ಜಗಳೂರು ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಎಂ.ಹಾಲಸ್ವಾಮಿ: ಅಭಿನಂದನೆ

KannadaprabhaNewsNetwork |  
Published : Jun 14, 2025, 12:26 AM IST
13 ಜೆ.ಜಿ.ಎಲ್.1 ಜಗಳೂರು ಪಟ್ಟಣದ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಎಂ.ಹಾಲಸ್ವಾಮಿ ಶುಕ್ರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. | Kannada Prabha

ಸಾರಾಂಶ

ಪಟ್ಟಣದ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಎಂ. ಹಾಲಸ್ವಾಮಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

- ಬ್ಯಾಂಕ್ ಆದಾಯ ಹೆಚ್ಚಿಸಲು ಶ್ರಮಿಸುವ ಭರವಸೆ

- - -

ಜಗಳೂರು: ಪಟ್ಟಣದ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಎಂ. ಹಾಲಸ್ವಾಮಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

14 ನಿರ್ದೇಶಕರು, 01 ನಾಮನಿರ್ದೇಶನ ಸದಸ್ಯರು ಸೇರಿ ಒಟ್ಟು 15 ನಿರ್ದೇಶಕರ ಹೊಂದಿರುವ ಬ್ಯಾಂಕ್‌ ಇದಾಗಿದೆ. ಒಡಂಬಡಿಕೆಯಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ಸೊಕ್ಕೆ ಕ್ಷೇತ್ರದ ಶ್ರೀನಿವಾಸ್ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಎನ್.ಎಂ. ಹಾಲಸ್ವಾಮಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಸಮಯಕ್ಕೆ ಸರಿಯಾಗಿ ನಡೆದ ಚುನಾವಣೆಯಲ್ಲಿ ಎನ್.ಎಂ. ಹಾಲಸ್ವಾಮಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹರೀಶ ಕುಮಾರ್ ಘೋಷಣೆ ಮಾಡಿದರು.

ನೂತನ ಬ್ಯಾಂಕ್‌ ಅಧ್ಯಕ್ಷ ಎನ್.ಎಂ. ಹಾಲಸ್ವಾಮಿ ಮಾತನಾಡಿ, ಈ ಹಿಂದೆ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಜನಪರ ಆಡಳಿತ ಸೇವೆ ಮಾಡಿದ ಅನುಭವ ಇದೆ. ಇದೀಗ ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷರ ಜವಾಬ್ದಾರಿ ನೀಡಿದ್ದೀರಿ. ಎಲ್ಲ ನಿರ್ದೇಶಕರು ಹಾಗೂ ಅಧಿಕಾರಿಗಳ ಸಹಕಾರದಿಂದ ರೈತರಿಗೆ ಅನುಕೂಲ ಆಗುವಂತಹ ಯೋಜನೆಗಳನ್ನ ತಂದು ಬ್ಯಾಂಕ್ ಆದಾಯ ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ರೈತರು ತಾವು ಪಡೆದ ಸಾಲಗಳನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಬ್ಯಾಂಕ್ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಮ್ಮ ಬ್ಯಾಂಕ್ ಯೋಜನೆಗಳ ಜಾರಿಗೆ ಶ್ರಮಿಸಲಾಗುವುದು ಎಂದರು.

ಈ ಸಂದರ್ಭ ಪಿಕಾರ್ಡ್‌ (ಪಿಎಲ್‌ಡಿ) ಬ್ಯಾಂಕ್‌ ಕಾರ್ಯದರ್ಶಿ ನಾಗಭೂಷಣ್, ಉಪಾಧ್ಯಕ್ಷರಾದ ದ್ಯಾಮಕ್ಕ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಶ್ರೀನಿವಾಸ್, ಕೆ.ತಿಮ್ಮರಾಯಪ್ಪ, ವೀಣಾ ಗೋಗುದ್ದು ರಾಜು, ನಿರ್ದೇಶಕರಾದ ಚೌಡಮ್ಮ, ಎಂ.ವಿ.ರಾಜು, ಬಿ.ಎಚ್. ನರೇಂದ್ರ ಬಾಬು, ಸಣ್ಣ ಸೂರಯ್ಯ, ಯು.ಬಿ. ವಾಮದೇವ್, ಎಸ್.ಚಂದ್ರ, ಕೆ.ಬಿ.ಸಿದ್ದೇಶ್, ರಾಘವೇಂದ್ರ, ಮುಖಂಡರಾದ ಅರಶಿನಗುಂಡಿ ನಾಗರಾಜ್ , ಮೆಹಬೂಬ್ ಆಲಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಬಂಗಾರಪ್ಪ, ಮಹೇಂದ್ರ, ಮುಖಂಡರಾದ ಗೋಗುದ್ದು ರಾಜು, ಮಂಜು, ಮದಕರಿ, ಕಾಯಿ ಮಂಜುನಾಥ್, ಜಗದೀಶ್ ಇತರರು ಇದ್ದರು.

- - -

-13ಜೆಜಿಎಲ್1:

ಜಗಳೂರು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎನ್.ಎಂ. ಹಾಲಸ್ವಾಮಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದು, ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ