ಗ್ರಾಮದೇವಿ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork |  
Published : May 09, 2026, 02:45 AM IST
ಫೋಟೋ ಶೀರ್ಷಿಕೆ ೮ಎಸ್‌ಡಿಟಿ೪ ಸವದತ್ತಿಯಲ್ಲಿ ಗ್ರಾಮದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದೇವಿಯ ಮಂಟಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರನ್ನು ಉತ್ಸವ ಸಮಿತಿಯ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರಾ ಉತ್ಸವದ ಐದನೇ ದಿನ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ನಗರದ ಕೋಟೆಯಿಂದ ದೇವಸ್ಥಾನದ ಕಟ್ಟೆಯವರೆಗೆ ಶಾಸಕ ವಿಶ್ವಾಸ ವೈದ್ಯ ಸೇರಿದಂತೆ ಅಭಿಮಾನಿಗಳೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಗ್ರಾಮದೇವಿಯ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರಾ ಉತ್ಸವದ ಐದನೇ ದಿನ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ನಗರದ ಕೋಟೆಯಿಂದ ದೇವಸ್ಥಾನದ ಕಟ್ಟೆಯವರೆಗೆ ಶಾಸಕ ವಿಶ್ವಾಸ ವೈದ್ಯ ಸೇರಿದಂತೆ ಅಭಿಮಾನಿಗಳೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಗ್ರಾಮದೇವಿಯ ದರ್ಶನ ಪಡೆದರು.

ಕೋಟೆಯಿಂದ ವಿವಿಧ ವಾದ್ಯ ಮೇಳದೊಂದಿಗೆ ಶಾಸಕ ವಿಶ್ವಾಸ ವೈದ್ಯ ಅವರ ಕುಟುಂಬ ಸೇರಿದಂತೆ ಸಚಿವರು ಮತ್ತು ಸಾರ್ವಜನಿಕರೊಂದಿಗೆ ಪೋಸ್ಟ್ ಆಫೀಸ್, ಗಾಂಧಿಚೌಕ್‌ ಮಾರ್ಗವಾಗಿ ಸಾಂಪ್ರದಾಯಕ ವಾದ್ಯಗಳೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಗ್ರಾಮದೇವಿಯರಿಗೆ ವೈದ್ಯ ಮನೆತನದಿಂದ ಉಡಿ ತುಂಬಿ ದೇವಿಯ ಕೃಪೆಗೆ ಪಾತ್ರರಾದರು.

ಗ್ರಾಮದೇವಿ ಕಟ್ಟಿಯ ಮಂಟಪದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ, ಗೌರವಾಧ್ಯಕ್ಷ ವಿಶ್ವಾಸ ವೈದ್ಯ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಫಕೀರಪ್ಪ ಹದ್ದನ್ನವರ, ಶಾಸಕರ ತಾಯಿ ಅಲ್ಕಾ, ಪತ್ನಿ ಶೃತಿ ವೈದ್ಯ, ಅಶ್ವತ ವೈದ್ಯ, ಶ್ರೀದೇವಿ ವೈದ್ಯ, ಡಿ.ಡಿ.ಟೋಪೋಜಿ, ಪ್ರವೀಣ ರಾಮಪ್ಪನವರ, ವಿಜಯ ಸಂಗಪ್ಪಗೋಳ, ಮಲ್ಲು ಜಕಾತಿ, ಗಿರೀಶ ಮುನವಳ್ಳಿ, ಸಂತೋಷ ನೊರೆಯವರ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧರ್ಮದ ಹಾದಿಯಲ್ಲಿ ನಡೆಯಲಿ: ಅಭಿನವ ಸಿದ್ಧಲಿಂಗ ಶ್ರೀ
ದಾನಮ್ಮ ಉತ್ಸವ ದೇಸಿ ಸಂಸ್ಕೃತಿಗೆ ಹಿಡಿದ ಕನ್ನಡಿ: ಎಂ.ಎ.ಮೋರೆ