ಸಹಕಾರ ಸಂಘದ ಏಳ್ಗೆಗೆ ಸದಸ್ಯರೇ ಜೀವಾಳ: ಸುಬ್ರಾಯ ಕೃಷ್ಣ ಭಟ್ಟ

KannadaprabhaNewsNetwork |  
Published : Sep 19, 2024, 01:46 AM IST
ಫೋಟೋ ಸೆ.೧೮ ವೈ.ಎಲ್.ಪಿ. ೦೯  | Kannada Prabha

ಸಾರಾಂಶ

ಸಂಘದ ಏಳ್ಗೆಗೆ ಸದಸ್ಯರೇ ಜೀವಾಳವಾಗಿದ್ದು, ಎಲ್ಲ ಸದಸ್ಯರು ತಮ್ಮ ವ್ಯವಹಾರವನ್ನು ಸಂಘದ ಮೂಲಕವೇ ಮಾಡಬೇಕು ಎಂದು ಸುಬ್ರಾಯ ಕೃಷ್ಣ ಭಟ್ಟ ಮನವಿ ಮಾಡಿದರು.

ಯಲ್ಲಾಪುರ: ತಾಲೂಕಿನ ಮಲವಳ್ಳಿಯ ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ೬೪ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆ. ೧೭ರಂದು ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಭಟ್ಟ ಬೋಳ್ಮನೆ ಮಾತನಾಡಿ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹೪೦,೯೦,೬೩೯ ಲಾಭ ಗಳಿಸಿದೆ. ಸಂಘದ ಏಳ್ಗೆಗೆ ಸದಸ್ಯರೇ ಜೀವಾಳವಾಗಿದ್ದು, ಎಲ್ಲ ಸದಸ್ಯರು ತಮ್ಮ ವ್ಯವಹಾರವನ್ನು ಸಂಘದ ಮೂಲಕವೇ ಮಾಡಬೇಕು ಎಂದು ವಿನಂತಿಸಿದರು.

ಈ ಬಾರಿ ಅಡಕೆ, ಕಾಳುಮೆಣಸು ವಿಕ್ರಿ ಮಾಡಿದ ಗ್ರಾಹಕರಿಗೆ ₹೪,೦೧,೬೯೮, ಕಿರಾಣಿ ಗ್ರಾಹಕರಿಗೆ ₹೨,೦೭,೬೨೧ ಪ್ರೋತ್ಸಾಹಧನ ನೀಡಿದ್ದೇವೆ ಎಂದರು. ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದ ವ್ಯವಹಾರ ಇನ್ನೂ ಅಭಿವೃದ್ಧಿಯಾಗಬೇಕು ಎಂದರು. ಮತ್ತೋರ್ವ ಅತಿಥಿ ಸಹ್ಯಾದ್ರಿ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ರವಿ ಹುಳಸೆ, ನಿರ್ದೇಶಕ ಸುಬ್ರಾಯ ಕುಂಟೇಗಾಳಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ದತ್ತಾತ್ರೇಯ ಗಾಂವ್ಕರ ನೆಲೆಪಾಲ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಶಂಕರ ನಾರಾಯಣ ಗಾಂವ್ಕರ ವಂದಿಸಿದರು.

ಭಟ್ಕಳ ಎಂಜಿಎಂ ಸೌಹಾರ್ದ ಸಹಕಾರಿಗೆ ₹51.60 ಲಕ್ಷ ನಿವ್ವಳ ಲಾಭ

ಭಟ್ಕಳ: ಇಲ್ಲಿನ ಸರ್ನನಕಟ್ಟೆಯ ಮಹಾಗಣಪತಿ- ಮಹಾಸತಿ(ಎಂಜಿಎಂ) ಸೌಹಾರ್ದ ಪತ್ತಿನ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಈರಪ್ಪ ಎಂ. ನಾಯ್ಕ ಗರಡೀಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಸಂಘವು ಅ ಮತ್ತು ಡ ವರ್ಗದ 5422 ಸದಸ್ಯರಿಂದ ಒಟ್ಟೂ ₹263.46 ಲಕ್ಷ ಷೇರು ಬಂಡವಾಳ, ₹3612.39 ಲಕ್ಷ ಠೇವಣಿ, ₹265.89 ಲಕ್ಷ ನಿಧಿಗಳು, ₹253.91 ಲಕ್ಷ ನಿಧಿಗಳನ್ನು, ₹4100.43 ಲಕ್ಷ ದುಡಿಯುವ ಬಂಡವಾಳ ಹೊಂದಿದೆ ಎಂದರು.ಉಪಾಧ್ಯಕ್ಷ ಎಂ.ಜಿ. ಅರುಣಕುಮಾರ, ನಿರ್ದೇಶಕರಾದ ಜ್ಯೋತಿ ನಾಯ್ಕ, ಮಂಜುನಾಥ ನಾಯ್ಕ, ಉದಯ ನಾಯ್ಕ, ಸುರೇಶ ನಾಯ್ಕ, ವಿಶ್ವನಾಥ ಶೆಟ್ಟಿ, ಸವಿತಾ ನಾಯ್ಕ, ಆಶಾ ನಾಯ್ಕ, ನಾಗಪ್ಪ ನಾಯ್ಕ, ಈಶ್ವರ ಮೊಗೇರ, ನವನೀತ್ ನಾಯ್ಕ, ಜಗದೀಶ ನಾಯ್ಕ, ಜಗದೀಶ ಗೊಂಡ, ಸಹಕಾರಿ ಸಲಹೆಗಾರ ಐ.ಟಿ. ನಾಯ್ಕ, ಸಹಕಾರಿ ಧುರೀಣ ಎಂ.ಆರ್. ನಾಯ್ಕ ಮುಂತಾದವರಿದ್ದರು. ಮುಖ್ಯ ಕಾರ್ಯನಿರ್ವಾಹಕ ಕೃಷ್ಣ ಎಂ. ನಾಯ್ಕ ಸ್ವಾಗತಿಸಿ, ವರದಿ ವಾಚಿಸಿದರು. ಪ್ರಧಾನ ಕಚೇರಿ ವ್ಯವಸ್ಥಾಪಕ ವಿಶ್ವನಾಥ ನಾಯ್ಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು