ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ

KannadaprabhaNewsNetwork |  
Published : Oct 06, 2024, 01:32 AM IST
ಕಾರ್ಯಕ್ರಮವನ್ನು ವೈದ್ಯ ಡಾ. ಎನ್.ಎಸ್.ಬಿರಾದಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಸದೃಢ ಆರೋಗ್ಯದಿಂದ ಸದೃಢ ಮನಸ್ಸು ನಿರ್ಮಾಣವಾಗುವದು

ಗದಗ: ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆಧ್ಯಾತ್ಮಿಕ ವಿಚಾರ, ಪುರಾಣ ಪ್ರವಚನ ಆಲಿಸುವುದರಿಂದ ಮನುಷ್ಯ ಸಹಜವಾಗಿ ಸನ್ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ವೈದ್ಯ ಡಾ. ಎನ್.ಎಸ್. ಬಿರಾದಾರ ಹೇಳಿದರು.

ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ, ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಖ ಜೀವನಕ್ಕೆ ಬೇಕಿರುವದು ಮಾನಸಿಕ ನೆಮ್ಮದಿ, ಮನೋಶಾಂತಿ, ಚಟಮುಕ್ತ ಚಟುವಟಿಕಗಳಿಂದ ಆಧ್ಯಾತ್ಮಿಕ ಚಿಂತನ, ಯೋಗ, ಧ್ಯಾನ, ಲಘು ವ್ಯಾಯಾಗ, ಲಘು ಸಂಗೀತ ಆಲಿಕೆಯಿಂದ ಸದೃಢ ಆರೋಗ್ಯ ಕಾಯ್ದುಕೊಳ್ಳಬಹುದು. ಸದೃಢ ಆರೋಗ್ಯದಿಂದ ಸದೃಢ ಮನಸ್ಸು ನಿರ್ಮಾಣವಾಗುವದು ಎಂದರು.

ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ದೇವಿ ಪೂಜೆ ಎಂದರೆ ಅದು ದೇಹದ ಪೂಜೆ ಎಂದರ್ಥ. ನಾವು ನಮ್ಮ ಆತ್ಮಾವಲೋಕ, ಮನಶುದ್ಧೀಕರಣ ಮಾಡಿಕೊಳ್ಳುವ ಮೂಲಕ ಧರ್ಮದ ಪಥದಲ್ಲಿ ಮುನ್ನಡೆಯಬೇಕು ಅಂತಹ ಸನ್ಮಾರ್ಗ ಅಡವೀಂದ್ರ ಮಠ ಶಿವಾನುಭವ, ಪುರಾಣ, ಪ್ರವಚನ- ಜಾತ್ರಾ ಕಾರ್ಯಕ್ರಮಗಳ ಮೂಲಕ ಜನಮನದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಿದೆ ಎಂದರು.

ಈ ವೇಳೆ ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ, ಚನ್ನಬಸಯ್ಯಶಾಸ್ತ್ರಿ ಹೇಮಗಿರಿಮಠ ಅವರಿಂದ ಪುರಾಣ ಪಠಣ, ಸುಕ್ರುಸಾಬ್‌ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಜಿ. ಭಜಂತ್ರಿ ಅವರ ಸಂಗೀತ ಕಲಾ ಬಳಗದಿಂದ ಸಂಗೀತ ಜರುಗಿತು.

ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸಮ್ಮುಖ ವಹಸಿದ್ದರು. ಅರವಿಂದ ವಸ್ತ್ರದ, ಲಲಿತಾ ವಸ್ತ್ರದ, ಶೋಭಾ ಬಿರಾದಾರ ಇದ್ದರು. ಯಶೋಧಾ ಗಿಡ್ನಂದಿ ಸ್ವಾಗತಿಸಿದರು. ಜಿ.ಎಂ. ಯಾನಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗೀತಾ ಹೂಗಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌