ಕಾಲುವೆ ಕಾಮಗಾರಿಗೆ ಸಚಿವರಿಂದ ಭೂಮಿಪೂಜೆ

KannadaprabhaNewsNetwork |  
Published : May 26, 2025, 12:01 AM IST
25ುಲು8 | Kannada Prabha

ಸಾರಾಂಶ

ಕಾಲುವೆ ದುರಸ್ತಿಯಾಗುತ್ತಿದ್ದರಿಂದ ರೈತರ ಹೊಲ ಗದ್ದೆಗಳಿಗೆ ಸುಗಮವಾಗಿ ನೀರು ತಲುಪುತ್ತವೆ

ಗಂಗಾವತಿ: ಕನಕಗಿರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಂಗಾವತಿ ತಾಲೂಕಿನ ಜಂಗಮರಕಲ್ಗುಡಿ ಗ್ರಾಮದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವಿತರಣಾ ಪಿಕಪ್ ಪೀಡರ್ ಸಿಸಿ ಲೈನಿಂಗ್ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲುವೆ ದುರಸ್ತಿಯಾಗುತ್ತಿದ್ದರಿಂದ ರೈತರ ಹೊಲ ಗದ್ದೆಗಳಿಗೆ ಸುಗಮವಾಗಿ ನೀರು ತಲುಪುತ್ತವೆ. ಸರಿಯಾದ ಸಮಯಕ್ಕೆ ನೀರು ಪೂರೈಕೆಯಾಗುತ್ತಿದ್ದರಿಂದ ರೈತರು ಭತ್ತ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಈ ಕಾಮಗಾರಿಗೆ ₹5 ಕೋಟಿ 80 ಲಕ್ಷ ಅನುದಾನ ನೀಡಲಾಗಿದ್ದು, ಹಣವಾಳ, ಹೆಬ್ಬಾಳ ಗ್ರಾಮಗಳಿಗೆ ಹೋಗುವ ಕಾಲುವೆ ನಂ.17,21,25 ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ. ಕಾಮಗಾರಿ ಗುಣ ಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಗುತ್ತಿಗೆದಾರರಿಗೆ ಮತ್ತು ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಗ್ರಂಥಾಲಯ ಉದ್ಘಾಟಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ರೆಡ್ಡಿ ಶ್ರೀನಿವಾಸ, ಫಕೀರಪ್ಪ, ದಾನಪ್ಪ, ಬೀರಪ್ಪ, ಪ್ರಸಾದ, ಮಲ್ಲನಗೌಡ ಸೇರಿದಂತೆ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ