ಕನ್ನಡಪ್ರಭ ವಾರ್ತೆ ಚಡಚಣ
ಪ್ರೊ.ಎಸ್.ಎಸ್.ಪೂಜಾರಿ, ಪ್ರಾಚಾರ್ಯ ಬಸವರಾಜ ಸಾವಕಾರ ಮಾತನಾಡಿ, ಸಹಕಾರ ಸಂಘಗಳು ಹುಟ್ಟು ಬೆಳವಣಿಗೆ ಕುರಿತು ವಿವರಿಸಿದರು. ಸಹಕಾರ ಸಂಘಗಳು ರೈತರ ಬೆನ್ನೆಲುಬುವಾಗಿ ಆರ್ಥಿಕ ಸಹಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.
ಕನ್ನೂರು ಗುರುಮಠದ ಸೋಮಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಶ್ರೀ ರೇವಣಸಿದ್ಧೇಶ್ವರ ಸೊಸೈಟಿ ಮತ್ತು ಸಹಕಾರ ಸಂಘಗಳು ಬೆಳವಣಿಗೆ ಹೊಂದಲು ಪರಸ್ಪರ ಸಹಕಾರ ಮುಖ್ಯವಾಗಿದೆ. ಆದ್ದರಿಂದ ಸದಸ್ಯ ಮತ್ತು ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿದಾಗ ಸಂಘಗಳು ಪ್ರಗತಿ ಪಥ ಕಂಡು, ಸಾಲ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.ಮುಖಂಡರಾದ ಗೋಪಾಲಗೌಡ, ಶ್ರೀಮಂತ ಇಂಡಿ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರವಹಿಸಿವೆ. ಸಹಕಾರ ಸಂಘಗಳಿಗೆ ಸದಸ್ಯ ಮತ್ತು ಗ್ರಾಹಕರು ಸಂಘದ ಜೀವಾಳವಿದ್ದಂತೆ ಎಂದರು.
ವಿಜಯಪೂರದ ವಿ.ಎಂ.ಬಾಗಾಯತ ಮಾತನಾಡಿ, ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಸೊಸೈಟಿ ಅಧ್ಯಕ್ಷ ಅಣ್ಣಪ್ಪ ಖೈನೂರ ಅವರು, ಈ ಭಾಗದ ಕೆರೆಗಳಿಗೆ ನೀರು ಹರಿಸುವ ಹೋರಾಟಗಾರರಾಗಿ ಶಿಕ್ಷಣ, ಸಾಮಾಜಿಕ ಹೋರಾಟಗಾರರಾಗಿ ನೇತೃತ್ವ ವಹಿಸಿದ್ದಾರೆ ಎಂದರು.ಸಭೆಯಲ್ಲಿ ತಾಂಬಾದ ಚಂದ್ರಶೇಖರ ಗೌಡ, ರಮೇಶಗೌಡ ಬಿರಾದಾರ, ಶ್ರೀಶೈಲ ಶಿವೂರ, ಎಂ.ಎಂ.ಸೋಫೇಘರ, ಮಲ್ಲಿಕಾರ್ಜುನ ಮೆಡೆಗಾರ, ಶಿವಲಿಂಗಪ್ಪ ಜಂಗಮಶೆಟ್ಟಿ, ಬುದ್ದಪ್ಪ ಭೋಸಗಿ, ರೇವಪ್ಪ ಖೈನೂರ, ಜನಗೊಂಡ ಪೂಜಾರಿ, ಬಸವರಾಜ ಜಂಬಗಿ, ಮಲ್ಲು ಬಬಲಾದ, ಸೊಸೈಟಿ ನಿರ್ದೇಶಕರು ಹಾಗೂ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಮಲ್ಲು ಬಬಲಾದ ಸ್ವಾಗತಿಸಿದರು, ಬಸವರಾಜ ಜಂಬಗಿ ನಿರೂಪಿಸಿದರು, ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ತೇಲಿ ವಂದಿಸಿದರು.