ಶರಣು ಸೊಲಗಿ ಮುಂಡರಗಿ
ಸದಸ್ಯರಾದ ಪ್ರಾರಂಭದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಪಕ್ಷದ ಕಾರ್ಯಕರ್ತರು ಮತ್ತು ಅಲ್ಲಿನ ಸಾರ್ವಜನಿಕರ ಸಹಕಾರದೊಂದಿಗೆ 22ನೇ ವಾರ್ಡ್ನಲ್ಲಿ ಬರುವ ಕೈಗಾರಿಕಾ ಹೊಸಹತು ಪ್ರದೇಶ, ಬ್ಯಾಲವಾಡಗಿ ಹಾಗೂ ಜೆ.ಎಚ್. ಪಟೇಲ್ ನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಸಸಿ ನೆಟ್ಟರು. ಸುಮಾರು 5-6 ವರ್ಷಗಳಲ್ಲಿ ಅವು ಬೆಳೆದು ಮರವಾಗಿ ನಿಂತಿವೆ.
ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಬೇವು, ಅತ್ತಿ, ಆಲ, ಹೊಂಗೆ, ಚೆರಿ, ಕಸಕಸಿ, ಸುಬಾಬುಲ್, ಬನ್ನಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮರಗಳು ಬೆಳೆದಿವೆ. ಕೇವಲ ಸಸಿ ಹಚ್ಚುವುದು ಅಷ್ಟೇ ಅಲ್ಲ, ಅವುಗಳಿಗೆ ನಿರಂತರವಾಗಿ ನೀರು ಹಾಕಿಸುವುದು ಹಾಗೂ ಗಿಡಗಳಿಗೆ ನೀರು ನಿಲ್ಲುವಂತೆ ತಗ್ಗು ಮಾಡಿಸುವುದು, ಗಿಡಗಳು ಬೀಳದಂತೆ ಮುಳ್ಳು ಕಟ್ಟಿಸುವುದು, ದುಷ್ಕರ್ಮಿಗಳು ಮರ ಕಡಿಯದಂತೆ ಸಂರಕ್ಷಿಸುವ ಕಾರ್ಯ ಮಾಡಿದ್ದಾರೆ.ಇದೀಗ ಈ ಕೈಗಾರಿಕಾ ವಸಾಹತು ಪ್ರದೇಶ ಹಸಿರು ಬನದಂತೆ ನಿರ್ಮಾಣವಾಗಿದೆ. ಪಟ್ಟಣದ ಅನೇಕರು ಹಿರಿಯ ನಾಗರಿಕರು ಬೆಳಗ್ಗೆ ಮತ್ತು ಸಂಜೆ ಅಲ್ಲಿಗೆ ವಾಯುವಿಹಾರಕ್ಕೆ ಬಂದರೆ ಉತ್ತಮವಾದ ಪ್ರಾಣವಾಯು ದೊರೆಯಲು ಇದೊಂದು ಹೇಳಿ ಮಾಡಿಸಿದ ಸ್ಥಳವಾಗಿದೆ.
ಅತಿಯಾದ ವಾಹನಗಳ ಭರಾಟೆ, ಮಸಿನರಿಗಳ ಬಳಕೆಯ ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಅತ್ಯಂತ ಅವಶ್ಯವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಹಾಗೂ ಪಕ್ಷದ ಹಿರಿಯ ಮುಖಂಡರ, ನನ್ನ ವಾರ್ಡ್ನ ಜನತೆಯ ಸಹಕಾರದಿಂದ ಈ ಕಾರ್ಯ ಮಾಡಿರುವೆ ಎಂದು 22ನೇ ವಾರ್ಡ್ನ ಸದಸ್ಯ ಲಿಂಗರಾಜಗೌಡ ಪಾಟೀಲ ತಿಳಿಸಿದ್ದಾರೆ.