ಮೂಡುಬಿದಿರೆ: ಹಲವು ದಶಕಗಳಿಂದ ಮೂಡುಬಿದಿರೆ ಮಾರ್ಕೆಟ್ನ ವಾರದ ಸಂತೆಯಲ್ಲಿ ಚಕ್ಕುಲಿ ಸಹಿತ ಕರಿದ ತಿಂಡಿ ತಿನಿಸುಗಳು, ತುಳುವರ ಪ್ರೀತಿಯ ಸೋಜಿ ಸಹಿತ ಪಾನೀಯಗಳ ವರ್ತಕರಾಗಿ ಜನಾನುರಾಗಿಯಾಗಿದ್ದ ಪುತ್ತಿಗೆ ಪದವು ಹಂಡೇಲಿನ ರಮೇಶ್ ಅಂಚನ್ (65) ಶುಕ್ರವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಸಂತೆ ಮಾರ್ಕೆಟ್ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರವಾದ ಬಳಿಕ ಪುತ್ತಿಗೆ ಪಂಚಾಯಿತಿ ಪಂಪ್ ಆಪರೇಟರ್ ಆಗಿ ತನ್ನ ಕರ್ತವ್ಯವನ್ನು ಅವರು ಮುಂದುವರೆಸಿದ್ದರು. 18 ಬಾರಿ ಶಬರಿ ಮಲೆ ಯಾತ್ರೆ ಕೈಗೊಂಡು ಗುರುಸ್ವಾಮಿಯಾಗಿಯೂ ಅವರು ಹಲವರಿಗೆ ಮಾರ್ಗದರ್ಶಕರಾಗಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.