ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಳಲು ಗ್ರಾಮದಲ್ಲಿ ಕಳೆದ ಸೆ.೧೭ರಂದು ಮೈಕ್ರೋ ಫೈನಾನ್ಸ್ನವರು ಸಾಲ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಣಿಕೆ ಹಗ್ಗದಿಂದ ನೇಣು ಬಿಗಿದುಕೊಳ್ಳುವ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
ಇತ್ತೀಚೆಗೆ ಹೆಣ್ಣುಮಕ್ಕಳು ಮೈಕ್ರೋಫೈನಾನ್ಸ್ ಸೇರಿದಂತೆ ಸಣ್ಣ ಸಣ್ಣ ಖಾಸಗಿ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದಾರೆ. ಆದರೆ, ಸರ್ಕಾರವು ಸಾಲ ನೀಡಿ ಮಹಿಳೆಯರ ಹಾಗೂ ಬಡ ಕುಟುಂಬದವರ ನೆರವಿಗೆ ಬರುತ್ತಿತ್ತು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಸುಮಾರು ೨೦ ಖಾಸಗಿ ಫೈನಾನ್ಸ್ಗಳು ಇಡೀ ಗ್ರಾಮವನ್ನೇ ಆವರಿಸಿಕೊಂಡಿದೆ. ರಾಜ್ಯದಲ್ಲಿ ಸಾವಿರಾರು ಗ್ರಾಮಗಳನ್ನೇ ಆವರಿಸಿಕೊಂಡಿವೆ ಎಂದು ನುಡಿದರು.ಮೈಕ್ರೋಫೈನಾನ್ಸ್ನಿಂದ ಸಾಲ ಪಡೆದ ಕೆಂಪಮ್ಮ ಅವರು ಕೇವಲ ಜಾಮೀನು ನೀಡಿದ್ದಾರೆ. ಸಂಘದವರು ಈ ಹೆಣ್ಣುಮಗಳಿಗೆ ಹಣ ಕಟ್ಟುವಂತೆಯೂ ಪೀಡಿಸಿದ್ದಾರೆ. ಸಾಲ ಪಡೆದಾಕೆ ಗ್ರಾಮವನ್ನೇ ತೊರೆದಿದ್ದಾಳೆ. ಆದರೆ, ಈ ಹೆಣ್ಣುಮಗಳಿಗೆ ಸಾಲ ಕಟ್ಟುವಂತೆ ಒತ್ತಾಯ ಮಾಡಿ ನೀನು ಸತ್ತರೆ ಇನ್ಶೂರೆನ್ಸ್ ಹಣ ಬರುತ್ತದೆ ಎಂದು ಹೇಳಿದ್ದಾರೆಂಬ ಆರೋಪ ಕೇಳಿಬಂದಿದೆ ಎಂದು ವಿವರಿಸಿದರು.
ಕಂತಿನ ಹಣದ ರೂಪದಲ್ಲಿ ಸಾಲ ಪಡೆದ ಮೇಲೆ ವಾರಕ್ಕೊಮ್ಮೆ ಕಟ್ಟಬೇಕಂತೆ, ತಪ್ಪಿದರೆ ಬಡ್ಡಿಗೆ ಬಡ್ಡಿ ಹಾಕಿ ವಸೂಲಿ ಮಾಡುತ್ತಾರೆ. ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೋ ಅಥವಾ ಅನಾರೋಗ್ಯಕ್ಕಿಡಾದವರಿಗೆ ಚಿಕಿತ್ಸೆ ಕೊಡಿಸಲು ಸಾಲ ಪಡೆದಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಫೈನಾನ್ಸ್ ಅವರು ಹಣ ವಸೂಲಿಗಾಗಿ ತೀರಾ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಏನರ್ಥ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.