ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಆಶ್ರಯ ವಸತಿ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳನ್ನು ವಿತರಿಸಲು ಮಂಗಳವಾರ ವಸತಿ ಸಚಿವ ಜಮೀರ್ ಅಹಮ್ಮದ್ ಬರಬೇಕಾಗಿತ್ತು. ಆದರೆ, ಸಚಿವ ಮಧು ಬಂಗಾರಪ್ಪ ಮಂತ್ರಿಗಳು ಬರುವುದನ್ನು ತಡೆದಿದ್ದಾರೆ. ಈ ದುಷ್ಟಬುದ್ಧಿ ಯಾಕೆ ? ಇದು ಯಾವ ಪುರುಷಾರ್ಥಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಮಧು ಶಿವಮೊಗ್ಗದ ರಾಜಕೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆ. ಅವರು ತಮ್ಮ ನಾಲಿಗೆ ಮೇಲೆ ಹಿಡಿತ ಸಾಧಿಸಲಿ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವ ಸಂಚು ಬಿಡಬೇಕು. ಸಚಿವರ ಉದ್ಧಟತನಕ್ಕೆ ಉತ್ತರ ಕೊಡುವುದು ನಮಗೂ ಗೊತ್ತಿದೆ ಎಂದರು.ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಶಿಷ್ಟಾಚಾರದ ಉಲ್ಲಂಘನೆ ಮಾಡುತ್ತಿದ್ದಾರೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಅಥವಾ ಸಭೆಗಳು ಇರುವಾಗ ಕರಪತ್ರದಲ್ಲಿ ಔಪಚಾರಿಕವಾಗಿ ಹೆಸರನ್ನು ಹಾಕುತ್ತಾರೆ ಅಷ್ಟೇ. ಆದರೆ, ಅದನ್ನು ಅಧಿಕೃತವಾಗಿ ನಮಗೆ ತಲುಪಿಸುವುದಿಲ್ಲ. ನಮಗೆ ಆಹ್ವಾನ ಕೂಡ ಮಾಡದೇ, ಕಾರ್ಯಕ್ರಮದ ಬಗ್ಗೆ ತಿಳಿಸದೇ ಅವಮಾನ ಮಾಡುತ್ತಿದ್ದಾರೆ. ಇದು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಿಗೆ, ಸಂಸದರಿಗೂ ಈ ರೀತಿಯ ಅನುಭವವಾಗಿದೆ. ಆದ್ದರಿಂದ ಇದರ ವಿರುದ್ಧ ಸದನದ ಕಲಾಪದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ.ಮೋಹನ್ ರೆಡ್ಡಿ, ದೀನದಯಾಳ್, ಮಂಜುನಾಥ್ ನವಿಲೆ, ಕೆ.ವಿ.ಅಣ್ಣಪ್ಪ, ಶ್ರೀನಾಗ್ ಇದ್ದರು.ಖರ್ಗೆ ಹಿಂದೂಗಳ ಭಾವನೆ ಕೆರಳಿಸಿದ್ದಾರೆ
ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭ ಮೇಳಕ್ಕೆ ಕೋಟ್ಯಂತರ ರು. ಹಣವನ್ನು ವ್ಯಯ ಮಾಡುವುದರಿಂದ ಬಡವರಿಗೆ ಏನು ಲಾಭ ಎಂದು ಪ್ರಶ್ನಿಸುವುದರ ಮೂಲಕ ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ ಎಂದು ಶಾಸಕ ಎಸ್.ಎನ್.ಚನಬಸಪ್ಪ ಕಿಡಿಕಾರಿದರು.ಮಲ್ಲಿಕಾರ್ಜುನ ಖರ್ಗೆ ಬಹಳ ಹಿರಿಯರು. ಯಾಕೆ ಅವರು ತಮ್ಮ ಹಿರಿತನ ಇಟ್ಟುಕೊಂಡಿಲ್ಲ ಎಂದು ಬೇಸರಾವಗುತ್ತೆ. ಕುಂಭಮೇಳದ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತೀರಾ, ಹಿಂದೂಗಳ ಮೇಲೆ ಮನಸ್ಸಿಗೆ ಬಂದಂತೆ ಮಾತನಾಡುತ್ತೀರಾ. ಹಿಂದುಗಳ ಚಟುವಟಿಕೆ ಬಗ್ಗೆ ಹೇಗೆ ಬೇಕಾದರೂ ಮಾತನಾಡಬಹುದು ಅಂದುಕೊಂಡಿದ್ದೀರಾ, ಆಡೋ ಹುಡುಗ ರಾಹುಲ್ ಗಾಂಧಿ ನಿಮ್ಮನ್ನು ಕೈ ಗೊಂಬೆ ಮಾಡಿಕೊಂಡಿದ್ದಾರೆ. ಸರ್ಕಾರ ಮುಸ್ಲಿಮರನ್ನು ಮೆಕ್ಕಾ, ಮದೀನಾಕ್ಕೆ ಕ್ಯೋಟ್ಯಂತರ ರು.ವೆಚ್ಚ ಭರಿಸಿ ಕಳಿಸುವಾಗ ಈ ಪ್ರಶ್ನೆ ಅವರಿಗೆ ಏಕೆ ಮೂಡಿಲ್ಲ ಎಂದು ತಿರುಗೇಟು ನೀಡಿದರು.
ಕುಂಭಮೇಳದಲ್ಲಿ ಸ್ನಾನ ಮಾಡಿದರೆ ನರಕಕ್ಕೆ ಹೋಗುತ್ತೀರಾ ಎಂದು ಹೇಳುತ್ತೀರುವ ಕಾಂಗ್ರೆಸ್ ಪಕ್ಷವೇ ಒಂದು ನರಕ. ಅವರಿಗೆ ಸ್ವರ್ಗದ ಬಾಗಿಲು ಎಂದೂ ತೆರೆಯುವುದಿಲ್ಲ ಎಂದರು.ಮಹಾ ಕುಂಭಮೇಳದ 45 ದಿನಗಳಲ್ಲಿ ಭಾವನೆಯ ಪ್ರಕಟಿಕರಣದ ಜೊತೆಗೆ ವ್ಯವಹಾರಿಕ ಪ್ರಕಟೀಕರಣ ನಡೆದಿದೆ. ಇಂಥ ಸಂದರ್ಭದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತದೆ. ರಾಮ ಮಂದಿರ ಉದ್ಘಾಟನೆ ವೇಳೆ ಕೂಡ ಅದರ ಲಾಭ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದೀರಾ ? ಹಿಂದುಗಳಿಗೆ ಬೈದು ಲೀಡರ್ ಆಗುವ ಕೆಟ್ಟ ದುಷ್ಟ ಬುದ್ಧಿಯನ್ನು ಬಿಡಬೇಡಿ, ಹಿಂದುಗಳಿಗೆ ಅಪಮಾನ ಮಾಡುವುದು ನಿಮ್ಮ ಅಧೋಗತಿಗೆ ಕಾರಣವಾಗುತ್ತದೆ ಕಿಡಿಕಾರಿದರು.