ಕನ್ನಡಪ್ರಭ ವಾರ್ತೆ ಮಂಗಳೂರು
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಮನೋಜ್ ಕುಮಾರ್, ಒಂದೂವರೆ ಎಕರೆ ಜಾಗದಲ್ಲಿ ೯೦ ಕೋಟಿ ರು. ಹಣವನ್ನು ಗುತ್ತಿಗೆದಾರರೇ ಭರಿಸಿಕೊಂಡು ಮಾಡುವ ಯೋಜನೆ ಇದಾಗಿದೆ. ಗುತ್ತಿಗೆದಾರರಿಂದ ಕೆಲಸ ಆರಂಭಿಸಲಾಗಿತ್ತು. ಕಾರಣಾಂತರ ಕಾಮಗಾರಿ ಸ್ಥಗಿತಗೊಂಡಿದ್ದು, ಇದೀಗ ಗುತ್ತಿಗೆದಾರರ ಪತ್ನಿ ಈ ಯೋಜನೆ ಮುಂದುವರಿಸುವ ಭರವಸೆ ನೀಡಿದ್ದಾರೆ. ಡಿಸೆಂಬರ್ನಲ್ಲಿ ಮತ್ತೆ ಕಾಮಗಾರಿ ಆರಂಭಿಸಲು ಸ್ಮಾರ್ಟ್ಸಿಟಿ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಕಾಮಗಾರಿ ನಡೆಸುವ ಬದಿಯಲ್ಲಿ ಕಾಲುದಾರಿಯಾಗಿ ಬಳಕೆಯಲ್ಲಿರುವ ಸಣ್ಣ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ನಿತ್ಯ ನೂರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ. ಅದನ್ನು ಡಾಮರೀಕರಣ ಮಾಡಬೇಕಿದೆ ಎಂದು ಸ್ಥಳೀಯರು ಮೇಯರ್ ಅವರಲ್ಲಿ ಮನವಿ ಮಾಡಿದರು. ತಾತ್ಕಾಲಿಕ ರಸ್ತೆ ಡಾಮರೀಕರಣ ನಡೆಸುವಂತೆ ಮೇಯರ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾಮಂಗಳ, ಸ್ಥಳೀಯ ಸದಸ್ಯೆ ಪೂರ್ಣಿಮಾ, ಸ್ಮಾರ್ಟ್ಸಿಟಿ ಅಧಿಕಾರಿ ಅರುಣ್ ಪ್ರಭಾ, ಗುತ್ತಿಗೆದಾರ ಅನುರಾಧಾ ಪ್ರಭು ಇದ್ದರು