ಕೃಷಿ ಯಂತ್ರೋಪಕರಣ ಸದುಪಯೋಗ ಪಡಿಸಿ: ಶಾಸಕ ಪೊನ್ನಣ್ಣ ಕರೆ

KannadaprabhaNewsNetwork |  
Published : Nov 29, 2024, 01:04 AM IST
ರೈತರು ಯಂತ್ರೋಪಕರಣಗಳನ್ನು ಬಳಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕು: ಶಾಸಕ ಎ.ಎಸ್. ಪೊನ್ನಣ್ಣ :೨೦೨೪-೨೫ ನೇ ಸಾಲೀನ ಕ್ರಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಸಮಾರಂಭದಲ್ಲಿ:ವಿರಾಜಪೇಟೆ:ನ:೨೮: ರೈತರು ದೇಶದ ಬೆನ್ನಲುಬು. ಕ್ರಷಿಯನ್ನು ನಂಬಿಕೊಂಡು ಜೀವನ ಸಾಗಿಸವವರಿಗೆ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು  ಕೃಷಿಗೆ ಉತ್ತೇಜನ ನೀಡುವಂತಾಗಬೇಕು ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಹೇಳಿದರು.ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವಿರಾಜಪೇಟೆ ಆಶ್ರಯದಲ್ಲಿ ನಗರದ ಕೃಷಿ ಭವನ ಕಛೇರಿಯ ಆವರಣದಲ್ಲಿ ನಡೆದ  ಅರ್ಹ ಕೃಷಿ ೨೦೨೪-೨೫ನೇ ಸಾಲಿನ ವಿವಿಧ ಯೋಜನೆಅಡಿ ಸಹಾಯಧನದಲ್ಲಿ ಸವಲತ್ತುಗಳ ವಿತರಣೆ ಸಮಾರಂಭ ನಡೆಯಿತು. ರೈತ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಮಾತನಾಡಿದ ಶಾಸಕರು  ರೈತಾಫಿ ವರ್ಗ ಪ್ರಸ್ತುತ ವರ್ಷಗಳಲ್ಲಿ ಸಂಕಷ್ಟವನ್ನು ಎದುರಿಸುತ್ತಿದೆ. ಅತಿವೃಷ್ಟಿ, ಅಕಾಲಿಕ ಮಳೆ, ಮತ್ತು ವಾತವರಣ ವೈಪರಿತ್ಯದಿಂದಾಗಿ ಬೆಳೆಗಳು ನೆಲಕಚ್ಚಿದೆ. ರೈತಾಫಿ ವರ್ಗದ ಜೀವನ ಸುದಾರಣೆಗೊಳ್ಳಬೇಕು ಈ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ರೈತರು ಸದೂಪಯೋಗಪಡೆದುಕೊಳ್ಳಬೇಕು.  ಇಲಾಖೆಯ ವತಿಯಿಂದ ರೈತರೀಗೆ ಸಹಾಯಧನದಲ್ಲಿ ಕ್ರಿಷಿ ಯಂತ್ರೋಪಕರಣಗಳನ್ನು  ಪಡೆಯಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕ್ರಿಷಿಗೆ ಪೂರಕವಾಗಿರುವ ಯಂತ್ರಗಳನ್ನು ಸಹಾಯಧನದೊಂದಿಗೆ ಪಡೆದುಕೊಳ್ಳುವಂತಾಗಬೇಕು. ಇದರಿಂದ ಕಡಿಮೆ ವೆಚ್ಚದಲ್ಲಿ ಕೃಷಿ ಚಟುವಟಿಕೆಗಳು ಸುಗಮವಾಗುತ್ತದೆ ಕೂಲಿ ಕಾರ್ಮಿಕರ ಅಭಾವ ನೀಗಿಸುವಲ್ಲಿ ಸಹಕಾರವಾಗುತ್ತದೆ ಎಂದು ಸಮಾರಂಭದಲ್ಲಿ ಹೇಳಿದರು.ವಿರಾಜಪೇಟೆ, ಅಮ್ಮತ್ತಿ ಪೊನ್ನಂಪೇಟೆ, ಹುದಿಕೇರಿ, ಬಾಳಲೆ,ಶ್ರೀಮಂಗಲ ಹೊಬಳಿಗಳ ಅರ್ಹ ಫಲಾನುಭವಿಗಳಿಗೆ ಇಂದು ನಾಲ್ಕು ಮಂದಿಗೆ ಟಿಲ್ಲರ್, ೧೦ ಮಂದಿಗೆ ೫ ಹೆಚ್.ಪಿ ಡೀಸೆಲ್ ಇಂಜಿನ್, ೦೩ ಮಂದಿಗೆ ಕಳೆಕೊಚ್ಚುವ ಯಂತ್ರ,  ೦೨ ಮಂದಿಗೆ ಹೆಚ್.ಟಿ.ಪಿ ಸಿಂಪರಣಾ ಯಂತ್ರ ಮತ್ತು ೧೫ ಮಂದಿಗೆ ಹೆಚ್.ಡಿ.ಪಿ.ಇ. ಪೈಪ್ ನೀಡಲಾಯಿತು. ಈ ಸಂದರ್ಭದಲ್ಲಿ ಡಾ. ಬಿ.ಎಸ್. ಚಂದ್ರಶೇಖರ್ ಜಂಟಿ ಕೃಷಿ ನಿರ್ಧೇಶಕರು ಕೊಡಗು ಜಿಲ್ಲೆ ಮಡಿಕೇರಿ, ಡಾ. ಡಿ.ಎಸ್. ಸೋಮಶೇಖರ್ ಉಪ ಕೃಷಿ ನಿರ್ಧೇಶಕರು, ಕೊಡಗು ಜಿಲ್ಲೆ ಮಡಿಕೇರಿ, ಶ್ರೀಮತಿ ಗೌರಿ ಆರ್, ಸಹಾಯಕ ಕೃಷಿ ನಿರ್ದೇಶಕರು, ವಿರಾಜಪೇಟೆ ತಾಲೂಕು, ರೈತ ಸಂಪರ್ಕ ಕೇಂದ್ರ ವಿರಾಜಪೇಟೆ ಕೃಷಿ ಅಧಿಕಾರಿಗಳಾದ ಲವಿನ್ ಮಾದಪ್ಪ, ರೈತ ಸಂಪರ್ಕ ಕೇಂದ್ರ ಬಾಳಲೆ ಕೃಷಿ ಅಧಿಕಾರಿಗಳಾದ ಮೀರಾ ಎ.ಪಿ. ಮತ್ತು ಆಶ್ವಿನ್ ಕುಮಾರ್ ಹೆಚ್.ಬಿ , ವಿರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಕೃಷಿ ಇಲಾಖೆಯ ಸಿಬ್ಬಂದಿಗಳು, ಎರಡು ತಾಲೂಕು ಹೋಬಳಿಗಳ ವಿವಧ ಸ್ಥಳಗಳಿಂದ ಆಗಮಿಸಿದ ರೈತರು ಹಾಜರಿದ್ದರು.ಕಿಶೋರ್ ಕುಮಾರ್ ಶೆಟ್ಟಿಚಿತ್ರ ಆಳವಡಿಸಲಾಗಿದೆ: ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುತ್ತಿರುವ ಶಾಸಕರು, ಫಲಾನುಭವಿಗಳಿಗೆ ವಿgತರಣೆಗೆ ಸಿದ್ದವಾಗಿರುವ ಯಂತ್ರಗಳು, ಮತ್ತು ಫಲಾನುಭವಿಗಳೋಂದಿಗೆ ಶಾಸಕರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು | Kannada Prabha

ಸಾರಾಂಶ

ಕೊಡಗು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಆಶ್ರಯದಲ್ಲಿ ನಗರದ ಕೃಷಿ ಭವನ ಕಚೇರಿಯ ಆವರಣದಲ್ಲಿ 2024-25ನೇ ಸಾಲಿನ ವಿವಿಧ ಕೃಷಿ ಯೋಜನೆಗಳಡಿ ಸಹಾಯಧನ, ಸವಲತ್ತು ವಿತರಣೆ ಸಮಾರಂಭ ನಡೆಯಿತು. ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೃಷಿ ನಂಬಿಕೊಂಡು ಜೀವನ ಸಾಗಿಸವವರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಗೆ ಉತ್ತೇಜನ ನೀಡುವಂತಾಗಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಕೊಡಗು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಆಶ್ರಯದಲ್ಲಿ ನಗರದ ಕೃಷಿ ಭವನ ಕಚೇರಿಯ ಆವರಣದಲ್ಲಿ ನಡೆದ, 2024-25ನೇ ಸಾಲಿನ ವಿವಿಧ ಕೃಷಿ ಯೋಜನೆಗಳಡಿ ಸಹಾಯಧನ, ಸವಲತ್ತು ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರೈತಾಪಿ ವರ್ಗ ಪ್ರಸ್ತುತ ವರ್ಷಗಳಲ್ಲಿ ಸಂಕಷ್ಟ ಎದುರಿಸುತ್ತಿದೆ. ಅತಿವೃಷ್ಟಿ, ಅಕಾಲಿಕ ಮಳೆ, ಮತ್ತು ವಾತಾವರಣ ವೈಪರೀತ್ಯದಿಂದಾಗಿ ಬೆಳೆಗಳು ನೆಲ ಕಚ್ಚಿವೆ. ರೈತಾಪಿ ವರ್ಗದ ಜೀವನ ಸುಧಾರಿಸಬೇಕು ಎಂದರು.

ಇಲಾಖೆ ವತಿಯಿಂದ ರೈತರಿಗೆ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣ ಪಡೆಯಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಕೃಷಿ ಚಟುವಟಿಕೆಗಳು ಸುಗಮವಾಗುತ್ತವೆ. ಕೂಲಿ ಕಾರ್ಮಿಕರ ಅಭಾವ ನೀಗಿಸುವಲ್ಲಿ ಸಹಕಾರವಾಗುತ್ತದೆ ಎಂದರು.

ವಿರಾಜಪೇಟೆ, ಅಮ್ಮತ್ತಿ ಪೊನ್ನಂಪೇಟೆ, ಹುದಿಕೇರಿ, ಬಾಳಲೆ,ಶ್ರೀಮಂಗಲ ಹೋಬಳಿಗಳ ಫಲಾನುಭವಿಗಳ ಪೈಕಿ ಗುರುವಾರ ನಾಲ್ಕು ಮಂದಿಗೆ ಟಿಲ್ಲರ್, 10 ಮಂದಿಗೆ 5 ಎಚ್.ಪಿ ಡೀಸೆಲ್ ಇಂಜಿನ್, 3 ಮಂದಿಗೆ ಕಳೆ ಕೊಚ್ಚುವ ಯಂತ್ರ, 2 ಮಂದಿಗೆ ಎಚ್.ಟಿ.ಪಿ. ಸಿಂಪರಣಾ ಯಂತ್ರ ಮತ್ತು 15 ಮಂದಿಗೆ ಎಚ್.ಡಿ.ಪಿ.ಇ. ಪೈಪ್ ಹಸ್ತಾಂತರಿಸಲಾಯಿತು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್, ಉಪ ಕೃಷಿ ನಿರ್ದೇಶಕ ಡಾ.ಡಿ.ಎಸ್‌.ಸೋಮಶೇಖರ್, ವಿರಾಜಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಗೌರಿ ಆರ್., ವಿರಾಜಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಲವಿನ್ ಮಾದಪ್ಪ, ರೈತ ಸಂಪರ್ಕ ಕೇಂದ್ರ ಬಾಳಲೆ ಕೃಷಿ ಅಧಿಕಾರಿಗಳಾದ ಮೀರಾ ಎ.ಪಿ. ಮತ್ತು ಆಶ್ವಿನ್ ಕುಮಾರ್ ಎಚ್.ಬಿ. ಮತ್ತಿತರರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ