ಮಾತೃ ಹೃದಯಿ ಮುಮ್ಮಡಿ ನಿರ್ವಾಣ ಶ್ರೀಗಳು

KannadaprabhaNewsNetwork |  
Published : Jun 24, 2026, 01:30 AM IST
ಕೆ ಕೆ ಪಿ ಸುದ್ದಿ 03: ಲಿಂಗೈಕ್ಯ ಶ್ರೀಗಳ ಸುದ್ದಿ | Kannada Prabha

ಸಾರಾಂಶ

ಕನಕಪುರ: ಸುಮಾರು 700 ವರ್ಷಗಳ ಇತಿಹಾಸ ಹೊಂದಿರು ಶ್ರೀ ದೇಗುಲ ಮಠದ ಹಿರಿಯ ಮುಮ್ಮಡಿ ಡಾ. ಶ್ರೀ ನಿರ್ವಾಣ ಸ್ವಾಮೀಜಿ ಲಿಂಗೈಕ್ಯದಿಂದ ತಾಲೂಕಿನ ಶ್ರದ್ಧಾ ಹಾಗೂ ಭಕ್ತಿ ಕೇಂದ್ರದ ಹಿರಿಯ ಕೊಂಡಿಯೊಂದು ಕಳಚಿ ಭಕ್ತ ಸಮೂಹ ಅನಾಥವಾಗಿದೆ

ಕನಕಪುರ: ಸುಮಾರು 700 ವರ್ಷಗಳ ಇತಿಹಾಸ ಹೊಂದಿರು ಶ್ರೀ ದೇಗುಲ ಮಠದ ಹಿರಿಯ ಮುಮ್ಮಡಿ ಡಾ. ಶ್ರೀ ನಿರ್ವಾಣ ಸ್ವಾಮೀಜಿ ಲಿಂಗೈಕ್ಯದಿಂದ ತಾಲೂಕಿನ ಶ್ರದ್ಧಾ ಹಾಗೂ ಭಕ್ತಿ ಕೇಂದ್ರದ ಹಿರಿಯ ಕೊಂಡಿಯೊಂದು ಕಳಚಿ ಭಕ್ತ ಸಮೂಹ ಅನಾಥವಾಗಿದೆ.

1943ರ ಮೇ 20ರಂದು ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ವೀರಭದ್ರಪ್ಪ-ತಾಯಮ್ಮ ದಂಪತಿಗೆ ಜನಿಸಿದ ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ಶಿವರುದ್ರಸ್ವಾಮಿ, ಸ್ವಗ್ರಾಮ ಕುರುಬೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಚಾಮರಾಜನಗರದ ಸುತ್ತೂರು ಮಠದ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು ಪ್ರೌಢಶಿಕ್ಷಣ ಮುಗಿಸಿದ ನಂತರ ಮೈಸೂರಿನ ತಂಪು ನೇರಳೆ ಸಾಹುಕಾರ್ ಸಿದ್ದಲಿಂಗಯ್ಯನವರ ವಸತಿ ನಿಲಯದಲ್ಲಿದ್ದು ಶಾರದಾ ವಿಲಾಸ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಶ್ರೀಗಳು, ಬಿಡುವಿನ ವೇಳೆಯಲ್ಲಿ ತಮ್ಮ ಸ್ವಗ್ರಾಮದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದರು. 1965ರಲ್ಲಿ ಶ್ರೀಗಳ ತಂದೆ ಲಿಂಗೈಕ್ಯರಾದ

ಬಳಿಕ ಶಿಕ್ಷಣದ ಜೊತೆಗೆ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. 1970ರಲ್ಲಿ ಮಳವಳ್ಳಿ ತಾಲೂಕಿನ ನೆಲ್ಲಗೆರೆ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಧಿಕಾರ ಪಡೆದು ಮಠವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. 1977ರಲ್ಲಿ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳ ಒತ್ತಾಸೆಯಂತೆ ತಮ್ಮ 34ನೇ ವಯಸ್ಸಿಗೆ ಶ್ರೀ ಮಠದ ಉತ್ತರಾಧಿಕಾರಿಯಾಗಿ ಬಂದು ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳಾಗಿ ದೀಕ್ಷೆ ಪಡೆದು ಮಠದ ಧಾರ್ಮಿಕ, ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಂಡರು.

ಶ್ರೀಮಠದ ಉತ್ತರಾಧಿಕಾರಿಯಾದ ಬಳಿಕ ಹಲವು ಬದಲಾವಣೆ ತಂದು ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ ಕೆಲಸ ಕಾರ್ಯದ ಜೊತೆಗೆ ಶ್ರೀ ಮಠಕ್ಕೆ ಬರುವ ಭಕ್ತಾದಿಗಳಿಗೆ ಹಸಿವು ನೀಗಿಸಲು ಪ್ರತಿನಿತ್ಯ ಅನ್ನದಾಸೋಹ ಆರಂಭಿಸಿದ್ದರು.

ಕೆ ಕೆ ಪಿ ಸುದ್ದಿ 03:

ಲಿಂಗೈಕ್ಯ ಶ್ರೀಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾವು ತಿನ್ನಲು ಅಡ್ಡಿಯಾದ ಕಾರು ಜಖಂ ಮಾಡಿದ ಕಾಡಾನೆ
ಪಿಯು ಉಪನ್ಯಾಸಕರು ಪ್ರೌಢಶಾಲೆಗೆ ಬೋಧಿಸಲು ತಿದ್ದುಪಡಿ ವಿರೋಧಿಸಿ ಉಪನ್ಯಾಸಕರ ಪ್ರತಿಭಟನೆ