ಕನಕಗಿರಿ:
ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಬೀನಾದೇವಿ ಮಾತನಾಡಿ, ಮೊಬೈಲ್ ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗಿದೆ. ಮೊಬೈಲ್ ಕುಡಿತಕ್ಕಿಂತ ಅಪಾಯಕಾರಿಯಾಗಿದ್ದು, ಸಾಧ್ಯವಾದಷ್ಟು ಮೊಬೈಲ್ ಬಳಸಬೇಕೆ ವಿನಃ ಮೊಬೈಲ್ ನಮಗೆ ಜೀವನ ಎಂತಾಗಬಾರದು. ಇತ್ತೀಚಿಗೆ ಚಿಕ್ಕಮಕ್ಕಳಲ್ಲೂ ಮೊಬೈಲ್ ಗೀಳು ಹೆಚ್ಚಾಗಿದೆ. ಪಾಲಕರು, ಹಿರಿಯರು ಮೊಬೈಲ್ ಬಳಸದಂತೆ ಮನೆಯ ಮಕ್ಕಳಿಗೆ, ಯುವಕರಿಗೆ ತಿಳಿ ಹೇಳುವುದು ಅನಿವಾರ್ಯವಾಗಿದೆ ಎಂದರು.
ಇನ್ನೂ ವಿದ್ಯಾರ್ಥಿ ಜೀವನ ಬಂಗಾರದಂತಾಗಬೇಕಾದರೆ ಉತ್ತಮವಾಗಿ ಓದುವುದು, ಬರೆಯುವುದನ್ನು ಮಾಡಬೇಕು. ಸರಳ ಜೀವನ ಶೈಲಿ ರೂಢಿಸಿಕೊಂಡು ಕಾಲೇಜಿನ ಉತ್ತಮ ಫಲಿತಾಂಶ ಪಡೆಯುವ ಕೆಲಸ ಮಾಡಬೇಕು. ಏಡ್ಸ್ ಸೊಂಕುವಿನ ಕುರಿತು ಜಾಗೃತಿಯಿಂದ ಇರುವಂತೆ ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ ಪೋಸ್ಟರ್ ಮೇಕಿಂಗ್ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ನಗದು ವಿತರಿಸಲಾಯಿತು.
ಉಪನ್ಯಾಸಕರಾದ ಗೋಪಾಲರೆಡ್ಡಿ, ಎಸ್.ಕೆ. ಖಾದ್ರಿ, ಬಸವರಾಜ, ಮಾರುತೇಶ, ನಿಂಗಪ್ಪ ಕೆ, ಮಾಲತಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.