- ರಾಂಪುರದಲ್ಲಿ ಶಿಲಾ ಮೂರ್ತಿ ಸ್ಥಾಪನೆ ಧರ್ಮಸಭೆಯಲ್ಲಿ ಉಜ್ಜಯಿನಿ ಶ್ರೀಗಳ ವಿಷಾದ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಸಾಸ್ವೇಹಳ್ಳಿ ಸಮೀಪದ ರಾಂಪುರದಲ್ಲಿ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಶಿಲಾಮಂಟಪ, ಕತೃಗದ್ದುಗೆ, ಶಿಲಾ ಮೂರ್ತಿ ಸ್ಥಾಪನೆಯ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಗವಂತ ಕೊಟ್ಟ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆ ಕಾರ್ಯವನ್ನು ರಾಂಪುರ ಬೃಹನ್ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಗಳು ಮಾಡಿ ಈ ಭಾಗದ ಜನರ ದೇವರಾಗಿದ್ದಾರೆ ಎಂದರು.
ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಯಜಮಾನನಿಲ್ಲದೇ ಮಠ ಸೊರಗುವುದು ಸಾಮಾನ್ಯ. ಆದರೆ, ರಾಂಪುರ ಬೃಹನ್ಮಠದಲ್ಲಿ ಮಠದ ಪರಂಪರೆ ಉಳಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ಶ್ರೀಗಳು ನಿರ್ವಹಿಸಿದ್ದಾರೆ. ಕಡಿಮೆ ಸಮಯದಲ್ಲಿ ಭಕ್ತರ ಸಹಕಾರದಿಂದ ಶಿಲಾ ಮಂಟಪ ನಿರ್ಮಾಣ ಮಾಡಿರುವುದು ಸಾಧನೆಯೇ ಸರಿ ಎಂದರು.ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಮಾತನಾಡಿ, ಗುರುಸೇವೆಯಿಂದ ಎಲ್ಲ ಫಲಗಳು ಸಿಗುತ್ತವೆ. ಗುರುವನ್ನು ಕೆಣಕಬಾರದು. ಗುರುವಿನ ಮೇಲೆ ನಂಬಿಕೆ ಇಟ್ಟರೆ ಒಳ್ಳೆಯದಾಗುತ್ತದೆ ಎಂದರು.
ಮಠದ ಉಸ್ತುವಾರಿ ಶಿವಕುಮಾರ ಹಾಲಸ್ವಾಮಿಗಳು ಮಾತನಾಡಿ, ಶಿಲಾ ಮಂಟವು ಭಕ್ತರಿಂದ ನಿರ್ಮಾಣವಾಗಿದೆಯೇ ಹೊರತು, ಸರ್ಕಾರದ ಯಾವುದೇ ಅನುದಾನಗಳಿಂದ ಅಲ್ಲ. ಭಕ್ತರೇ ತಮ್ಮ ಶ್ರೀಗಳನ್ನು ಮಠದಲ್ಲಿ ನೆಲೆಗೊಳಿಸಿದ್ದಾರೆ ಎಂದರು.
- - - -15ಎಚ್.ಎಲ್.ಐ1.ಜೆಪಿಜಿ:
ಸಾಸ್ವೇಹಳ್ಳಿ ಸಮೀಪದ ರಾಂಪುರ ಬೃಹನ್ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯರ ಕತೃಗದ್ದುಗೆ, ಶಿಲಾ ಮಂಟಪ, ಶಿಲಾ ಮೂರ್ತಿ ಸ್ಥಾಪನೆ ಪ್ರಯುಕ್ತ ನಡೆದ ಧರ್ಮಸಭೆಯನ್ನು ಕಾಶಿ ಶ್ರೀಗಳು ಉದ್ಘಾಟಿಸಿದರು.