ಹಾನಗಲ್ಲ: ತಾಲೂಕಿನ ಹಿರೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಿಂದ ₹60 ಲಕ್ಷ ವೆಚ್ಚದಲ್ಲಿ ಗ್ರಾಮದ ಲೋಕೋಪಯೋಗಿ ಇಲಾಖೆಯ ರಸ್ತೆಯಿಂದ ಕಾಮನಹಳ್ಳಿ ಕೂಡು ರಸ್ತೆ ಅಭಿವೃದ್ಧಿ ಹಾಗೂ ಎರಡೂ ಬದಿ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.ಸಂಪರ್ಕ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದೆ. ಗ್ರಾಮೀಣ ಪ್ರದೇಶದ ಜನತೆ ಸುತ್ತಲಿನ ಗ್ರಾಮಗಳು, ತಾಲೂಕು ಮತ್ತು ಜಿಲ್ಲಾ ಕೇಂದ್ರ ಸೇರಿದಂತೆ ಬೇರೆ ಬೇರೆ ನಗರ ಪ್ರದೇಶಗಳಿಗೆ ಸುಗಮವಾಗಿ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.
ಸಮರ್ಪಕ ರಸ್ತೆಗಳಿಂದ ಕೃಷಿ ಮತ್ತು ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗಲಿದೆ. ಸ್ವಲ್ಪ ಸಮಯದಲ್ಲಿ ಅಗತ್ಯ ಸ್ಥಳಕ್ಕೆ ತಲುಪಲು ಸಹಕಾರಿಯಾಗಲಿದೆ. ಶೀಘ್ರದಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆಯಾಗಲಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಮುಖಂಡರಾದ ಪುಟ್ಟಪ್ಪ ಕಡಕೋಳ, ಉಮೇಶ ಬೈಲವಾಳ, ಗ್ರಾಪಂ ಸದಸ್ಯರಾದ ಮಕ್ಬೂಲ್ ಸರಖಾಜಿ, ಸಿದ್ದಪ್ಪ ಕೋಣನವರ, ನಿಂಗಪ್ಪ ಕ್ಷೌರದ, ಹನುಮಂತಪ್ಪ ಕ್ವಾಟೇರ, ಇಸ್ಲೈಲಸಾಬ್ ರುಸ್ತುಂಅಲಿ, ಶಂಕ್ರಪ್ಪ ಕೋಣನವರ, ಪುಟ್ಟನಗೌಡ ಪಾಟೀಲ, ಶಿವಪ್ಪ ಹರಿಜನ, ಈರಪ್ಪ ಜಡೆಗೊಂಡರ, ಸಾಧಿಕ ಶೇಷಗಿರಿ, ಅಬ್ದುಲ್ ದರ್ಗಾ, ದಾದಾಪೀರ ಅಕ್ಕಿ, ಸುರೇಶ ಮಲಕಪ್ಪನವರ, ಪುಟ್ಟಪ್ಪ ನರೇಗಲ್, ಜಗದೀಶ ಚನ್ನಯ್ಯನವರ, ಬಸವರಾಜ ಕೊಂಡೋಜಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.ದೈನಂದಿನ ಬಳಕೆಯ ನೀರು ಸ್ವಚ್ಛವಾಗಿರಲಿ: ಡಾ. ಶಿವರಾಜ ಎನ್.ಎಚ್.ರಾಣಿಬೆನ್ನೂರು: ಕುಡಿಯುವ ನೀರಿನ ಸಂರಕ್ಷಣೆ ಮಾದರಿಯಲ್ಲಿ ದೈನಂದಿನ ಬಳಕೆಯ ನೀರಿನ ಬಗ್ಗೆಯೂ ಗಮನ ಹರಿಸಬೇಕು ಎಂದು ಡಾ. ಶಿವರಾಜ ಎನ್.ಎಚ್. ಹೇಳಿದರು.ತಾಲೂಕಿನ ಹುಲಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಡೆಂಘೀ, ಮಲೇರಿಯಾ, ಕೊರೋನಾ ಮತ್ತು ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಆರೋಗ್ಯ ರಕ್ಷಣೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮನೆಯಲ್ಲಿ ನೀರು ಸಂಗ್ರಹಿಸಿಟ್ಟಿರುವ ತೊಟ್ಟಿ ಅಥವಾ ಡ್ರಮ್ಗಳನ್ನು ಎರಡ್ಮೂರು ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಟೈರ್ ಮುಂತಾದವುಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಯಾಗುತ್ತವೆ. ಆದ್ದರಿಂದ ಅವುಗಳಲ್ಲಿ ನೀರು ನಿಲ್ಲದಂತೆ ಕಾಳಜಿ ವಹಿಸಬೇಕು ಎಂದರು.
ಡಾ. ಲೋಕೇಶ ವೈ. ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಬೇಕು ಎಂದರು.ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶಾಲೆಯ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಮುಖ್ಯ ಶಿಕ್ಷಕ ನಾಗರಾಜ ಬಣಕಾರ, ಎಸ್ಡಿಎಂಸಿ ಸದಸ್ಯ ಚಂದ್ರಪ್ಪ ಬಣಕಾರ, ಆಶಾ ಕಾರ್ಯಕರ್ತೆ ರೂಪಾ ಗೊಲ್ಲರ, ಎಸ್ಡಿಎಂಸಿ ಸದಸ್ಯರು, ಸಹ ಶಿಕ್ಷಕರು, ವೈದ್ಯಾಧಿಕಾರಿಗಳು ಇದ್ದರು.