ಕನ್ನಡಪ್ರಭ ವಾರ್ತೆ ಹಲಗೂರು
ನಂತರ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಹಲವು ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಇದರಲ್ಲಿ ಬಾಣಸಮುದ್ರವೂ ಸೇರಿದೆ. ಮೊದಲು ವಿದ್ಯುತ್ ತಂತಿಗಳ ಸಮಸ್ಯೆ ಇದ್ದರೆ ಅದನ್ನು ಹೊಸದಾಗಿ ಹಾಕುವುದು, ವಿದ್ಯುತ್ ಕಂಬಗಳ ಅವಶ್ಯಕತೆ ಇದ್ದರೆ ಮಧ್ಯದಲ್ಲಿ ಹಾಕುವುದು, ಮೊದಲು ಗ್ರಾಮಕ್ಕೆ ಒಂದೇ ಟ್ರಾನ್ಸ್ ಫಾರ್ಮರ್ ಇರುತ್ತಿತ್ತು. ಈಗ ಲೋಡ್ ಹೆಚ್ಚಾಗುವುದರಿಂದ ಹೊಸದಾಗಿ ಮತ್ತೊಂದು ಟ್ರಾನ್ಸ್ ಫಾರ್ಮರ್ ಹಾಕುವುದು ಸೇರಿದಂತೆ ಮಾದರಿ ಗ್ರಾಮ ಯೋಜನೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು.
ಹಣವನ್ನು ರಸ್ತೆ ಕಾಮಗಾರಿಗೂ ಸಹ ಉಪಯೋಗಿಸಿಕೊಳ್ಳಿ. ಅವಶ್ಯಕತೆ ಇದ್ದರೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದರು. ಸಾರ್ವಜನಿಕರು ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆ ಇದ್ದು, ಖಾಲಿ ನಿವೇಶನವನ್ನು ಕೊಡಿಸಿ ಕೊಠಡಿಗಳನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.ಸರ್ಕಾರಿ ಜಾಗ ನಿಮ್ಮ ಗ್ರಾಮದಲ್ಲಿ ಇಲ್ಲ. ನಿವೇಶನ ಕೊಡುವವರು ಇದ್ದರೆ ನನಗೆ ತಿಳಿಸಿದರೆ ನಾನು ಮಾತನಾಡಿ ಮುಂದಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು.
ಇಂದು ಸಾಂಸ್ಕೃತಿಕ ಉತ್ಸವ ಹಾಗೂ ವೈ.ಸಿ.ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳ ಜಾಗೃತಿ ಮೂಡಿಸುವ ವೃತ್ತಿಯಲ್ಲಿ ನಿರತರಾಗಿದ್ದ ವೈ.ಸಿ.ಕುಮಾರ್ ಕುಟುಂಬಕ್ಕೆ ಜಿಲ್ಲೆಯ ಉದಾರಿಗಳ ನೆರವನ್ನು ತಲುಪಿಸುವ ಉದ್ದೇಶದಿಂದ ಅವರ ನೆನಪಿನಾರ್ಥ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಹಾಗೂ ಜಿಲ್ಲಾ ನಾನಾ ಸಂಘಟನೆಗಳು, ಕಲಾಪೋಷಕರು, ಸಂಘಟಕರು, ಪ್ರೇಕ್ಷಕರ ಸಹಕಾರದಿಂದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಶೇಖರ್.ಎನ್.ಹನಿಯಂಬಾಡಿ, ಪ್ರಧಾನ ಕಾರ್ಯದರ್ಶಿ ವೈರಮುಡಿ, ನಿರ್ದೇಶಕ ದೇವರಾಜ್ ಕೊಪ್ಪ, ಕೆ.ಎಂ.ಕೃಷ್ಣೇಗೌಡ ಇದ್ದರು.