ನರಗುಂದ: ಈಗ ಮಹಿಳೆಯರೇ ಹೆಚ್ಚಾಗಿ ಶಾಶ್ವತ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಪುರುಷರು ಕುಟುಂಬ ಕಲ್ಯಾಣ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತುಂಬಾ ಕಡಿಮೆ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ ಪಾಟೀಲ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನವರ ಮಾತನಾಡಿ, ಮಹಿಳೆಯರಿಗೆ ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆಯಾಗಿ ಮಕ್ಕಳ ಪಾಲನೆ-ಪೋಷನೆ, ಮಕ್ಕಳಿಗೆ ಲಸಿಕೆ ಕೊಡಿಸುವುದು, ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಸಂತಾನ ನಿಯಂತ್ರಣಕ್ಕಾಗಿ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳನ್ನು ಅಳವಡಿಸುವುದು - ಇವೆಲ್ಲವು ಮಹಿಳೆಯರಿಗಾಗಿಯೇ ಸೀಮಿತವಾಗಿವೆ. ಕುಟುಂಬದಲ್ಲಿ ಪುರುಷರ ಸಹಭಾಗಿತ್ವವೇ ಇಲ್ಲದಂತಾಗಿದೆ. ಕಾರಣ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ರಕ್ತಹೀನತೆಯಿಂದ ಬಳಲುತ್ತಿದ್ದಲ್ಲಿ, ಪುರುಷರು ಎನ್.ಎಸ್.ವಿ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಇದರ ಸದುಪಯೋಗವನ್ನು ಅರ್ಹ ಪುರುಷರು ಪಡೆದುಕೊಳ್ಳಲು ಆರೋಗ್ಯ ಇಲಾಖೆಯ ಸ್ಥಳೀಯ ಆಶಾ, ಆರೋಗ್ಯ ಸಿಬ್ಬಂದಿ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾಥಾ ಕಾರ್ಯಾಕ್ರಮವನ್ನು ಶ್ರೀ ಸಿದ್ದೇಶ್ವರ ಕಾಲೇಜನ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆಗಳನ್ನು ಕೂಗುತ್ತಾ, ಕರಪತ್ರಗಳನ್ನು ವಿತರಿಸುತ್ತಾ, ವಾಹನದಲ್ಲಿ ಮೈಕಿಂಗ್ ಮೂಲಕ ಜನ ಜಾಗೃತಿ ಮೂಡಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ನಾಗೇಶ ಅಪ್ಪೋಜಿ, ಸಿ.ಎಫ್. ಕುಂಬಾರ, ಎಂ.ಪಿ. ಶಿಗ್ಗಾಂವಕರ, ಶಿವಾನಂದ ಕುರಹಟ್ಟಿ, ಬಸವರಾಜ ಕೌಜಗೇರಿ, ಎ.ಎಂ. ಕಾಡದೇವರಮಠ, ಐ.ಬಿ. ಗುಳ್ಳನ್ನವರ, ರೇಖಾ ಹಿರೆಹೋಳಿ, ಭಾರತಿ ಮಾರಿಹಾಳ, ಅಶ್ವಿನಿ ಕುರಿ, ಲಕ್ಷ್ಮೀ ಮನಿಗೇನಿ, ಹನುಮಂತ ಭರಮಸಾಲಿ, ಎಫ್.ಎಚ್. ಹುಬ್ಬಳ್ಳಿ, ಆಶಾ ಕಾರ್ಯಕರ್ತೆಯರು ಮತ್ತು ಉಪನ್ಯಾಸಕರು ಇದ್ದರು.