ನಗರ ಸಮಸ್ಯೆಗಳಿಗೆ ಸ್ಪಂದಿಸದ ನಗರಸಭೆ ಅಧ್ಯಕ್ಷರು: ಆರೋಪ

KannadaprabhaNewsNetwork |  
Published : Aug 13, 2025, 12:30 AM IST
ಫೋಟೋ: 11 ಹೆಚ್‌ಎಸ್‌ಕೆ 1ಹೊಸಕೋಟೆ ನಗರದಲ್ಲಿ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಅವರು ಜನರ ಸಮಸ್ಯೆ ಆಲಿಸಲು ಯಾರ ಕೈಗೂ ಸಿಕ್ತಿಲ್ಲ ಎಂದು ಬಿಜೆಪಿ ಮುಖಂಡ ಕೆಆರ್‌ಬಿ ಶಿವಾನಂದ್ ಸುದ್ದಿಘೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಅವರು ಜನರ ಸಮಸ್ಯೆ ಆಲಿಸದೆ, ನಗರಸಭೆಗೆ ಬರುವ ನಾಗರಿಕರ ಕೈಗೂ ಸಿಗುವುದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ದಲಿತಪರ ಹೋರಾಟಗಾರ ಕೆಆರ್‌ಬಿ ಶಿವಾನಂದ್ ಆರೋಪಿಸಿದರು.

ಹೊಸಕೋಟೆ: ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಅವರು ಜನರ ಸಮಸ್ಯೆ ಆಲಿಸದೆ, ನಗರಸಭೆಗೆ ಬರುವ ನಾಗರಿಕರ ಕೈಗೂ ಸಿಗುವುದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ದಲಿತಪರ ಹೋರಾಟಗಾರ ಕೆಆರ್‌ಬಿ ಶಿವಾನಂದ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಕೇವಲ ವಾಟ್ಸಾಪ್, ಫೇಸ್‌ಬುಕ್ ಪ್ರಚಾರಕ್ಕೆ ಸೀಮಿತವಾಗಿದ್ದಾರೆ. ಬೆಳಿಗ್ಗೆ ಪೌರಕಾರ್ಮಿಕರು ಕಸ ತೆಗೆಯುವ ಸಂದರ್ಭದಲ್ಲಿ ಹೋಗಿ ಫೋಟೋ ತೆಗೆದುಕೊಳ್ಳುವುದು ಫೇಸ್ಬುಕ್, ವಾಟ್ಸಾಪ್‌ಗೆ ಹಾಕುವುದೇ ದೊಡ್ಡ ಕೆಲಸವಾಗಿದೆ. ಕಳೆದ ಎರಡು ಮೂರು ದಿನಗಳಿಂದ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ರಸ್ತೆಯಲ್ಲೆಲ್ಲಾ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾರೆ. ರಾಜಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಜನ ಸಮಸ್ಯೆ ಎದುರಿಸುತ್ತಿದ್ದರೂ ಜನರ ಸಮಸ್ಯೆಗೆ ಅಧ್ಯಕ್ಷರು ಧ್ವನಿಯಾಗಿಲ್ಲ. ಪ್ರಮುಖವಾಗಿ ೧೧ ತಿಂಗಳಿನಿಂದ ಒಂದು ದಲಿತಕೇರಿಗೆ ಹೋಗಿ ಜನರ ಸಮಸ್ಯೆ ಕೇಳುವ ಕೆಲಸ ಅಧ್ಯಕ್ಷರು ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇ ಸ್ವತ್ತಿಗಾಗಿ ಅಲೆದಾಟ: ಸರ್ಕಾರ ಮನೆ ಬಾಗಿಲಿಗೆ ಇ ಖಾತೆ ಎಂದು ಅಭಿಯಾನವನ್ನೆ ಮಾಡಿದರೂ, ಇ ಖಾತೆ ಮಾಡಲು ಜನ ನಗರಸಭೆ ಕಚೇರಿಗೆ ಅಧಿಕಾರಿಗಳು ಅಲ್ಲೋಗಿ ಇಲ್ಲೋಗಿ ಅಂತ ಸುತ್ತಾಡಿಸುತ್ತಾರೆ. ಆದರೆ ಜನ ಅವರ ಸಮಸ್ಯೆ ಯಾರಿಗೆ ಹೇಳಬೇಕು. ನಗರದಲ್ಲಿ 10 ದಿನಕ್ಕೊಮ್ಮೆ ನೀರು ಬರುತ್ತಿದೆ. ನೀರಿನ ಸಮಸ್ಯೆ, ಕಸದ ಸಮಸ್ಯೆ ಹೇಳೋಕೆ ಎರಡು ಮೂರು ತಿಂಗಳಿಂದ ಅಧ್ಯಕ್ಷರೆ ನಾಪತ್ತೆ ಆಗಿದ್ದಾರೆಂದು ದೂರಿದರು.

ಇವ್ರು ಯಾವ ಪಾರ್ಟಿ ಎಂದು ಗೊಂದಲ:

ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಇವರನ್ನು ನಂಬಿ ಅಧಿಕಾರ ವಹಿಸಿದ್ದರೆ, ಇವರು ಅಧ್ಯಕ್ಷ ಗಾದಿಯನ್ನು ಸಮರ್ಪಕವಾಗಿ ನಿಭಾಯಿಸದೆ ದ್ರೋಹ ಮಾಡುತ್ತಿದ್ದಾರೆ. ಅಲ್ಲದೆ ನಗರಸಭೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ಇವರು ಈಗ ಬಿಜೆಪಿನೋ, ಕಾಂಗ್ರಸ್ಸೋ, ಜೆಡಿಎಸ್ಸೋ ಯಾವ ಪಕ್ಷದಲ್ಲಿದ್ದಾರೆ ಎಂದು ಜನರಿಗೆ ಗೊಂದಲ ಆಗಿದೆ ಎಂದು ಹೇಳಿದರು.

ಫೋಟೋ: 11 ಹೆಚ್‌ಎಸ್‌ಕೆ 1

ಹೊಸಕೋಟೆ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆಆರ್‌ಬಿ ಶಿವಾನಂದ್ ಸುದ್ದಿಘೋಷ್ಠಿಯಲ್ಲಿ ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ