ಕರುಳ ಬಳ್ಳಿಗಳನ್ನು ಚಿವುಟಿ ತಾಯಿ ಆತ್ಮಹತ್ಯೆ

KannadaprabhaNewsNetwork |  
Published : Feb 26, 2024, 01:33 AM IST
ಸಲೆಂಮ | Kannada Prabha

ಸಾರಾಂಶ

ಗಂಡ ಮತ್ತು ಗಂಡನ ಮನೆಯವರು ಕಿರುಕುಳ ನೀಡಿದ್ದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಶಿವಕಲ್ಲಪ್ಪ ಫಕ್ಕೀರಪ್ಪ ನರ್ತಿ ದೂರಿದ್ದು, ಮಗಳ ಸಾವಿನ ಕುರಿತು ಶಂಕೆ ಇದ್ದು ಕೂಲಂಕಷವಾಗಿ ತನಿಖೆಯಾಗಬೇಕು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ನವಲಗುಂದ

ಇಬ್ಬರು ಪುಟ್ಟ ಕಂದಮ್ಮಗಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ತಾಯಿ, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮೊರಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಾವಿತ್ರಿ ಮಂಜುನಾಥ ಸರಕಾರ (26), ಮಕ್ಕಳಾದ ದರ್ಶನ (6) ಮತ್ತು ಸುಮಾ (4) ಮೃತ ದುರ್ದೈವಿಗಳು.

ಗಂಡ ಮತ್ತು ಗಂಡನ ಮನೆಯವರು ಕಿರುಕುಳ ನೀಡಿದ್ದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಶಿವಕಲ್ಲಪ್ಪ ಫಕ್ಕೀರಪ್ಪ ನರ್ತಿ ದೂರಿದ್ದು, ಮಗಳ ಸಾವಿನ ಕುರಿತು ಶಂಕೆ ಇದ್ದು ಕೂಲಂಕಷವಾಗಿ ತನಿಖೆಯಾಗಬೇಕು ಎಂದಿದ್ದಾರೆ.

ಮದುವೆಯಾಗಿ 6 ವರ್ಷಗಳು ಕಳೆದರೂ ಗಂಡ ಮಂಜುನಾಥ ಕಲ್ಲಪ್ಪ ಸರಕಾರ, ಪಾರ್ವತೆವ್ವ ಕಲ್ಲಪ್ಪ ಸರಕಾರ, ಕಲ್ಲಪ್ಪ ಶಿವಪ್ಪ ಸರಕಾರ ಮಾನಸಿಕ ಕಿರುಕುಳ ನೀಡುತ್ತಿದ್ದರು. ಸಾವಿತ್ರಿಗೆ ಕೆಲಸ ಮಾಡಲು ಬರುವುದಿಲ್ಲ ಎಂದು ಬೈದಾಡುತ್ತಿದ್ದರು. ಅಲ್ಲದೆ, ಮನೆಗೆ ಬರುವವರ ಮುಂದೆ ಅವಮಾನಿಸಿದ್ದರಿಂದ ಮಾನಸಿಕವಾಗಿ ನೊಂದು ಶನಿವಾರ ರಾತ್ರಿ ವೇಳೆ ಮನೆಯ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಮ್ಮಕ್ಕಳಾದ ದರ್ಶನ ಮತ್ತು ಸುಮಾ ಅವರ ಕುತ್ತಿಗೆಗೆ ಗಾಯವಾಗಿದ್ದು, ಕೊಲೆ ಮಾಡಿದ್ದಾರೆ ಎಂಬ ಸಂಶಯವಿದೆ ಎಂದು ಶಿವಕಲ್ಲಪ್ಪ ನರ್ತಿ (ಧಾರವಾಡ ಜಿಲ್ಲೆಯ ಸುಳ್ಳ ಗ್ರಾಮ) ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿಎಸ್‌ಪಿ ಎ.ಎಂ. ನಾಗರಾಜ, ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್ಐ ಜನಾರ್ದನ ಭಟ್ರಳ್ಳಿ, ತನಿಖಾಧಿಕಾರಿ ನೇತ್ರಾ ಕಾಡಾಪುರ, ಎಎಸ್ಐ ಯಲ್ಲಪ್ಪ ಮೇಟಿ ಹಾಗೂ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ನಡೆದ ಈ ಘಟನೆಯಿಂದ ನೀರವ ಮೌನ ಆವರಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಪಾಲಿಗೆ ವೈದ್ಯರು ದೇವರಾಗಿ, ರಾಕ್ಷಸರಾಗಬೇಡಿ: ಡಿಸಿ ಸಂಗಪ್ಪ
ನಾಡಿದ್ದು ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ