ಜಿಲ್ಲೆಯಲ್ಲಿ 35 ಕೆಜಿಗೂ ಅಧಿಕ ಗಾಂಜಾ ನಾಶ

KannadaprabhaNewsNetwork |  
Published : Feb 09, 2024, 01:47 AM IST
8ಕೆಡಿವಿಜಿ1-ದಾವಣಗೆರೆ ತಾ. ಆವರಗೊಳ್ಳದ ಬಳಿ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 35.409 ಕೆಜಿ ಗಾಂಜಾ ನಾಶಪಡಿಸುವ ವೇಳೆ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಜಿ.ಮಂಜುನಾಥ ಇತರೆ ಅಧಿಕಾರಿಗಳು ಇದ್ದರು. ...............8ಕೆಡಿವಿಜಿ2-ದಾವಣಗೆರೆ ತಾ. ಆವರಗೊಳ್ಳದ ಬಳಿ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಜಿ.ಮಂಜುನಾಥ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ 35.409 ಕೆಜಿ ಗಾಂಜಾಗೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು. | Kannada Prabha

ಸಾರಾಂಶ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ 35 ಕೆಜಿ 409 ಗ್ರಾಂ ಗಾಂಜಾ ಜಪ್ತು ಮಾಡಲಾಗಿತ್ತು. ಒಟ್ಟು 19 ಪ್ರಕರಣಗಳಲ್ಲಿ ಜಪ್ತು ಮಾಡಿದ್ದ ಸುಮಾರು 3.64,400 ರು. ಮೌಲ್ಯದ ಗಾಂಜಾ ನಾಶಪಡಿಸಲು ನ್ಯಾಯಾಲಯದಿಂದ ಡ್ರಗ್ ಡಿಸ್ಪೋಸಲ್ ಕಮಿಟಿ ಮುಖಾಂತರ ಗಾಂಜಾ ನಾಶಕ್ಕೆ ಅನುಮತಿ ಪಡೆಯಲಾಗಿತ್ತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಎನ್‌ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 3,64,400 ರು. ಮೌಲ್ಯದ 35 ಕೆಜಿ 409 ಗ್ರಾಂ ಗಾಂಜಾವನ್ನು ತಾಲೂಕಿನ ಆವರಗೊಳ್ಳ ಗ್ರಾಮದ ಹೊರ ವಲಯದ ದಾವಣಗೆರೆ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

ತಾಲೂಕಿನ ಆವರಗೊಳ್ಳ ಸಮೀಪದ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಡ್ರಗ್ ಡಿಸ್ಪೋಸಲ್ ಕಮಿತಿ ಅಧ್ಯಕ್ಷರು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಸಮಿತಿ ಸದಸ್ಯರಾದ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ಅಧಿಕಾರಿ, ಸಿಬ್ಬಂದಿ, ಪಂಚರ ಸಮಕ್ಷಮದಲ್ಲಿ 35 ಕೆಜಿಗೂ ಅದಿಕ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ 35 ಕೆಜಿ 409 ಗ್ರಾಂ ಗಾಂಜಾ ಜಪ್ತು ಮಾಡಲಾಗಿತ್ತು. ಒಟ್ಟು 19 ಪ್ರಕರಣಗಳಲ್ಲಿ ಜಪ್ತು ಮಾಡಿದ್ದ ಸುಮಾರು 3.64,400 ರು. ಮೌಲ್ಯದ ಗಾಂಜಾ ನಾಶಪಡಿಸಲು ನ್ಯಾಯಾಲಯದಿಂದ ಡ್ರಗ್ ಡಿಸ್ಪೋಸಲ್ ಕಮಿಟಿ ಮುಖಾಂತರ ಗಾಂಜಾ ನಾಶಕ್ಕೆ ಅನುಮತಿ ಪಡೆಯಲಾಗಿತ್ತು.

ಜಿಲ್ಲೆಯ ಪರಿಸರ ಅಧಿಕಾರಿಗಳು ನಿಗದಿಪಡಿಸಿದ ಸ್ಥಳವಾದ ತಾಲೂಕಿನ ಆವರಗೊಳ್ಳ ಗ್ರಾಮದ ಹೊರ ವಲಯದ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಡ್ರಗ್ ಡಿಸ್ಪೋಸಲ್‌ ಸಮಿ ತಿ ಅಧ್ಯಕ್ಷರೂ ಆದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿಗಳಾದ ದಾವಣಗೆರೆ ನಗರದ ಮಲ್ಲೇಶ ದೊಡ್ಮನಿ, ಚನ್ನಗಿರಿಯ ಪ್ರಶಾಂತ್ ಮನ್ನೋಳಿ, ಅಧಿಕಾರಿ, ಸಿಬ್ಬಂದಿ ಹಾಗೂ ಪಂಚರ ಸಮ್ಮುಖದಲ್ಲಿ 35.409 ಕೆಜಿ ಗಾಂಜಾಗೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು.

................

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ