ಚಳ್ಳಕೆರೆ: ಬೆಂಗಳೂರು-ಬೀದರ್ ರಾಷ್ಟ್ರೀಯ ಹೆದ್ದಾರಿ 150(ಎ)ಯ ಬಿ.ಜಿ.ಕೆರೆ ಬಳಿ ಕೆಎಸ್ಆರ್ಟಿಸಿ ಮತ್ತು ನೀರಿನ ಟ್ಯಾಂಕರ್ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಸಾರ್ವಕನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ ಚಾಲಕ ಪರಶುರಾಮ್(೩೫) ಡಿಕ್ಕಿ ರಭಸಕ್ಕೆ ಬಲಗಾಲಿಗೆ ಪೆಟ್ಟಾಗಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಎಚ್ಚರಗೊಂಡಿದ್ದಾನೆ. ಕೂಡಲೇ ಆತನನ್ನು ಸೇರಿ ಸುಮಾರು ೧೫ಕ್ಕೂ ಹೆಚ್ಚು ಜನರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸವಿತಾ(೩೮), ಚಂದ್ರಶೇಖರ್(೭೩), ತಿಲೋತ್ತಮೆ(೭೧), ಶಾಂತಮ್ಮ(೫೫), ಲಲಿತಾ ಕುಮಾರಿ(೬೦), ಲಕ್ಷ್ಮಿ (೩೮), ಸುಭದ್ರಮ್ಮ(೩೮), ಮಂಜುಶ್ರೀ(೩೩), ಈಶ್ವರಪ್ಪ (೬೫), ನೇತ್ರಾವತಿ (೪೩), ಧನ್ಯಶ್ರೀ (೭), ಅಮೃತ (೩೩), ನೀಲಮ್ಮ (೪೫), ರಘು (೨೪), ಯಶೋಧಮ್ಮ (೪೭), ಇಬ್ರಾಮ್ (೨೨), ಸೈಯಾದ್ ಇಮಾಮ್ (೨೧) ಸಣ್ಣಮರಿಸ್ವಾಮಿ (೩೫), ನಾಗರಾಜ (೬೦), ಕರಿಯಮ್ಮ (೭೦) ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.