ವಿವಿಧ ಕಾಮಗಾರಿಗೆ ಸಂಸದ ತುಕಾರಾಂ ಭೂಮಿಪೂಜೆ

KannadaprabhaNewsNetwork |  
Published : Sep 24, 2024, 01:52 AM IST
ಸ | Kannada Prabha

ಸಾರಾಂಶ

₹೧ ಕೋಟಿ ವೆಚ್ಚದಲ್ಲಿ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ೬ ಕೊಠಡಿಗಳು.

ಸಂಡೂರು: ಸಂಸದ ಈ. ತುಕಾರಾಂ ಶನಿವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಪೂಜೆ ಪೂಜೆ ನೆರವೇರಿಸಿದರು ಹಾಗೂ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದರು.₹೬೦ ಲಕ್ಷ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ೪೦ ರಿಂದ ಗಂಗಲಾಪುರದವರೆಗಿನ ರಸ್ತೆ ಅಭಿವೃದ್ಧಿ, ₹೪ ಕೋಟಿ ವೆಚ್ಚದಲ್ಲಿ ತಾಳೂರು ಗ್ರಾಮದಿಂದ ಭುವನಹಳ್ಳಿವರೆಗಿನ ರಸ್ತೆ ಅಭಿವೃದ್ಧಿ, ₹೪೫ ಲಕ್ಷ ವೆಚ್ಚದಲ್ಲಿ ಬನ್ನಿಹಟ್ಟಿ ಗ್ರಾಮದ ಮುಖ್ಯರಸ್ತೆಯಿಂದ ಸರ್ಕಾರಿ ಪ್ರೌಢ ಶಾಲೆಯವರೆಗಿನ ರಸ್ತೆ ಅಭಿವೃದ್ಧಿ, ₹೪೦ ಲಕ್ಷ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ೧೩೧ ರಿಂದ ಲಿಂಗದಹಳ್ಳಿಯವರೆಗಿನ ರಸ್ತೆ ಅಭಿವೃದ್ಧಿ, ₹೪.೫೦ ಕೋಟಿ ವೆಚ್ಚದಲ್ಲಿ ಮಾಳಾಪುರ ಗ್ರಾಮದಿಂದ ಡಿ. ಅಂತಾಪುರದವರೆಗೆ ರಸ್ತೆ ಅಭಿವೃದ್ಧಿ ಹಾಗೂ ಬಸ್ ತಂಗುದಾಣ ಉದ್ಘಾಟನೆ, ₹೪೦ ಲಕ್ಷ ವೆಚ್ಚದಲ್ಲಿ ಯು.ರಾಜಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ೨ ಕೋಟಿ ವೆಚ್ಚದಲ್ಲಿ ತಿಮ್ಮಲಾಪುರ ಗ್ರಾಮದ ಬಳಿಯಲ್ಲಿ ಸೇತುವೆ ನಿರ್ಮಾಣ, ₹೨೫ ಲಕ್ಷ ವೆಚ್ಚದಲ್ಲಿ ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ. ₹೭೫ ಲಕ್ಷ ವೆಚ್ಚದಲ್ಲಿ ಎಂ. ಬಸಾಪುರ ಗ್ರಾಮದಿಂದ ತಾಲೂಕಿನ ಗಡಿ ಭಾಗದವರೆಗೆ ರಸ್ತೆ ಅಭಿವೃದ್ಧಿ, ₹೧.೫೦ ಕೋಟಿ ವೆಚ್ಚದಲ್ಲಿ ಕೆರೆರಾಂಪುರ ಗ್ರಾಮದಿಂದ ತಿಮ್ಮಲಾಪುರ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ, ₹೧.೫೦ ಕೋಟಿ ವೆಚ್ಚದಲ್ಲಿ ವಿಠಲಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಿಂದ ಮೆಟ್ರಿಕಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ, ₹೬೦ ಲಕ್ಷ ವೆಚ್ಚದಲ್ಲಿ ವಿಠಲಾಪುರ ಗ್ರಾಮದಲ್ಲಿ ಪ.ಜಾತಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ, ₹೪.೪೩ ಕೋಟಿ ವೆಚ್ಚದಲ್ಲಿ ವಿಠಲಾಪುರ ಗ್ರಾಮದಿಂದ ಡಿ. ಅಂತಾಪುರ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ, ವಿಠಲಾಪುರ ಕ್ರಾಸ್‌ದಿಂದ ತುಮಟಿ ಗ್ರಾಮದವರೆಗಿನ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಹಾಗೂ ₹೫೦ ಲಕ್ಷ ವೆಚ್ಚದಲ್ಲಿ ಬೆಳಗಲ್, ಬನ್ನಿಹಟ್ಟಿ, ರಾಜಾಪುರ, ಮೆಟ್ರಿಕಿ, ಡಿ. ಆಂತಾಪುರ ಗ್ರಾಮ ಪರಿಮಿತಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ.

ಉದ್ಘಾಟನೆಗೊಂಡ ಕಾಮಗಾರಿಗಳು:

₹೧ ಕೋಟಿ ವೆಚ್ಚದಲ್ಲಿ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ೬ ಕೊಠಡಿಗಳು ಹಾಗೂ ₹೧೫ ಲಕ್ಷ ವೆಚ್ಚದಲ್ಲಿ ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಕಾಮಗಾರಿ, ಗ್ರಾಪಂ ಜನಪ್ರತಿನಿಧಿಗಳು, ಹಲವು ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!