ನೀರಿನ ಸದ್ಬಳಕೆಗೆ ಮಾನಸಿಕ ಆರೋಗ್ಯ ಮುಖ್ಯ

KannadaprabhaNewsNetwork |  
Published : Mar 25, 2024, 12:51 AM IST
ಮಾನಸಿಕ ಆರೋಗ್ಯ, ಹಸಿರು ಪರಿಸರ ರಕ್ಷಣೆ ಮತ್ತು  ನೀರಿನ ಸದ್ಬಳಕೆಗೆ ಬಗ್ಗೆ ಜಾಗೃತಿ ಮುಖ್ಯ : ಕಿರಣ್ ಪ್ರಸಾದ್ ರೈ  | Kannada Prabha

ಸಾರಾಂಶ

ಮಾನಸಿಕ ಆರೋಗ್ಯ ನೀರಿನ ಸದ್ಬಳಕೆ, ಹಸಿರು ಉಳಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಣೆ ಹಾಗೂ ನೀರಿನ ಸದ್ಬಳಕೆ ಮಾಡಿಕೊಳ್ಳಲು ಮೊದಲು ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ರೋಟರಿ ೩೧೮೧ರ ಮೆಡಲ್ ಆರೋಗ್ಯ ಮುಖ್ಯಸ್ಥ ರೋ. ಕಿರಣ್ ಪ್ರಸಾದ್ ರೈ ತಿಳಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ರೋಟರಿ ಜಿಲ್ಲೆ ೩೧೮೧ರ ಮುಖ್ಯಸ್ಥರು, ರೋಟರಿ ಸಂಸ್ಥೆ, ರೋಟರಿ ಸಿಲ್ಕ್‌ಸಿಟಿ ಹಾಗೂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಡೆದ ಮಾನಸಿಕ ಆರೋಗ್ಯ ನೀರಿನ ಸದ್ಬಳಕೆ ಮತ್ತು ಹಸಿರು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಜಿಲ್ಲೆ ೩೧೮೧ರಿಂದ ವಲಯ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಕುಂದೋಳ ಗಣೇಶ್ ಅವರ ಜಾದೂ ಮೂಲಕ ಪರಿಸರ ಸಂರಕ್ಷಣೆ ನೀರು ಸದ್ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇತ್ತಿಚಿನ ದಿನಗಳಲ್ಲಿ ನೀರು ಎಷ್ಟು ಮುಖ್ಯ ಎಂದು ಎಲ್ಲರಿಗೂ ಅರಿವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಮಾಡುವ ರೋಟರಿ ಅಭಿಯಾನಕ್ಕೆ ಎಲ್ಲರು ಕೈಜೋಡಿಸಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದಕ್ಕು ಮಿಗಲಾಗಿ ನಮ್ಮ ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಂಡರೆ ಎಲ್ಲವು ಸಾಧ್ಯವಾಗುತ್ತದೆ ಎಂದರು.

ರೋಟರಿ ಸಹಾಯಕ ಗವರ್ನರ್‌ ಆರ್. ಪ್ರಕಾಶ್ ಮಾತನಾಡಿ, ರೋಟರಿ ೩೧೮೧ರ ವಲಯದ ಎಲ್ಲಾ ಗವರ್ನರ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪರಿಸರ ಸಂರಕ್ಷಣೆ. ನೀರಿನ ಸದ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಜೆಎಸ್‌ಎಸ್ ಕಾಲೇಜು ಕ್ಯಾಂಪಸ್ ನಡೆದಿದೆ. ನಿಮ್ಮೆಲ್ಲರ ಆಶಯದ ಜೊತೆಗೆ ನಾವು ಸಹ ಕೈ ಜೋಡಿಸಿ ಪರಿಸರ ಸಂರಕ್ಷಣೆಯಲ್ಲಿ ಬದ್ದರಾಗಿದ್ದೇವೆ ಎಂದರು.

ಜಾದುಗಾರರಾದ ಕುಂದೋಳ್ ಗಣೇಶ್ ಜಾದೂ ಮೂಲಕ ನೀರಿನ ಸಂರಕ್ಷಣೆ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿ, ಆತ್ಮಹತ್ಯೆ ತಡೆಯಲು ಅನುಸರಿಸಬೇಕಾದ ಕ್ರಮವನ್ನು ಮಾನಸಿಕ ಶಕ್ತಿಯನ್ನು ವೃದ್ದಿಸಿಕೊಳ್ಳುವ ಕುರಿತು ಅರಿವು ಮೂಡಿಸಿದರು.

ಈ ವೇಳೆ ರೋಟರಿ ಜಿಲ್ಲಾ ಚೇರ್‍ಮನ್ ಆಫ್ ಪ್ರಾಜೆಕ್ಟ್ ರೋ. ಸತೀಶ್ ಬೋಲಾರ್, ಕಾಲೇಜಿನ ಪ್ರಾಂಶುಪಾಲ ಡಾ. ಮಹದೇವಸ್ವಾಮಿ, ರೋ. ಶುಭೋದಯ ಕುಮಾರ್ ದಾಸ್, ಜೋನ್ ೨ರ ಸಹಾಯಕ ಗವರ್ನರ್‌ ವಿನೋದ್ ಗುರುವಾ, ಜೋನ್ 3ರ ಸಹಾಯಕ ಗವರ್ನರ್‌ ರೊ. ಶಿವಾನಿ ಬಾಳಿಗ, ರೋ. ಪಿ.ಡಿ. ಶೆಟ್ಟಿ, ನರರೋಗ ತಜ್ಞರಾದ ಡಾ. ಅನಂತನ್, ರೋಟರಿ ಅಧ್ಯಕ್ಷ ಚಂದ್ರಪ್ರಭಜೈನ್, ಸಿಲ್ಕ್ ಸಿಟಿ ಅಧ್ಯಕ್ಷ ಅಕ್ಷಯಕುಮಾರ್, ಕಾರ್ಯದರ್ಶಿ ಅಬ್ದುಲ್ ಅಜೀಜ್, ಕಾರ್ಯದರ್ಶಿ ವಿನೋಧ್, ಪಿಆರ್‌ಒ ಆರ್.ಎಂ.ಸ್ವಾಮಿ. ರೋಟರಿಯನ್‌ಗಳಾದ ಜಿ.ಆರ್. ಆಶ್ವಥ್‌ನಾರಾಯಣ್, ಶ್ರೀನಿವಾಸ್‌ಶೆಟ್ಟಿ ಮತ್ತಿತರರಿದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ