ಎಂ.ಎಂ.ಫೌಂಡೇಶನ್‌ನಿಂದ ಒಂದು ಲಕ್ಷ ನೋಟ್ ಬುಕ್ ವಿತರಣೆ

KannadaprabhaNewsNetwork |  
Published : Jul 31, 2025, 12:45 AM IST
30ಕೆಎಂಎನ್ ಡಿ25 | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಬೇಬಿ ಗ್ರಾಮ ಪಂಚಾಯ್ತಿ ಮತ್ತು ದೊಡ್ಡ ಗರುಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡಿ.ಜಿ.ಹಳ್ಳಿ, ವಡಘಟ್ಟ ಗುಡಿಗೆನಹಳ್ಳಿ, ಮಾಯಪ್ಪನಹಳ್ಳಿ, ಚಾಕ್ನಳ್ಳಿ, ಗೂಳಿಕೊಪ್ಪಲು, ಗುತ್ತಿಗಾನಹಳ್ಳಿ, ತರಣಿಗೆರೆ, ಬಿದರಕಟ್ಟೆ ಸೇರಿದಂತೆ ಹಲವು ಗ್ರಾಮಗಳ 1 ರಿಂದ 10ನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ (ರಿ) ವತಿಯಿಂದ ತಾಲೂಕು ಬಸರಾಳು ಹೋಬಳಿಯ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ 1 ಲಕ್ಷ ನೋಟ್ ಬುಕ್ ವಿತರಿಸಲಾಯಿತು.

ತಾಲೂಕಿನ ಬೇಬಿ ಗ್ರಾಮ ಪಂಚಾಯ್ತಿ ಮತ್ತು ದೊಡ್ಡ ಗರುಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡಿ.ಜಿ.ಹಳ್ಳಿ, ವಡಘಟ್ಟ ಗುಡಿಗೆನಹಳ್ಳಿ, ಮಾಯಪ್ಪನಹಳ್ಳಿ, ಚಾಕ್ನಳ್ಳಿ, ಗೂಳಿಕೊಪ್ಪಲು, ಗುತ್ತಿಗಾನಹಳ್ಳಿ, ತರಣಿಗೆರೆ, ಬಿದರಕಟ್ಟೆ ಸೇರಿದಂತೆ ಹಲವು ಗ್ರಾಮಗಳ 1 ರಿಂದ 10ನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಫೌಂಡೇಶನ್‌ನಿಂದ ಮಕ್ಕಳ ಶೈಕ್ಷಣಿಕ ಸಾಮಾಜಿಕ ಕಾರ್ಯದ ಪ್ರಯುಕ್ತ ಉಚಿತ ನೋಟ್ ಬುಕ್ ವಿತರಿಸಲಾಯಿತು.

ಈ ವೇಳೆ ಡಿ.ಜಿ.ಹಳ್ಳಿ ಶಾಲೆ ಅಧ್ಯಕ್ಷ ಯೋಗಾನಂದ ಮಾತನಾಡಿ, ಫೌಂಡೇಶನ್ ಕಾರ್ಯವು ಸಮಾಜ ಸೇವೆಗೆ ಅರ್ಹವಾಗಿದೆ. ಹಲವಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯರು, ಫೌಂಡೇಶನ್ ಶೈಕ್ಷಣಿಕ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಫೌಂಡೇಶನ ಖಜಾಂಚಿ ಶಶಿಕುಮಾರ್ ಬೇಬಿ, ಫೌಂಡೇಶನ್ ಸಾಮಾಜಿಕ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.

ಈ ವೇಳೆ ಫೌಂಡೇಶನ್ ಉಪಾಧ್ಯಕ್ಷ ರವಿಗೌಡ ಮುದ್ದನಘಟ್ಟ, ಬೇಬಿ ಶಾಲಾ ಅಧ್ಯಕ್ಷ ಬೈರೇಗೌಡ, ಶಾಲಾ ಮುಖ್ಯ ಶಿಕ್ಷಕರಾದ ಪುಟ್ಟಸ್ವಾಮಿ, ಬಸವರಾಜ್, ಮುಖಂಡರಾದ ಶಿವಪ್ಪ, ಕೇಶವ, ತಮ್ಮಣ್ಣ ಮುಂತಾದವರು ಹಾಜರಿದ್ದರು.

ಶ್ರೀಗೀತಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಶಂಕರನಗರದ ಶ್ರೀಗೀತಾ ಪ್ರೌಢಶಾಲೆಯಲ್ಲಿ ಬುಧವಾರ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಉಚಿತ ಸಮವಸ್ತ್ರ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಮಾರಂಭದ ಉದ್ಘಾಟನೆಯನ್ನು ಮಂಡ್ಯ ವಿಶ್ವವಿದ್ಯಾನಿಲಯದ ಉಪ ಕುಲಸಚಿವ ಡಾ.ಎಂ.ವೈ.ಶಿವರಾಮು ನೆರವೇರಿಸಿದರು. ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಂಕಗಳಿಕೆ ಒಂದೇ ವಿದ್ಯಾರ್ಜನೆಯ ಮೂಲಮಂತ್ರವಲ್ಲ. ಸತ್ಪ್ರಜೆಯಾಗಿ ರೂಪಗೊಳ್ಳುವುದು ಮತ್ತು ರೂಪು ಗೊಳಿಸುವುದು ಸುವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರಮುಖ ಪಾತ್ರ ಎಂದು ತಿಳಿಸಿಕೊಟ್ಟರು.

ಇದೇ ವೇಳೆ ಶಾಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುತ್ತಿರುವ ನೌಕರರಾದ ಬಿ.ಎನ್ ಪರಮೇಶ್ ಅವರಿಗೆ ಗೌರವ ಸಮರ್ಪಿಸಲಾಯಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಶ್ರೀಕಂಠಯ್ಯ, ಗೌರವ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಆಡಳಿತ ಅಧಿಕಾರಿ ಕೆ.ಎಸ್.ಮಹದೇವೇಗೌಡ ಮತ್ತು ಬ್ಯಾಂಕ್ ಆಫ್ ಇಂಡಿಯಾ ಮಂಡ್ಯ ಶಾಖೆಯ ಸೀನಿಯರ್ ಮ್ಯಾನೇಜರ್ ಆದ ನೇಹಾ ಚೌಧರಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ 15ನೇ ವಾರ್ಡ್ ನ ನಗರಸಭಾ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವಸಂತ್ ಕುಮಾರ್‌, ಸಹ ಶಿಕ್ಷಕರಾದ ಕಲ್ಲಪ್ಪ, ಸರಿತಾ, ದೇವರಾಜು ರುದ್ರೇಶ್ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ