ಕನ್ನಡಪ್ರಭ ವಾರ್ತೆ ಕನಕಪುರ
ಮಾದೇಶ್, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಕುಮಾರ್, ದಿಲೀಪ್ರಾಜ್, ರಾಮಚಂದ್ರ, ಗುರಪ್ಪ, ರಘು, ಶರಥ, ಹರೀಶ್, ಸುರೇಶ್ ಸೇರಿ 12 ಮಂದಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆಪಾಧಿತರು ಎಂದು ಗುರುತಿಸಲಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾದ 12 ಮಂದಿ ಆಪಾದಿತರಿಗೆ ತಲಾ ಒಂದು ಲಕ್ಷ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.
ಈ ಕೊಲೆ ಪ್ರಕರಣದಲ್ಲಿ ಪೊಲೀಸರು 17 ಮಂದಿ ವಿರುದ್ದ ಆರೋಪ ಪಟ್ಟಿ ದಾಖಲಿಸಿದ್ದರು. 5 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ 5 ಜನರ ವಿಚಾರಣೆ ತಡವಾಗಿದ್ದು, ತೀರ್ಪು ಬಾಕಿ ಇದೆ. ತಲೆಮರೆಸಿಕೊಂಡಿದ್ದ ಆರೋಪಿಗಳಾದ ಬಂಡೆ ಮಹೇಶ್, ಮಮತ ಮುನಿಸ್ವಾಮಿ, ವೆಂಕಟೇಶ್, ವಿನಯಪ್ರಸಾದ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರು ಮೃತಪಟ್ಟಿದ್ದು, ಇನ್ನುಳಿದವರನ್ನು ಹಿಡಿದು ತಂದಿರುವ ಪೋಲಿಸರು ಇವರ ವಿಚಾರಣೆ ನಡೆಸುತ್ತಿದ್ದಾರೆ ಓಟ್ಟು 16 ಮಂದಿ ಪೈಕಿ 12 ಮಂದಿ ಜೈಲುವಾಸ ಉಳಿದ 4 ಮಂದಿ ತೀರ್ಪು ಬಾಕಿ ಇದೆ.ಘಟನೆ ವಿವರ:
ಕೊಲೆ ಮಾಡಿದ ಆರೋಪಿಗಳು ಹುಣಸಹಳ್ಳಿ ಗ್ರಾಮದಿಂದ ಕನಕಪುರಕ್ಕೆ ಬರುವ ಮಾರ್ಗದ ಕುರುಪೇಟೆ ಬಳಿ ಪೋಲಿಸರ ಬಲೆಗೆ ಬಿದ್ದಿದ್ದರು. ಇಲ್ಲಿಂದ ಆರಂಭವಾದ ಈ ಪ್ರಕರಣದ ತನಿಖೆ ಉಸ್ತುವಾರಿವಸಿದ್ದ ವೃತ್ತ ನಿರೀಕ್ಷಕ ಟಿಟಿ ಕೃಷ್ಣ ಅವರು ಕೊಲೆಗೆ ಸಹಕಾರ ನೀಡಿದ ಒಳಸಂಚು ರೂಪಿಸಿದ ಒಟ್ಟು 17 ಮಂದಿ ವಿರುದ್ದ ಆರೋಪಪಟ್ಟಿ (ಚಾರ್ಜ್ ಸೀಟ್) ಸಲ್ಲಿಕೆ ಮಾಡಿದ್ದರು.
ಕೆ ಕೆ ಪಿ ಸುದ್ದಿ 03 : ಹನ್ನೆರಡು ಮಂದಿಗೆ ಜೀವಾವಧಿ ಶಿಕ್ಷೆ.