ರೈತರ ಕೃಷಿ ಚಟುವಟಿಕೆ ಪ್ರಾರಂಭ
ತಾಲೂಕಿನಲ್ಲಿ ಮುಂಗಾರು ಚುರುಕಾಗಿದ್ದು ಕಳೆದ 3 ದಿನದಿಂದ ಬಿಟ್ಟೂ, ಬಿಟ್ಟೂ ಮಳೆ ಸುರಿಯುತ್ತಿದ್ದು ರೈತರ ಕೃಷಿ ಚಟುವಟಿಕೆ ಪ್ರಾರಂಭವಾಗಿದೆ.
ಮಳೆಯಿಂದ ಬತ್ತಿಹೋಗಿದ್ದ ಹಳ್ಳಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಳ್ಳ ಹರಿಯಲು ಪ್ರಾರಂಭವಾಗಿದೆ. ಕಳೆದ 5 ದಿನದಿಂದ ದಿನಕ್ಕೆ 30 ರಿಂದ 40 ಮಿ.ಮೀ.ಮಳೆ ಸುರಿಯುತ್ತಿದೆ. ಜನವರಿಯಿಂದ ಜುಲೈ 3 ರ ವರೆಗೆ ತಾಲೂಕಿನಲ್ಲಿ 447 ಮಿ.ಮೀ.ವಾಡಿಕೆ ಮಳೆ ಬರಬೇಕಾಗಿತ್ತು. ಆದರೆ, ಕೇವಲ 288 ಮಿ.ಮೀ. ಮಳೆ ಮಾತ್ರ ಸುರಿದಿದೆ.159 ಮಿ.ಮೀ. ಮಳೆ ಕೊರತೆಯಾಗಿದೆ.ತಾಲೂಕಿನಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು ರೈತರು ಸಸಿ ಮುಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.ಈಗಾಗಲೇ ಕೃಷಿ ಇಲಾಖೆಯಿಂದ ಕೆಎಚ್ ಪಿ -11 ( ಐ.ಇ.ಟಿ.ಸಣ್ಣ) ತುಂಗಾ, ಎಂ.ಟಿ.ಯು. 1001, ಆರ್.ಎನ್.ಆರ್ 15048, ಉಮಾ, ಜ್ಯೋತಿ ಎಂಬ ತಳಿಗಳ ಭತ್ತದ ಬೀಜಗಳನ್ನು ಎನ್.ಆರ್.ಪುರ ರೈತ ಸಂಪರ್ಕ ಕೇಂದ್ರದಿಂದ ಹಾಗೂ ಬಾಳೆಹೊನ್ನೂರು ರೈತ ಸಂಪರ್ಕ ಕೇಂದ್ರದಿಂದ ರೈತರು ಪಡೆದುಕೊಂಡಿದ್ದಾರೆ.
-- ಬಾಕ್ಸ್ --
ಎನ್.ಆರ್.ಪುರ ಹಾಗೂ ಬಾಳೆಹೊನ್ನೂರು ರೈತ ಸಂಪರ್ಕ ಕೇಂದ್ರದಲ್ಲಿ ಡಯಾಂಚ ಹಸಿರೆಲೆ ಗೊಬ್ಬರ ಬಿತ್ತನೆ ಬೀಜ, ಟೈಕೋ ಟರ್ಮ ರಿಯಾಯ್ತಿ ದರದಲ್ಲಿ ಲಭ್ಯವಿದೆ. ಭತ್ತದ ಸಾಲು ನಾಟಿ ಅಥವಾ ನಾಟೀ ಯಂತ್ರದಿಂದ ಭತ್ತದ ನಾಟೀ ಮಾಡುವ ರೈತರಿಗೆ 1 ಎಕ್ರೆಗೆ ಉಚಿತವಾಗಿ 25 ಕೆಜಿ ಆರ್ ಎನ್.ಆರ್. 150 48 ಬಿತ್ತನೆ ಬೀಜವನ್ನು ನೀಡಲಾಗುವುದು. ಈಗಾಗಲೇ 200 ರೈತರಿಗೆ ಉಚಿತ ಭತ್ತದ ಬೀಜವನ್ನು ನೀಡಲಾಗಿದೆ ಎಂದರು.