ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದಲ್ಲಿ ಭಾನುವಾರ ಕೊಲ್ಹಾರ ಹೋಬಳಿ ಘಟಕ ಹಮ್ಮಿಕೊಂಡ ಆರ್ಎಸ್ಎಸ್ ತಾಲೂಕು ಪಥಸಂಚಲನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘ ಸಮಾಜದಲ್ಲಿ ವಿಲೀನವಾಗಿದೆ. ಸಕಲರು ಸಂಘವನ್ನು ಸ್ವೀಕರಿಸಿದ್ದು, ಇಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿದೆ. ಇಂದು ಸಂಘ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಆದರೆ, ದುರದೃಷ್ಟವಶಾತ ಬೇರೆ ಬೇರೆ ಕಾರಣಗಳಿಂದ ದೇಶದಲ್ಲಿ ಸಂಘವನ್ನು ಎರಡು ಸಲ ನಿಷೇಧ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.ಸಂಘ ಸಮಾಜದಲ್ಲಿ ಸಾಮರಸ್ಯ ತರಲು ಪಂಚ ಪರಿವರ್ತನೆಗಳನ್ನು ಹಮ್ಮಿಕೊಂಡಿದೆ. ಸಾಮಾಜಿಕ ಸಾಮರಸ್ಯ, ಪ್ರಕೃತಿ ಪಾಲನೆ, ಸ್ವದೇಶಿ ಮನೋಭಾವನೆ, ನಾಗರಿಕ ಶಿಷ್ಟಾಚಾರ, ಕುಟುಂಬ ಪ್ರಬೋಧನೆಗಳು ಪಂಚ ಪರಿವರ್ತನೆಗಳಾಗಿವೆ. ಭಾರತ ಇಡೀ ಜಗತ್ತಿನಲ್ಲಿ ಗುರುತಿಸಿಕೊಳ್ಳುವುದು ಇಲ್ಲಿನ ಕುಟುಂಬ ವ್ಯವಸ್ಥೆಯಿಂದ ಎಂದರು.
ಸಂಘ ಶತಾಬ್ದಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಳೀಯ ಹೋಬಳಿ ಘಟಕದಿಂದ ಭವ್ಯವಾದ ಪಥಸಂಚಲನ ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. ದಿಗಂಬರೇಶ್ವರ ಮಠ ಬಸ್ ನಿಲ್ದಾಣದಿಂದ ಪ್ರಾರಂಭವಾದ ಗಣವೇಶಧಾರಿ ಸ್ವಯಂಸೇವಕರ ಪಥಸಂಚಲನವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ತಲುಪಿತು.ಪಥಸಂಚಲನ ಹಾಯ್ದು ಹೋಗುವ ದಾರಿಯಲ್ಲಿ ರಂಗೋಲಿ ಚಿತ್ತಾರ ಹಾಕಿ ಸಿಂಗಾರ ಮಾಡಲಾಗಿತ್ತು, ಗಣವೇಷಧಾರಿಗಳಿಗೆ ಪುಷ್ಪ ವೃಷ್ಟಿಗೈದು ಸ್ವಾಗತಿಸಲಾಯಿತು.ತೆರೆದ ವಾಹನದಲ್ಲಿ ಭಾರತ ಮಾತೆಯ ಮತ್ತು ಆರ್ ಎಸ್ ಎಸ್ ಸ್ಥಾಪಕರಾದ ಡಾ.ಹೆಡಗೆವಾರ ಹಾಗೂ ಗುರೂಜಿಯವರ ಭಾವಚಿತ್ರದ ಮೆರವಣಿಗೆಯು ನಡೆಯಿತು. ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಮತ್ತು ಇದೇ ಪ್ರಥಮ ಬಾರಿಗೆ ಸುಮಾರು ಅರವತ್ತಕ್ಕೂ ಹೆಚ್ಚು ಬಾಲಕ ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಒಟ್ಟು 750ಕ್ಕೂ ಹೆಚ್ಚು ಗಣವೇಷದಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಬಸವನಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಪಾಟೀಲ, ಪಿಎಸ್ ಐ ಅಶೋಕ ನಾಯಕ ನೇತೃತ್ವದಲ್ಲಿ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.