ರಾಣಿಬೆನ್ನೂರು: ಸ್ಥಳೀಯ ನಗರ ಸಭೆ ವಾರ್ಡ್ 22ಕ್ಕೆ ಡಿ.22ರಂದು ನಡೆದ ಉಪಚುನಾವಣೆ ಮತಗಳ ಎಣಿಕೆ ಶನಿವಾರ ನಡೆದಿದ್ದು, ಬಿಜೆಪಿ ಅಭ್ಯರ್ಥಿ ತ್ರಿವೇಣಿ ಪವಾರ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸುರೇಖಾ ಅವರನ್ನು 522 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.
ಬಿಜೆಪಿ ವಿಜಯೋತ್ಸವ: ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಬಳಿ ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಶಹರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ನಗರಸಭೆ ಸದಸ್ಯರುಗಳಾದ ನಾಗರಾಜ ಪವಾರ, ಮಲ್ಲಿಕಾರ್ಜುನ ಅಂಗಡಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಪ್ರಕಾಶ ಪೂಜಾರ, ಪ್ರಕಾಶ ಬುರಡಿಕಟ್ಟಿ, ನಾಗರಾಜ ಅಡ್ಮನಿ, ಹನುಮಂತಪ್ಪ ಹೆದ್ದೇರಿ, ಎಪಿಎಂಸಿ ಮಾಜಿ ಸದಸ್ಯ ಪರಮೇಶ ಗೂಳಣ್ಣನವರ, ಅನಿಲ ಸಿದ್ದಾಳಿ, ಶಿವಯೋಗಿ ಹಳ್ಳಳ್ಳಿ, ರಮೇಶಗುತ್ತಲ, ಮೈಲಪ್ಪ ಗೋಣಿಬಸಮ್ಮನವರ, ಚಂದ್ರಶೇಖರ ಕುಂದಾಪುರ, ಶಿವಕುಮಾರ ಹಾರ್ಕನಾಳ, ಸಂತೋಷ ತೇವರಿ, ಲಿಂಗನಗೌಡ ಪಾಟೀಲ, ಶೇಖಪ್ಪ ನರಸಗೊಂಡರ ಮತ್ತಿತರರಿದ್ದರು.