ಕನ್ನಡಪ್ರಭ ವಾರ್ತೆ ನಾಗಮಂಗಲ
ಬಿಹಾರ್ ರಾಜ್ಯದ ಮಧುಬನಿ ಜಿಲ್ಲೆಯ ನಗ್ದಬಲೈನ್ ತಾಲೂಕಿನ ಕುಸುಮುಲ್ ಗ್ರಾಮದ ಲತ್ತರ್ ಮುಖಿಯಾ ಪುತ್ರ ಶಂಕರ್ಮುಖಿಯಾ(23) ಬಂಧಿತ ಆರೋಪಿ.
ತಾಲೂಕಿನ ಬೆಳ್ಳೂರು ಹೋಬಳಿಯ ವರಾಹಸಂದ್ರ ಗ್ರಾಮದ ಪ್ರಮೀಳ ಮತ್ತು ಸತೀಶ್ ದಂಪತಿ ಮನೆಯಲ್ಲಿ ಬಿಹಾರ ಮೂಲದ ಶಂಕರ್ಮುಖಿಯಾ ಕೂಲಿ ಕೆಲಸ ಮಾಡಿಕೊಂಡಿದ್ದನು. ಸತೀಶ್ಗೆ ಆರೋಗ್ಯ ಸಮಸ್ಯೆ ಕಂಡುಬಂದ ಹಿನ್ನೆಲೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪ್ರಮೀಳ ತನ್ನ ಪತಿ ಸತೀಶ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಅಲ್ಲಿಯೇ ಇದ್ದರು.ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮೇಲಿನ ಹೆಂಚುಗಳನ್ನು ತೆಗೆದು ಬೀರುವಿನಲ್ಲಿದ್ದ 9.35 ಲಕ್ಷ ರು. ಮೌಲ್ಯದ 170 ಗ್ರಾಂ. ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ಸತೀಶ್ ಪತ್ನಿ ಪ್ರಮೀಳ ಫೆ.12ರಂದು ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಪರಾಧ ಪತ್ತೆ ತಂಡದ ಪೊಲೀಸರು ಆರೋಪಿ ಶಂಕರ್ ಮುಖಿಯಾನನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಫೆ.13ರಂದು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿ ಕಳ್ಳತನ ಮಾಡಿದ್ದ ಚಿನ್ನದ ಒಡವೆಗಳನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಬೆಳ್ಳೂರು ಠಾಣೆಯ ಪಿಎಸ್ಐ ಬಸವರಾಜ ಚಿಂಚೋಳಿ, ಅಪರಾಧ ವಿಭಾಗದ ಪಿಎಸ್ಐ ಪುನೀತ್, ಸಿಬ್ಬಂದಿ ಕೆ.ವಿ.ಪ್ರಶಾಂತ್ ಕುಮಾರ್, ಬಿ.ಕೆ.ಕಿರಣ್ ಕುಮಾರ್, ಶಂಕರನಾಯ್ಕ, ರವಿಕಿರಣ್ ಮತ್ತು ಲೋಕೇಶ್ ಕರ್ತವ್ಯ ನಿರ್ವಹಿಸಿದ್ದರು.