ಕನ್ನಡಪ್ರಭ ವಾರ್ತೆ ಸಕಲೇಶಪುರ
ಏಕ್ರೀ ಪರವನಾಗಿ ನೀಡುತ್ತಿಲ್ಲ. ನಿಯಮಬದ್ಧವಾಗಿ ನಡೆಯುವ ಹೋಂಸ್ಟೇಗಳಿಗೆ ಪರವನಾಗಿ ನೀಡಿ. ನಿವೇ ಕಾನೂನು ಬಾಹಿರವಾಗಿ ನಡೆಸಲು ಅವಕಾಶ ಮಾಡುತ್ತಿರಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಸೂಚಿಸಿದರು. ಆರ್ಆರ್ಟಿ ಕಡತ:
ಏನ್ರೀ ಇಷ್ಟೊಂದು ಆರ್ಆರ್ಟಿ ಕಡತ ಬಾಕಿ ಇಟ್ಟುಕೊಂಡಿದ್ದೀರ. ಮೊನ್ನೆ ಚನ್ನರಾಯಪಟ್ಟಣದಲ್ಲಿ ನಡೆದ ಸಭೆಯಲ್ಲೆ ಕಡತ ವಿಲೇವಾರಿಗೆ ಸೂಚಿಸಿದ್ದೇನೆ, ಆದರೂ ಎಚ್ಚೆತ್ತುಕೊಂಡಿಲ್ಲ ಎಂದರೆ ಏನರ್ಥ, ನಾನು ಬೇರೆ ತರಹದಲ್ಲೆ ಹೇಳಬೇಕಾಗುತ್ತದೆ. ಇಲ್ಲಿ ಸಾರ್ವಜನಿಕರಿದ್ದಾರೆಂದು ಸುಮ್ಮನಿದ್ದೇನೆ. ಕಡತಗಳ ಬೇಗ ವಿಲೇವಾರಿ ಮಾಡಿ ಇಲ್ಲವೆಂದರೆ ಗಾಳಿ ಬಿಡಿಸಬೇಕಾಗುತ್ತದೆ ಎಂದು ತಾಲೂಕು ಶಿರಸ್ತೇದಾರ್ ರವಿಕುಮಾರ್ ಅವರಿಗೆ ಸೂಚಿಸಿದರು. ೯೪ಸಿ ಹುಲ್ಲಬನ್ನಿ ಇದ್ದರೂ ಕೊಡಿ೯೪ ಸಿ ಅರ್ಜಿಗೆ ಹುಲ್ಲಬನ್ನಿ ಖಾರಬು ಎಂಬ ಕಾರಣಕ್ಕೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹುಲ್ಲಬನ್ನಿ ಖರಾಬಿಗೂ ಹಕ್ಕುಪತ್ರ ನೀಡ್ರಿ ಎಂದು ತಹಸೀಲ್ದಾರ್ಗೆ ಸೂಚಿಸಿದರು.ಸಭೆಯಲ್ಲಿ ೧೧೧೦ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು ಬಹುತೇಕ ಕಂದಾಯ ಇಲಾಖೆ ಸೇರಿದ್ದ ಅರ್ಜಿಗಳಾಗಿದ್ದು ವಿಶೇಷ. ಮಧ್ಯಾಹ್ನ ೧೨ ಗಂಟೆಗೆ ಆರಂಭವಾದ ಸಭೆ ಊಟಕ್ಕೂ ಬಿಡುವು ನೀಡದಂತೆ ಸಂಜೆ ಏಳರವರೆಗೆ ಸಭೆ ನಡೆಯಿತು. ವೇದಿಕೆಯಲ್ಲೇ ತಹಸೀಲ್ದಾರ್ ಸೇರಿದಂತೆ ಹಲವರು ಲಘು ಉಪಹಾರ ಸೇವಿಸಿದರು.ವೇದಿಕೆಯಲ್ಲಿ ಸಂಸದ ಶ್ರೇಯಸ್ಪಟೇಲ್. ಶಾಸಕರಾದ ಸೀಮೆಂಟ್ ಮಂಜು,ಶಿವಲಿಂಗೇಗೌಡ,ಮಾಜಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ.ಜಿಲ್ಲಾಧಿಕಾರಿ ಲತಾಕುಮಾರಿ. ಕಾಂಗ್ರೆಸ್ ಮುಖಂಡ ಮುರುಳಿಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
------------------------------------------------- ಸಭೆ ಸ್ವಾರಸ್ಯ ನಲ್ಲುಲ್ಲಿ ಸಮಸ್ಯೆಜಮೀನು ಹಂಚಿಕೆಗೆ ಸಹೋದರರ ಅಸಹಕರ ತೊರುತ್ತಿದ್ದಾರೆಂದು ನಲ್ಲುಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಸಭೆಯಲ್ಲಿ ಹೇಳಿದರು ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಣ್ತಮ್ಮಂದಿರ ಸಮಸ್ಯೆ ಬಗೆಹರಿಸುವುದು ನಮ್ಮ ಕೆಲಸವಲ್ಲ. ಸಾರ್ವಜನಿಕರ ಕೆಲಸ ಮಾಡಲೇ ನಮಗೆ ಸಮಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಿವೇನು ಸೂಪರ್ ಮ್ಯಾನಾ
ಜಿ.ಪಂ ಮಾಜಿ ಸದಸ್ಯ ಪರ್ವತಯ್ಯ ಸಮಸ್ಯೆ ನಿವೇದಿಸಲು ಸರತಿ ಬಿಟ್ಟು ವೇದಿಕೆಯ ಮೇಲೆ ಹತ್ತಿದರು. ಇದರಿಂದ ಸಿಟ್ಟಾದ ಸಚಿವರು ನಿವೇನು ಸೂಪರ್ ಮ್ಯಾನ್ ಲೈನಲ್ಲಿ ಬನ್ನಿ ಅಷ್ಟೊಂದು ಮಹಿಳೆಯರಿದ್ದಾರೆ ಎಂದರು. ಟೊಕನ್ ಪಡೆಯಿರಿಅರ್ಜಿ ಸಲ್ಲಿಸಿ ಟೋಕನ್ ಪಡೆಯದೆ ವೇದಿಕೆ ಹತ್ತಿದ ವ್ಯಕ್ತಿ ಸಮಸ್ಯೆ ನಿವೇದೆನೆಗೆ ಮುಂದಾದರುಇದಕ್ಕೆ ಸಿಡಿಮಿಡಿಕೊಂಡ ಸಚಿವರು ಮೊದಲುಟೋಕನ್ತೆಗೆದುಕೊಂಡು ಬನ್ನಿ ಎಂದು ವೇದಿಕೆಯಿಂದ ಕೇಳಗಿಳಿಸಿದರು. ನಾವು ತಲೆತಗ್ಗಿಸಬೇಕು
ನಕಾಶೆಯಲ್ಲಿದಾರಿ ಇದೆ ರಸ್ತೆ ಬಿಡಿಸಿಕೊಂಡಿ ಎಂದರೆ ಕೆಲಸ ಮಾಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಏನಮ್ಮ ಕಾನೂನಿಲ್ಲಿರುವ ಕೆಲಸವನ್ನು ಮಾಡದಿದ್ದರೆ ಹೇಗೆ ಸುಮ್ಮನೇ ನಿಮ್ಮಿಂದ ನಾವು ತಲೆತಗ್ಗಿಸ ಬೇಕು ಎಂದು ತಹಸೀಲ್ದಾರ್ ಸುಪ್ರೀತಾ ವಿರುದ್ದ ಅಸಮಾಧನ ಹೊರಹಾಕಿದರು.