ಇತಿಹಾಸದ ಮೈಲುಗಲ್ಲು: ಕೋಟಿ ಗೀತೆ ಲೇಖನ, ಇದು ಪರ್ಯಾಯ ವಿಶೇಷ

KannadaprabhaNewsNetwork |  
Published : Jan 17, 2024, 01:48 AM IST
ಫೋಟೋ ಃ ಗೀತಾದೀಕ್ಷೆ | Kannada Prabha

ಸಾರಾಂಶ

ಗುರುವಾರ ಉಡುಪಿಯಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವ ನಡೆಯಲಿದೆ. ಮುಂದಿನ 2 ವರ್ಷಗಳ ಕಾಲ ಇತ್ತ ಗೀತಾಪುರುಷ ಶ್ರೀಕೃಷ್ಣನನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪೂಜಿಸಿದರೆ, ಅತ್ತ ಕೋಟಿ ಮನೆಗಳಲ್ಲಿ ಗೀತಾಯಜ್ಞ ನಡೆಯಲಿದೆ. ಆದ್ದರಿಂದ ಉಡುಪಿಯ ಇತಿಹಾಸದಲ್ಲಿ ಈ ಬಾರಿಯ, ಪುತ್ತಿಗೆ ಮಠದ ಪರ್ಯಾಯೋತ್ಸವವು ವಿಶಿಷ್ಟ ಮೈಲುಗಲ್ಲಾಗಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ವರ್ಷದಿಂದ ವರ್ಷಕ್ಕೆ ಉಡುಪಿಯ ದ್ವೈವಾರ್ಷಿಕ ಪರ್ಯಾಯೋತ್ಸವ ಪ್ರಸಿದ್ಧಿ ಪಡೆಯುತ್ತಿದೆ. ಈ ಬಾರಿಯಂತೂ ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯ, ವಿಶ್ವವೇ ಈ ಪರ್ಯಾಯದಲ್ಲಿ ಭಾಗಿಯಾಗುತ್ತಿದೆ.

ಇದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವ ಎನ್ನುವುದು ಒಂದು ಕಾರಣವಾದರೇ, ವಿಶ್ವದಾದ್ಯಂತ ಭಕ್ತಾಭಿಮಾನಿಗಳನ್ನು ಪಡೆದಿರುವ ಶ್ರೀಗಳ ಪರ್ಯಾಯ ಎನ್ನುವುದು ವಿಶ್ವಪ್ರಸಿದ್ಧಿಗೆ ಇನ್ನೊಂದು ಕಾರಣವಾಗಿದೆ.ಪುತ್ತಿಗೆ ಮಠದ ಈ ಹಿಂದಿನ ಪರ್ಯಾಯೋತ್ಸವಗಳೂ ವಿಭಿನ್ನ ವೈಶಿಷ್ಟ್ಯಮಯವಾಗಿದ್ದವು. ಈ ಬಾರಿ ಶ್ರೀಗಳು ಒಂದು ಕೋಟಿ ಕೃಷ್ಣ ಭಕ್ತರಿಂದ ಗೀತೆಯನ್ನು ಬರೆಯಿಸಿ ಅದನ್ನು ಕೃಷ್ಣನಿಗೆ ಅರ್ಪಿಸುವ, ಆ ಮೂಲಕ ವಿಶ್ವಶಾಂತಿಯನ್ನು ಪ್ರಾರ್ಥಿಸುವ ಅತ್ಯಂತ ಅಪೂರ್ವ ಮತ್ತು ಈ ಕಾಲಕ್ಕೆ ಅಗತ್ಯವಾಗಿರುವ ಸಂಕಲ್ಪವನ್ನು ಕೈಗೊಂಡಿದ್ದಾರೆ.

ಭಗವದ್ಗೀತೆ ಆಸ್ತಿಕರ ಪಾಲಿಗೆ ನಿತ್ಯ ಪೂಜನೀಯವೂ, ಫಲದಾಯಕವೂ ಆಗಿರುವಂತಹದ್ದು, ಅಂತಹ ಗೀತೆಯನ್ನು ಬರೆಯುವುದು ಎಂದರೆ ಅದೂ ಪೂಜೆಯೇ ಆಗಿದೆ. ಒಂದು ಕೋಟಿಗೂ ಹೆಚ್ಚು ಭಕ್ತರು ನಿತ್ಯವೂ ವ್ರತದಂತೆ ಗೀತೆಯನ್ನು ಬರೆಯುತ್ತಾರೆ ಎಂದರೆ ಆ ಮೂಲಕ ಕೋಟಿ ಮನೆಗಳಲ್ಲಿ ನಿತ್ಯವೂ ಗೀತೆಯ ಮೂಲಕ ಕೃಷ್ಣನ ಪೂಜೆಯಾಗುತ್ತದೆ. ಅದರ ಫಲ ಕೋಟಿಕೋಟಿ ಮನ - ಮನೆಗಳಲ್ಲಿ ನೆಮ್ಮದಿಗೆ, ಆ ಮೂಲಕ ವಿಶ್ವದ ಶಾಂತಿಗೆ ಕಾರಣವಾಗುತ್ತದೆ ಎನ್ನುವುದು ಶ್ರೀಗಳ ಈ ಮಹತ್ಪಪೂರ್ಣ ಸಂಕಲ್ಪದ ಆಶಯವಾಗಿದೆ.

ಈಗಾಗಲೇ ಶ್ರೀಗಳು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಗೀತಾಯಜ್ಞದಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತರಿಗೆ ದೀಕ್ಷೆಯನ್ನು ನೀಡಿದ್ದಾರೆ ಮತ್ತು ಲೇಖನಯಜ್ಞಕ್ಕೆ ಪುಸ್ತಕಗಳನ್ನು ವಿತರಿಸಿದ್ದಾರೆ.

ಮುಂದಿನ 2 ವರ್ಷಗಳ ಕಾಲ ಇತ್ತ ಗೀತಾಪುರುಷ ಶ್ರೀಕೃಷ್ಣನನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪೂಜಿಸಿದರೆ, ಅತ್ತ ಕೋಟಿ ಮನೆಗಳಲ್ಲಿ ಗೀತಾಯಜ್ಞ ನಡೆಯಲಿದೆ. ಆದ್ದರಿಂದ ಉಡುಪಿಯ ಇತಿಹಾಸದಲ್ಲಿ ಈ ಬಾರಿಯ, ಪುತ್ತಿಗೆ ಮಠದ ಪರ್ಯಾಯೋತ್ಸವವು ವಿಶಿಷ್ಟ ಮೈಲುಗಲ್ಲಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ