ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಈ ಸಂದರ್ಭದಲ್ಲಿ ಮಾತನಾಡಿ ಅವರು, ನಾನು ರೈತ ಸಂಘದ ಕಾರ್ಯಕರ್ತನಾಗುವ ಮೂಲಕವೇ ರಾಜಕೀಯ ಕ್ಷೇತ್ರ ಪ್ರವೇಶಿಸಿದವನು. ಹೇಮಾವತಿ ನೀರಿನ ಬಗ್ಗೆ ನಾನು ರಾಜ್ಯ ಜಲಸಂಪನ್ಮೂಲ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ನೀರಾವರಿ ಇಲಾಖೆಯ ಎಂಜಿನಿಯರುಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದು ಹೇಮಾವತಿ ಜಲಾಶಯದಿಂದ ನಮ್ಮ ಕಾಲುವೆಗಳಿಗೆ ಅಗತ್ಯ ನೀರು ಹರಿಸಲು ಅಗತ್ಯ ಒತ್ತಡ ಹಾಕಿದ್ದೇನೆ. ಹೇಮಾವತಿ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರನ್ನು ಕಾಲುವೆಗೆ ಹರಿಸಲಾಗಿದ್ದು ಅದನ್ನು 1200 ಕ್ಯೂಸೆಕ್ಸ್ ಹೆಚ್ಚಿಸುವಂತೆ ಸೂಚಿಸಿದ್ದೇನೆ. ಎಂಜಿನಿಯರುಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಹೇಮೆಯ ನೀರಿನಿಂದ ನಮ್ಮ ತಾಲೂಕಿನ ಎಲ್ಲಾ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಇಲ್ಲದಿದ್ದರೆ ನಾನು ರೈತಸಂಘದ ಜೊತೆಗೂಡಿ ಬೀದಿ ಹೋರಾಟಕ್ಕಿಳುವುದಾಗಿ ಘೋಷಿಸಿದರು.
ತಾಲೂಕಿನ ಮಂದಗೆರೆ ಮತ್ತು ಎಡದಂಡೆ ನಾಲೆಗಳಿಗೆ ಈಗಾಗಲೇ ನೀರು ಹರಿಸಿದ್ದು ಕಾಲುವೆಗಳ ಹೂಳೆತ್ತುವ ಸಲುವಾಗಿ ತಾತ್ಕಾಲಿಕವಾಗಿ ನೀರು ನಿಲ್ಲಿಸಲಾಗಿದೆ. ಸದರಿ ನಾಲೆಗಳ ಹೂಳೆತ್ತಿ ನೀರು ಹರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಕಳೆದ ಫೆ.7 ರಲ್ಲೇ ಹೇಮಾವತಿ ಜಲಾನಯನ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸೂಚಿಸಿದ್ದರೂ ಸ್ಥಳೀಯ ಎಂಜಿನಿಯರುಗಳ ನಿರ್ಲಕ್ಷ್ಯದಿಂದ ರೈತರಿಗೆ ಸಮಸ್ಯೆಯಾಗಿದೆ. ಕರ್ತವ್ಯ ಲೋಪ ಮಾಡಿದ ಎಂಜಿನಿಯರುಗಳ ವಿರುದ್ಧ ಕ್ರಮ ಜರುಗಿಸಬೇಕಲ್ಲದೆ ಹಗಲು ರಾತ್ರಿ ಕೆಲಸ ಮಾಡಿ ಬರುವ ಶನಿವಾರದೊಳಗೆ ನಾಲೆಯಲ್ಲಿನ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಿ ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಹರಿಸುವಂತೆ ಅಧೀಕ್ಷಕ ಎಂಜಿನಿಯರ್ ಗಂಗಾಧರ್ ಅವರಿಗೆ ಸೂಚಿಸಿದರು.