ಕುವೆಂಪು ವಿದ್ಯಾಸಂಸ್ಥೆಯ ಮಹಮ್ಮದ್ ಇರ್ಮಾನ್ ಪ್ರಥಮ

KannadaprabhaNewsNetwork |  
Published : Apr 10, 2025, 01:19 AM IST
ಪ್ರಥಮ | Kannada Prabha

ಸಾರಾಂಶ

ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ಗಳಿಸಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಿದೆ. 14 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಾಣಿಜ್ಯ ವಿಭಾಗದಲ್ಲಿ 37 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಓರ್ವ ವಿದ್ಯಾರ್ಥಿ ಅನುತ್ತೀರ್ಣಗೊಂಡಿದ್ದು, ಶೇ.97.02 ರಷ್ಟು ಫಲಿತಾಂಶದೊಂದಿಗೆ ಒಟ್ಟಾರೆ ಕಾಲೇಜಿಗೆ ಶೇ.97.14 ಫಲಿತಾಂಶ ದೊರೆತಿದೆ.

ವಿಜ್ಞಾನ ವಿಭಾಗದಲ್ಲಿ ಮಹಮ್ಮದ್ ಇರ್ಮಾನ್(ಶೇ.96) , ಎಸ್.ವೈ.ಹಿಮಾನಿ(ಶೇ.94.33 ), ವೈ.ಎಸ್.ಧನ್ಯ(ಶೇ.93) , ವಾಣಿಜ್ಯ ವಿಭಾಗದ ಕೆ.ಎಂ.ಸೃಷ್ಟಿ(ಶೇ..95), ಡಿ.ಕೆ.ಸ್ನೇಹ(ಶೇ.94) , ಎಂ.ಡಿ.ಖುಷಿ(ಶೇ.93.05) , ಕೆ.ಯು.ಸಚಿನ್(91.05) ಅಂಕ ಪಡೆದಿದ್ದಾರೆ.

ಸಂತಜೋಸೆಫರ ಪಿಯು ಕಾಲೇಜಿಗೆ ಶೇ. 88.49 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದಲ್ಲಿ 73 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.95.89 ಹಾಗು ವಿಜ್ಞಾನ ವಿಭಾಗದಲ್ಲಿ 40 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 75 ಫಲಿತಾಂಶ ದೊರೆತ್ತಿದೆ.

ವಿಜ್ಞಾನ ವಿಭಾಗದಲ್ಲಿ ಎಂ.ದಿವಿನ್(ಶೇ.95.05) , ಎನ್.ಕೆ.ನಿತೀನ್ ಕುಮಾರ್(ಶೇ.93.83) , ಪ್ರತೀಕ್ ಶೆಟ್ಟಿ(ಶೇ.87.83 ), ವಾಣಿಜ್ಯ ವಿಭಾಗದಲ್ಲಿ ವಿಭಾಗದಲ್ಲಿ ಎಸ್.ಎನ್.ಧನ್ಯ( ಶೇ.95) , ಬಿ.ಇ.ರಶೀದ(ಶೇ.94.16) , ಎಚ್.ಎಸ್.ಪಲ್ಲವಿ(ಶೇ.93.66 ) ಅಂಕ ಗಳಿಸಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇಕಡಾವಾರು 71.21 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದಲ್ಲಿ 42 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು 32 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ. 76.19 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ.62.5 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದಲ್ಲಿ ಪಿ.ಸಿ.ದೀಕ್ಷಿತಾ(ಶೇ.80.33) , ಎಂ.ಶ್ರವಣ್(ಶೇ.87.83) , ಫಾತಿಮತ್ ಸಜೀನ(ಶೇ.87.33 ), ನವಜೀತ್(ಶೇ.85.16 ) ಅಂಕಗಳಿಸಿದ್ದಾರೆ.

ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ. 69 ಫಲಿತಾಂಶ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ