ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ದಾರಿಯ ಇಕ್ಕೆಲಗಳಲ್ಲಿ ಅಡಕೆಯ ಕಂಬಗಳನ್ನು ನೆಟ್ಟು ಭಗವಾಧ್ವಜ, ಕೇಸರಿ ಪತಾಕೆಗಳ ಅಲಂಕಾರ ಪುತ್ತಿಗೆಯತ್ತ ಸ್ವಾಗತಿಸುತ್ತಿದೆ . ಫ್ಲೆಕ್ಸುಗಳ ಅಬ್ಬರವೂ ಜೋರಾಗಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನೆಟ್ಟು ಸ್ವಾಗತ ಗೋಪುರ ರಚಿಸಲಾಗಿದೆ.
ಮೂಡುಬಿದಿರೆಯಿಂದ ಒಂಟಿಕಟ್ಟೆ ಪುತ್ತಿಗೆ, ಆಲಂಗಾರಿನಿಂದ ಕೊಡ್ಯಡ್ಕರಸ್ತೆ , ಕಡಂದಲೆ, ಪಾಲಡ್ಕದಿಂದ ಪುತ್ತಿಗೆ, ಮೂಲ್ಕಿ ಕಿನ್ನಿಗೋಳಿ, ಮಂಗಳೂರು ಮುಖ್ಯರಸ್ತೆ ವಿದ್ಯಾಗಿರಿಯಲ್ಲಿ ಮೂಲ್ಕಿ ರಸ್ತೆಗೆ ತೆರಳಿ ಸಂಪಿಗೆಯ ಪುತ್ತಿಗೆ ರಸ್ತೆ ಬಳಿ ನೂತನ ಶಾಶ್ವತ ಗೋಪುರವೂ ಉದ್ಘಾಟನೆಗೆ ಸಜ್ಜಾಗಿದೆ.ಹೊರೆಕಾಣಿಕೆ ಉತ್ಸವ:
ಸಂಸ್ಕೃತಿ ಮೇಳ:
ಒಂಟಿಕಟ್ಟೆಯ ಮುಖ್ಯರಸ್ತೆಯಲ್ಲಿ ಜಂಕ್ಷನ್ ಹಾದು ಪುತ್ತಿಗೆಯತ್ತ ಸಾಗುವಾಗ ಇಕ್ಕೆಲಗಳಲ್ಲಿ ಸಾಂಸ್ಕೃತಿಕ ಮೇಳವನ್ನೇ ಸ್ಥಳೀಯ ಯುವ ಉತ್ಸಾಹಿಗಳು ತೆರೆದಿಟ್ಟಿ ದ್ದಾರೆ. ಕೃಷಿಕನ ಮನೆ, ಕಂಬಳ ಕಟ್ಟೆ, ಈಶ್ವರ, ನೇಜಿ ನೆಡುವ, ತೆನೆ ಮಂಚ, ಬೊಂಬೆ ಯಕ್ಷಗಾನ, ಶಿವಲಿಂಗ ,ತೇರು, ಗಂಗಾಜಲಧಾರೆ, ಕಾಡ ಮನುಷ್ಯರು , ಶಿವಲಿಂಗ ಹೀಗೆ ಸಾಂಸ್ಕೃತಿಕ ಮೇಳವೇ ಭಜಕರನ್ನು ಸ್ವಾಗತಿಸುತ್ತಿದೆ.ಸ್ಥಳೀಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಅಯ್ಯಪ್ಪ ಸೇವಾವೃತ, ಸ್ನೇಹ ಯುವಕ ಮಂಡಲದ ನೂರಾರು ಯುವಕರು ಸಂಘಟಿತರಾಗಿ ತ್ಯಾಜ್ಯದ ಬೀಡಾಗಿದ್ದ ಈ ರಸ್ತೆಯ ಇಕ್ಕೆಲವನ್ನು ಮಾದರಿಯಾಗಿ ಮರು ರೂಪಿಸಿದ್ದಾರೆ. ಈ ಸ್ವಚ್ಛತೆಯ ಕಾಯಕ ಕಾಯ್ದು ಕೊಳ್ಳಲಾಗುವುದು ಎಂದು ಸ್ಥಳೀಯರಾದ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ಧಾರೆ.
ಪಾರ್ಕಿಂಗ್ ವ್ಯವಸ್ಥೆ:ಪೇಟೆಯಿಂದ ಒಂಟಿಕಟ್ಟೆ ಪುತ್ತಿಗೆ ಅಥವಾ ಸಂಪಿಗೆ ಮೂಲಕ ಪುತ್ತಿಗೆ ತಲುಪುವವರಿಗೆ ರಸ್ತೆಯ ಇಕ್ಕೆಲಗಳಲ್ಲಿ ಒಟ್ಟು 14 ಎಕರೆ ಪ್ರದೇಶವನ್ನು ಸಮತಟ್ಟಾಗಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಂತೆ, ಮೇಳಗಳಿಗೂ , ವ್ಯವಹಾರ ಮಳಿಗೆಗಳಿಗೂ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ.
ದೇವಳದ ಪರಿಸರದಲ್ಲಿ ಬೆಳಗ್ಗೆ, ಸಂಜೆ ಉಪಹಾರ, ಅಪರಾಹ್ನ, ರಾತ್ರಿ ಊಟೋ ಪಚಾರಕ್ಕೆ ಭಾರೀ ಭೋಜನ ಮಂಟಪ, ತಯಾರಿಗೆ ಪಾಕಶಾಲೆ ಈಗಾಗಲೇ ಸಜ್ಜಾಗಿದೆ.