ಕಾರ್ಮಿಕ ಸಂಘಟನೆಗಳ ಬೇಡಿಕೆ ಈಡೇರಿಸಿ

KannadaprabhaNewsNetwork |  
Published : Jul 10, 2025, 01:46 AM IST
9ುಲು1,2 | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿಯಾಗಿದೆ. ಕೂಡಲೆ ಕಾರ್ಮಿಕರ ಬೇಡಿಕೆ ಈಡೇರಿಸಬೇಕೆಂದು ಕಾರ್ಮಿಕ ಸಂಘಟನೆಗಳು ಗಂಗಾವತಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದವು.

ಗಂಗಾವತಿ:

ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಮಿಕ ಸಂಘಟನೆ ಜಂಟಿ ಸಮಿತಿಯ 1000ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಶ್ರೀಚೆನ್ನಬಸವಸ್ವಾಮಿ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮೊದಲು ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಲು ನಿರ್ಧರಿಸಿದರು. ಆದರೆ, ಪೊಲೀಸರು ಅವಕಾಶ ನೀಡದ ಕಾರಣ ಪೊಲೀಸ್ ಠಾಣೆಯ ಸಮುಚ್ಚಯ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಸಂಘಟನೆ ಮುಖಂಡ ನಿರುಪಾದಿ ಬೆಣಕಲ್, ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿಯಾಗಿದೆ. ಕೂಡಲೆ ಕಾರ್ಮಿಕರ ಬೇಡಿಕೆ ಈಡೇರಿಸ ಬೇಕೆಂದು ಆಗ್ರಹಿಸಿದರು. ಈ ವೇಳೆ ಮಂಟನಗೌಡ, ಬಸವರಾಜ ಮರಕುಂಬಿ, ಗ್ಯಾನೇಶ ಕಡಗದ, ಮರಿನಾಗಪ್ಪ, ಶಿವಮ್ಮ, ಲಕ್ಷ್ಮೀದೇವಿ, ದುರಗಮ್ಮ, ಹುಲಿಗೆಮ್ಮ ಅನುಸೂಯ, ಮಂಜುನಾಥ ಡಗ್ಗಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

ಎಐಸಿಸಿಟಿಯು ಪ್ರತಿಭಟನೆ:

ಎಐಸಿಸಿಟಿಯು ಪದಾಧಿಕಾರಿಗಳಿಂದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರಮುಖ ಬೇಡಿಕೆಗಳಾದ ಕಾರ್ಮಿಕ ವಿರೋಧಿ 4 ಸಂಹಿತೆ ತಕ್ಷಣವೇ ನಿಲ್ಲಿಸಬೇಕು, ಖಾಸಗೀಕರಣ ನಿಲ್ಲಿಸಿ ರಾಷ್ಟ್ರೀಯ ಸಂಪತ್ತು ಮತ್ತು ಮೂಲಸೌಕರ್ಯಗಳ ಮಾರಾಟ ನಿಲ್ಲಿಸಿ ರಾಷ್ಟ್ರೀಯ ನಗದೀಕರಣ ಯೋಜನೆ (ಎನ್‌ಎಂಪಿ) ಯನ್ನು ರದ್ದುಪಡಿಸಿ ವಿದ್ಯುತ್ ಬಿಲ್‌ ಹಿಂಪಡೆದು ಸ್ಮಾರ್ಟ್ ಫ್ರೀ ಪೇಡ್ ವಿದ್ಯುತ್ ಮೀಟರ್ ಯೋಜನೆ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು.

ಈ ವೇಳೆ ಸಣ್ಣ ಹನುಮಂತಪ್ಪ ಹುಲಿಹೈದರ್‌, ಬುರಾನ್ನುದ್ದೀನ್, ಅಬ್ದುಲ್, ಗೌಸ್ ಪಾಷಾ, ಪರುಶುರಾಮ, ಕೇಶವ ನಾಯ್ಕ್, ಬಾಬರ್, ರಮೇಶ ಕೆ, ಮಾಯಮ್ಮ, ಪಾರ್ವತಮ್ಮ, ದ್ಯಾವಮ್ಮ, ರೇಣುಕಮ್ಮ ತಾವರಗೇರಾ, ದ್ಯಾವಮ್ಮ, ರೇಣುಕಮ್ಮ, ಇಂದ್ರಮ್ಮ, ಅಯ್ಯಮ್ಮ, ಲಕ್ಷ್ಮಮ್ಮ, ನಜೀರ್ ಸಾಬ್, ರೇಣುಕಮ್ಮ ಚಳಿಗೇರಿ ಭಾಗವಹಿಸಿದ್ದರು.

PREV