್ತಾ ರೈತ ಸಂಘವನ್ನು ಪ್ರಬಲವಾಗಿ ಕಟ್ಟಿದರು. ಅಲ್ಲದೇ ಅನೇಕ ರೈತಪರ ಹೋರಾಟಗಳಲ್ಲಿ ಭಾಗವಹಿಸಿ ರೈತರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಿದರು ಎಂದರು.
ತಾಲೂಕಿನ ರೈತರ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಎಲ್ಲಾ ರೈತರಿಗೆ ತಿಳಿ ಹೇಳಬೆಕೆಂದರುಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿ, ರೈತರಿಗೆ ನ್ಯಾಯ ಒದಗಿಸುವ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನೈತಿಕ ಸ್ಥೈರ್ಯ ನಂಜುಂಡ ಸ್ವಾಮಿ ರೈತರಲ್ಲಿ ತುಂಬಿದರು ಎಂದರು.
ರೈತ ಮುಖಂಡರಾದ ಬಸಣ್ಣರೆಡ್ಡಿ, ವೀರಣ್ಣ ಕನಕಟ್ಟಾ, ಪ್ರಶಾಂತ ಲಕಮಾಜಿ, ವಿಠ್ಠಲ ಸೋನಾರ, ಶಾಂತವಿಜಯ ಪಾಟೀಲ, ವೆಂಕಟ ದೇಶಪಾಂಡೆ, ಯಶವಂತ ಪಾಟೀಲ, ಚಂಧ್ರಕಾಂತ ಮೋಳಕೆರೆ, ಮಡಿವಾಳಪ್ಪ ಪಾಟೀಲ ಹಾಗೂ ಇತರರಿದ್ದರು.