ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ತುಂಬಲು ಪ್ರದೇಶಕ್ಕೆ ಭೇಟಿ ನೀಡಿ ನಾಡಿಗೆ ಮಳೆ-ಬೆಳೆ ಆಗಲಿ ಎಂದು ಬೇಡಿಕೊಂಡರು.
ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೀಶ್ ಬಾಬು, ಬಾಬುರೆಡ್ಡಿ, ರವಿಕುಮಾರ್, ಸತ್ಯನಾರಾಯಣ ರೆಡ್ಡಿ, ವೀರಭದ್ರಯ್ಯ, ಶಶಿಧರ್ ಜೊತೆಗೂಡಿ ಬಂದು ದೇವಿ ದರ್ಶನ ಪಡೆದರು.*ವ್ಯಾಪಾರ ವಹಿವಾಟು ಜೋರು:
ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾಧಿಗಳು ಜಮೀನುಗಳ ನೆರಳಡಿಯಲ್ಲಿ ಬೀಡು ಬಿಟ್ಟಿದ್ದರು. ಈ ಜಾತ್ರೆಯಲ್ಲಿ ಮಾಂಸಾಹಾರವೇ ಪ್ರಧಾನವಾಗಿರುವುದರಿಂದ ನೆರಳು ಹೇರಳವಾಗಿರುವ ಕಡೆಗಳಲ್ಲಿ ಭಕ್ತರು ತಂಗಿದ್ದರು. ಉರಿಯುವ ಬಿಸಿಲು ಜಾತ್ರೆಯಲ್ಲಿ ಜನರನ್ನು ಬೇಯುವಂತೆ ಮಾಡುತ್ತಿದ್ದರೂ ಅಂತಹ ಬಿಸಿಲನ್ನೂ ಲೆಕ್ಕಿಸದೇ ಜನರು ಜಾತ್ರೆಯ ಗುಂಗಿನಲ್ಲಿ ಮೈಮರೆತಿದ್ದರು.
ತುಂಬುಲು ಪ್ರದೇಶಕ್ಕೆ ದೇವಿಯನ್ನು ಕರೆತರುವಾಗ ಭಕ್ತರು ಕುಣಿದು ಕುಪ್ಪಳಿಸಿ ಕೇಕೆ ಹೊಡೆಯುತ್ತಾ ದೇವಿ ಹೊತ್ತವರ ಸುತ್ತಲೂ ಭಕ್ತರ ಉತ್ಸಾಹ ಬಿಸಿಲಿನಂತೆ ಏರುತ್ತಲೇ ಇತ್ತು. ಪುರುಷರಷ್ಟೇ ಅಲ್ಲ. ಮಹಿಳೆಯರೂ ಸೇರಿದಂತೆ ಮಕ್ಕಳೂ ಜಾತ್ರೆಯ ಸಂತಸದಲ್ಲಿ ಮುಳುಗಿದ್ದರು.