ಬಾರಿ ಮಳೆಗೆ ನೆಲಕ್ಕೆ ಬಾಗಿದ ರಾಗಿ ಬೆಳೆ: ಆತಂಕದಲ್ಲಿ ರೈತ

KannadaprabhaNewsNetwork |  
Published : Oct 25, 2025, 01:00 AM IST
ಪೋಟೋ 1 :  ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ರಾಗಿ ಬೆಳೆ ನೆಲ ಕಚ್ಚಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರು ಮಳೆ ಗಾಳಿಯಿಂದಾಗಿ ರಾಗಿ ಬೆಳೆ ನೆಲ ಕಚ್ಚಿದ್ದು ಅಪಾರ ಪ್ರಮಾಣದ ಫಸಲು ನಷ್ಟದ ಹಾದಿಯಲ್ಲಿದೆ. ತೇವಾಂಶಕ್ಕೆ ರಾಗಿ ತೆನೆಗಳು ನೆಲದಲ್ಲೇ ಮೊಳಕೆ ಬರುತ್ತಿದ್ದು ಕೊಯ್ಲಿಗೆ ಬಂದ ರಾಗಿ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರು ಮಳೆ ಗಾಳಿಯಿಂದಾಗಿ ರಾಗಿ ಬೆಳೆ ನೆಲ ಕಚ್ಚಿದ್ದು ಅಪಾರ ಪ್ರಮಾಣದ ಫಸಲು ನಷ್ಟದ ಹಾದಿಯಲ್ಲಿದೆ. ತೇವಾಂಶಕ್ಕೆ ರಾಗಿ ತೆನೆಗಳು ನೆಲದಲ್ಲೇ ಮೊಳಕೆ ಬರುತ್ತಿದ್ದು ಕೊಯ್ಲಿಗೆ ಬಂದ ರಾಗಿ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ನೆಲಮಂಗಲ ತಾಲೂಕಿನಲ್ಲಿ ಒಟ್ಟು 18,795 ಹೆಕ್ಟೇರ್ ರಾಗಿ ಬೆಳೆಯಲಾಗಿದೆ. ಕೆಲವರು ಉತ್ತಮ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ್ದು ಅವುಗಳಲ್ಲಿ ಬಹುತೇಕ ತೆನೆ ಕಟ್ಟಿವೆ. ಇನ್ನೊಂದು ತಿಂಗಳಲ್ಲಿ ಪೂರ್ಣ ಬೆಳೆ ಕೈಗೆ ಸಿಗಲಿದ್ದ ರಾಗಿ, ಸತತ ಮಳೆಯ ಪರಿಣಾಮ ರಾಗಿ ಬೆಳೆ ನೆಲ ಕಚ್ಚಿವೆ. ಒಂದಕ್ಕೊಂದು ತಾಗಿಕೊಂಡು ಬಿದ್ದಿರುವ ರಾಗಿ ಪೈರಿನಲ್ಲಿ ತೆನೆಗಳು ಸಿಕ್ಕಿಕೊಂಡಿದ್ದು, ಬಿಡಿಸಿದರೂ ರಾಗಿ ಉದುರಿ ನೆಲಕ್ಕೆ ಬೀಳುತ್ತಿದೆ. ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇದೇ ರೀತಿಯ ಮುಂದೆ ಮಳೆ ಮುಂದುವರಿದರೆ ರಾಗಿ ಬೆಳೆಗೆ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆಯಿದೆ. ಶೇ.30ಕ್ಕೂ ಹೆಚ್ಚು ಪ್ರಮಾಣದಲ್ಲಿ ಈಗಾಗಲೇ ರಾಗಿ ಫಸಲು ಕೈಗೆ ಬರುವಂತಾಗಿದ್ದು ಇನ್ನೂ ಶೇ.70ರಷ್ಟು ಫಸಲು ಅಂತಿಮ ಹಂತದಲ್ಲಿದೆ. ಈ ಹಂತದಲ್ಲಿ ಸತತ ಮಳೆಯಾದರೆ ರಾಗಿ ಫಸಲು ನಷ್ಟಕ್ಕೆ ಒಳಗಾಗಲಿದೆ. ನೆಲ ಕಚ್ಚಿರುವ ರಾಗಿ ಪೈರನ್ನು ಎತ್ತಿಕಟ್ಟುವ ಕಾರ್ಯವಾಗಬೇಕು. ಆದರೆ ಬೆಳೆಗಾರರು ಹೊಲಗಳ ಒಳಗೆ ಹೋಗಲಾರದಂತ ಸ್ಥಿತಿಯಲ್ಲಿ ಚಾಪೆ ರೀತಿಯಲ್ಲಿ ರಾಗಿ ಪೈರು ಮಲಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ದೇವರು ವರ ಕೊಟ್ಟರು ಪೂಜಾರಿ ವರ ಕೊಡುವುದಿಲ್ಲ ಎನ್ನುವ ಹಾಗೆ ಕೈಗೆ ಬಂದ ಬೆಳೆ ಇನ್ನೇನು ಬಾಯಿಗೆ ಬರುತ್ತದೆ ಎನ್ನುವಷ್ಟರಲ್ಲಿ ಮಳೆ ಬಂದು ಮಣ್ಣು ಪಾಲು ಮಾಡುತ್ತಿದ್ದು ಕಂಗಾಲಾಗಿರುವ ರೈತ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾನೆ.

ಕೋಟ್......

ಮಳೆ ಬಿದ್ದ ಪರಿಣಾಮ ತೂಕಕ್ಕೆ ನೆಲಕ್ಕೆ ಬಾಗಿದೆ. ಬಿಸಿಲು ಬಂದ ಮೇಲೆ ಮೇಲಕ್ಕೇಳಲಿದ್ದು ಸದ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ.

-ಸಿದ್ದಲಿಂಗಯ್ಯ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ನೆಲಮಂಗಲ

ಕೋಟ್.......

ಮುಂಗಾರು ಮಳೆ ಚೆನ್ನಾಗಿ ಬಿದ್ದ ಪರಿಣಾಮ ರಾಗಿ ಬೆಳೆಯೂ ಚೆನ್ನಾಗಿ ಬಂದಿದೆ. ಉತ್ತಮವಾಗಿ ತೆನೆಯೂ ಕಟ್ಟುತ್ತಿದೆ. ಆದರೆ ಮಳೆ ಬಿದ್ದ ಪರಿಣಾಮ ತೆನೆಗಳು ನೆಲಕ್ಕೆ ಬಾಗಿದ್ದು, ಹುಲ್ಲು ಕೊಳೆಯುವ ಪರಿಸ್ಥಿತಿ ಬರಲಿದೆ. ಫಸಲು ಹಾಳಾಗುವ ಆತಂಕ ಎದುರಾಗಿದೆ.

-ಮಂಜಣ್ಣ, ರೈತ, ಐಸಾಮಿಪಾಳ್ಯ

ಪೋಟೋ 1 :

ನೆಲಮಂಗಲ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ರಾಗಿ ಬೆಳೆ ನೆಲ ಕಚ್ಚಿರುವ ರಾಗಿ ಬೆಳೆ.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ