ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂಸದರ ಬಾಗಲಕೋಟ ಕಚೇರಿಯಲ್ಲಿ ಭೇಟಿಯಾದ ಖಾಜಿ, ಗದಗ, ಬಾಗಲಕೋಟೆ ಮಾರ್ಗದಿಂದ ಸಾಗುವುದರಿಂದ ಕರ್ನಾಟಕದ ಆರು ಜಿಲ್ಲೆಗಳಿಗೆ ಸಂಪರ್ಕ ಸಿಗುವುದು ಮತ್ತು ಎರಡು ರಾಜಧಾನಿಗಳ ಸಂಪರ್ಕದಿಂದ ವ್ಯಾಪಾರಕ್ಕೆ ಉತ್ತೇಜನ ನೀಡಿದಂತಾಗುವುದು. ಇದರಲ್ಲಿ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿ ಸಂಸದರನ್ನು ಸೇರಿಸಿಕೊಂಡು ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಪ್ರಾರಂಭ ಮಾಡಬೇಕಾಗುತ್ತೆ ಎಂದು ತಿಳಿಸಿದರು. ಅದರಂತೆ ಬಿಜಾಪುರ ತಿರುಪತಿ, ಬಿಜಾಪುರ ಗುಂಠಕಲ, ಬಳ್ಳಾರಿ ಮುಂಬಯಿ ಹೊಸ ರೈಲುಗಳು ಸಾಪ್ತಹಿಕವಿದ್ದ ಶಿರಡಿ ರೈಲು ದಿನನಿತ್ಯ ಪ್ರಾರಂಭಿಸಲು ರೈಲ್ವೆ ಮಂತ್ರಿಗಳ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು. ಈ ವೇಳೆ ಜಯಂತ ಕುರಂದವಾಡ ಹಾಗೂ ಗಿರೀಶ ಬಾಂಡಗೆ, ಮೈನುದ್ದೀನ ಖಾಜಿ ಇದ್ದರು.