ರಂಜಿಸಿದ ಕನ್ನಡ, ಹಿಂದಿ ಜನಪ್ರಿಯ ಚಲನಚಿತ್ರಗೀತೆಗಳ ರಸಸಂಜೆ

KannadaprabhaNewsNetwork |  
Published : Jun 25, 2025, 01:18 AM IST
5 | Kannada Prabha

ಸಾರಾಂಶ

ಪಾವನಾ ಹಾಗೂ ಪರಮೇಶ್‌ ಅವರು ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಗಾಯನ ತಂಡವನ್ನು ಕಟ್ಟಿ ಮೈಸೂರು ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಾ ಪ್ರಸಿದ್ಧರಾಗಿದ್ದಾರೆ. ಅ

ಕನ್ನಡಪ್ರಭ ವಾರ್ತೆ ಮೈಸೂರು

ಪಾವನ ಮ್ಯೂಸಿಕಲ್‌ ಇವೆಂಟ್ಸ್‌ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಮತ್ತು ಹಿಂದಿ ಜನಪ್ರಿಯ ಚಲನಚಿತ್ರ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.

ಪಾವನಾ, ಎಂ. ಪರಮೇಶ್‌, ಪ್ರಮಥ ಮಂಜು, ವೈ.ಎಂ. ನಾಗೇಂದ್ರ, ತೇಜಾವತಿ, ರವಿರಾಜ್‌ ಹಾಸು, ಪಿ.ಎಂ.ಸುರೇಶ್‌, ಸುಮಾ, ಚೆಲುವರಾಜ್‌ ಅವರು ಗೀತೆಗಳನ್ನು ಹಾಡಿ, ಸಭಿಕರನ್ನು ರಂಜಿಸಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾವನಾ ಹಾಗೂ ಪರಮೇಶ್‌ ಅವರು ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಗಾಯನ ತಂಡವನ್ನು ಕಟ್ಟಿ ಮೈಸೂರು ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಾ ಪ್ರಸಿದ್ಧರಾಗಿದ್ದಾರೆ. ಅವರಿಗೆ ಕಾರ್ಪೋರೇಷನ್‌ ಮಂಜುನಾಥ್‌ ಸಾಥ್‌ ನೀಡುತ್ತಿದ್ದಾರೆ ಎಂದರು.

ಪ್ರಮಥ ಮಂಜು, ವೈ.ಎಂ. ನಾಗೇಂದ್ರ, ರವಿರಾಜ್‌, ತೇಜಾವತಿ, ಸುಮಾ, ಪಿ.ಎಂ. ಸುರೇಶ್ ಕೂಡ ಉತ್ತಮವಾಗಿ ಹಾಡುತ್ತಿದ್ದಾರೆ ಎಂದು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ. ಸುನಿಲ್‌ ಮಾತನಾಡಿ, ಕಲಾವಿದರಿಗೆ ಅಭಿಮಾನಿ ದೇವರುಗಳು ಮುಖ್ಯ. ಅವರ ಬೆಂಬಲ, ಪ್ರೋತ್ಸಾಹದಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದರು.

ರಾಜಮಹಾರಾಜರ ಕಾಲದಿಂದಲೂ ಮೈಸೂರು ನಗರ ಕಲೆ- ಸಂಸ್ಕೃತಿಗೆ ಹೆಸರುವಾಸಿ. ಈಗಲೂ ಕೂಡ ನಾನಾ ಸಂಘ, ಸಂಸ್ಥೆಗಳು ನಿರಂತರಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಆ ಹೆಸರನ್ನು ಉಳಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಕೆ.ಆರ್. ಆಸ್ಪತ್ರೆ ಅಧೀಕ್ಷಕಿ ಡಾ.ಎಚ್.ಪಿ. ಶೋಭಾ, ಡಾ.ರಾಜ್‌ಕುಮಾರ್‌ ಕುಟುಂಬದ ಎಸ್‌.ಎ. ಶ್ರೀನಿವಾಸ್‌, ಕಲಾಪೋಷಕ ಮಂಜುನಾಥ್‌ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಇದ್ದರು.

ನಾದಬ್ರಹ್ಮ ಸಭಾಂಗಣ ಸಭಿಕರಿಂದ ಕಿಕ್ಕಿರಿದು ತುಂಬಿತ್ತು. ಎಲ್ಲರೂ ಕನ್ನಡ- ಹಿಂದಿ ಚಲನಚಿತ್ರಗೀತೆಗಳನ್ನು ಆಸ್ವಾದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ