ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮಸೂದೆಯಲ್ಲಿ ಶೇಕಡ 50ರಷ್ಟು ಸಂಸತ್ ಸದಸ್ಯರ ಸ್ಥಾನಗಳು ಹೆಚ್ಚಳವಾಗುತ್ತಿತ್ತು. ಇದರಿಂದ ಕರ್ನಾಟಕಕ್ಕೆ 28 ರಿಂದ 42, ತಮಿಳುನಾಡಿಗೆ 39 ರಿಂದ 59 ಸ್ಥಾನ ಸಿಗುತ್ತಿತ್ತು. ಆದರೀಗ 2027ರ ಜನಗಣತಿ ಆಧರಿಸಿದರೆ ಕರ್ನಾಟಕಕ್ಕೆ 3, ತಮಿಳುನಾಡಿಗೆ 10 ಸ್ಥಾನ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದರು.
ದೇಶದಲ್ಲಿ 1952ರಲ್ಲಿ 36 ಕೋಟಿ ಜನಸಂಖ್ಯೆ ಇದ್ದಾಗ ಮೊದಲ ಕ್ಷೇತ್ರ ಪುನರ್ ವಿಂಗಡಣೆ ನಡೆದಿತ್ತು. 1962ರಲ್ಲಿ 43 ಕೋಟಿ ಜನಸಂಖ್ಯೆ ಇದ್ದಾಗ 494 ಸಂಸತ್ ಸ್ಥಾನ, 1971ರಲ್ಲಿ 54 ಕೋಟಿ ಜನಸಂಖ್ಯೆಗೆ 543 ಸಂಸದರ ಸ್ಥಾನಗಳಿತ್ತು. ಈಗ 140 ಕೋಟಿ ಜನಸಂಖ್ಯೆ ಇದೆ. ಆದರೂ ಕಳೆದ 55 ವರ್ಷಗಳಿಂದ ಕ್ಷೇತ್ರ ಪುನರ್ ವಿಂಗಡಣೆಯೇ ಆಗಿಲ್ಲ ಎಂದು ಹೇಳಿದರು.ಜನಸಂಖ್ಯೆ ಆಧಾರದ ಮೇಲೆ ಶಾಸನಸಭೆ ಮತ್ತು ಲೋಕಸಭೆ ಸದಸ್ಯ ಸ್ಥಾನಗಳು ಹೆಚ್ಚಳವಾಗಬೇಕು ಎಂಬುದು ಸಾಮಾನ್ಯ ಜ್ಞಾನ. ಆದರೆ, ಕಾಂಗ್ರೆಸ್ ಮಿತ್ರ ಪಕ್ಷಗಳು ಯಾವ ಉದ್ದೇಶದಿಂದ ವಿರೋಧಿಸಿದರೋ ಗೊತ್ತಿಲ್ಲ. ಈಗ 2011ರ ಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ಸಂಸತ್ ಸ್ಥಾನಗಳ ಸಂಖ್ಯೆ ಕಡಿಮೆಯಾಗಿ ಅನ್ಯಾಯವಾಗುತ್ತದೆ ಎಂದು ಅಪಪ್ರಚಾರ ನಡೆಸಲಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷೆ ಆದ ರಾಜ್ಯ ವಕ್ತಾರೆ ಅಶ್ವಿನಿ ಶಂಕರ್ , ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ಪ್ರಕಾಶ್, ಚಂದ್ರಶೇಖರ್, ಶಿವಮುತ್ತು, ಗ್ರಾಮಾಂತರ ಅಧ್ಯಕ್ಷ ಜಗದೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮಾಧ್ಯಮ ಸಂಚಾಲಕ ಚೇತನ್, ಮುಖಂಡರಾದ ಕಾಳಯ್ಯ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜಯಕುಮಾರ್, ಎಸ್. ಆರ್. ನಾಗರಾಜ್, ಪದ್ಮನಾಭ, ಸುನೀಲ್, ಪವಿತ್ರ, ವೀಣಾ, ದೇವಿಕಾ ಮತ್ತಿತರರು ಇದ್ದರು.
ಇಂಡಿಯಾ ಕೂಟದಿಂದ ಮಸೂದೆ ಕೊಲ್ಲುವ ಕೃತ್ಯ । ಪುರುಷರ ಸ್ಥಾನ ಕಡಿಮೆಯಾಗುತ್ತಿರಲಿಲ್ಲ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿತ್ತು
ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ಮಾದರಿಯಾದರು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬಣ್ಣಿಸಿದರು.
ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಪಿ.ವಿ.ನರಸಿಂಹರಾವ್ ಅವರಿಗೂ ಶಾಸನಸಭೆ ಮತ್ತು ಲೋಕಸಭೆಗಳಲ್ಲಿಯೂ ಮಹಿಳಾ ಮೀಸಲಾತಿ ಜಾರಿಗೆ ತರುವಂತೆ ಪತ್ರ ಬರೆದಿದ್ದರು. ಆನಂತರ 1996ರಲ್ಲಿ ದೇವೇಗೌಡ ಅವರೇ ಪ್ರಧಾನಿ ಆಗಿದ್ದಾಗ ಕರ್ನಾಟಕದ ಮಾದರಿಯಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದಾಗ ಅಂಗೀಕಾರಗೊಳ್ಳಲಿಲ್ಲ.
ಈ ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದರೆ ಎಲ್ಲ ಪಕ್ಷಗಳಿಗೂ ಕ್ರೆಡಿಟ್ ಸಿಗುತ್ತಿತ್ತು. ಇದರಿಂದ