ಇಂದು ಪುರಸಭೆ ಅಧ್ಯಕ್ಷ ಚುನಾವಣೆ

KannadaprabhaNewsNetwork |  
Published : Aug 19, 2024, 12:51 AM IST

ಸಾರಾಂಶ

ಕೆಜಿಎಫ್‌ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೂ ಸದ್ದಿಲ್ಲದೆ ಪೈಕಿ ಕುಂಬಾರಪಾಳ್ಯ ವಾರ್ಡಿನಿಂದ ಆಯ್ಕೆಯಾಗಿರುವ ಚಂದ್ರವಾಣಿ ಮಂಜುನಾಥ್ ಹೆಸರು ಈಗಾಗಲೇ ಅಂತಿಮವಾಗಿರುವುದರಿಂದ ಅವರು ನಿರಾಳರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆ.19ರಂದು ಸೋಮವಾರ ನಡೆಯಲಿರುವ ಪುರಸಭೆ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಉಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಯಾರಾಗುವರೆಂಬ ತೀವ್ರ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಮೂಡಿಸಿದೆ.ಅಧ್ಯಕ್ಷ ಗಿರಿಯನ್ನು ಎಸ್‌ಸಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಪುರಸಭೆ ಪ್ರಮುಖರು ಯಾರೇ ಆದರೂ ಅದು ಕಾಂಗ್ರೆಸ್ ಪಕ್ಷದವರೇ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ನಾಮಪತ್ರ ಸಲ್ಲಿಸುವ ಕೊನೆ ಹಂತದವರೆಗೂ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳನ್ನು ಶಾಸಕರು ಗುಟ್ಟಾಗಿಟ್ಟಿದ್ದಾರೆ. ಕಾಂಗ್ರೆಸ್‌ಗೆ ಬಹುಮತ:

೨೭ ಸದಸ್ಯರನ್ನು ಹೊಂದಿರುವ ಬಂಗಾರಪೇಟೆ ಪುರಸಭೆಯಲ್ಲಿ ಕಾಂಗ್ರೆಸ್ ೨೦ ಸದಸ್ಯರನ್ನು ಹೊಂದಿದೆ, ಬಿಜೆಪಿ ೧ ಜೆಡಿಎಸ್ ೨ ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದು, ಎಸ್‌ಸಿಯಿಂದ ಗೆದ್ದಿರುವ ಪುರುಷರಲ್ಲಿ ಗೋವಿಂದ ಒಬ್ಬರೇ ಆಯ್ಕೆಯಾಗಿದ್ದು ಮಹಿಳೆಯರಲ್ಲಿ ಕಳೆದ ಬಾರಿ ಉಪಾಧ್ಯಕ್ಷರಾಗಿದ್ದ ಶಾರಧ ಗೌತಮನಗರದಿಂದ ಆಯ್ಕೆಯಾಗಿದ್ದು, ಆವರೂ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಶಾಸಕರು ಯಾರ ಕಡೆ ಒಲವು ತೋರುವರು ಎಂಬುದು ಕುತೂಹಲ ಮೂಡಿಸಿದೆ.

ಶಾಸಕರ ಆಪ್ತ ಗೋವಿಂದ ಅಧ್ಯಕ್ಷ ಸ್ಥಾದ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದು ಕಡೆ ಶಾರದ ತಮಗೆ ಅವಕಾಶ ನೀಡುವಂತೆ ಶಾಸಕರ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಆದರೂ ಗೋವಿಂದ ಹಾಗೂ ಚಂದ್ರವಾಣಿ ಬಹುತೇಕವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗಿದೆ.ಛಲ ಬಿಡದ ಶಾರದ:

ಅಲ್ಲದೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಬೋವಿ ಸಮುದಾಯದವರು ಕಾಂಗ್ರೆಸ್ ಅಭ್ಯರ್ಥಿ ಪರ ನಿಲ್ಲದೆ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಮಲ್ಲೇಶಬಾಬು ಪರ ನಿಂತು ಹೆಚ್ಚಿನ ಮತಗಳನ್ನು ಕ್ಷೇತ್ರದಿಂದ ಕೊಡಿಸಿರುವ ಕೋಪ ಶಾಸಕರಲ್ಲಿರುವುದರಿಂದ ಮತ್ತು ಗೋವಿಂದ ಸಹ ಬೋವಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನ ನೀಡದೆ ಎಸ್‌ಸಿ ಮಹಿಳೆಗೆ ನೀಡದರೆ ಹೇಗೆ ಎಂದು ಚರ್ಚೆ ಶುರುವಾಗಿರುವುದರಿಂದ,ಶಾರದ ರವರು ಇದನ್ನು ಬಳಸಿಕೊಂಡು ಒಂದು ಕೈ ನೋಡೋಣವೆಂದು ತಾಲೀಮು ನೆಡೆಸಿದ್ದಾರೆ. ಅಂತೆಯೇ ಉಪಾಧ್ಯಕ್ಷ ಸ್ಥಾನಕ್ಕೂ ಸದ್ದಿಲ್ಲದೆ ಪೈಕಿ ಕುಂಬಾರಪಾಳ್ಯ ವಾರ್ಡಿನಿಂದ ಆಯ್ಕೆಯಾಗಿರುವ ಚಂದ್ರವಾಣಿ ಮಂಜುನಾಥ್ ಹೆಸರು ಈಗಾಗಲೇ ಅಂತಿಮವಾಗಿರುವುದರಿಂದ ಅವರು ನಿರಾಳರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!