ಬೆಂಗಳೂರು ವಿಶ್ವ ಭೂಪಟದಲ್ಲಿ ಗುರುತಿಸಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯೇ ಕಾರಣ

KannadaprabhaNewsNetwork |  
Published : Jul 07, 2026, 02:15 AM IST
ಕೆ ಕೆ ಪಿ ಸುದ್ದಿ 02: ನೇಗಿಲ ಯೋಗಿ ಟ್ರಸ್ಟ್ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ.  | Kannada Prabha

ಸಾರಾಂಶ

ಕನಕಪುರ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಚಿಂತನೆ ಮತ್ತು ಆಲೋಚನೆಯಿಂದ ಬೆಂಗಳೂರು ನಗರ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಇತಿಹಾಸಕಾರ ಹೇಮಂತ್ ಕುಮಾರ್ ತಿಳಿಸಿದರು

ಕನಕಪುರ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಚಿಂತನೆ ಮತ್ತು ಆಲೋಚನೆಯಿಂದ ಬೆಂಗಳೂರು ನಗರ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಇತಿಹಾಸಕಾರ ಹೇಮಂತ್ ಕುಮಾರ್ ತಿಳಿಸಿದರು.

ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಕೆಂಪೇಗೌಡರ 517ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರು ಪಟ್ಟಣವನ್ನು ದೇಶದ ವಿಶೇಷ ನಗರವಾಗುವ ಮಾದರಿಯಲ್ಲಿ ನಿರ್ಮಿಸಿದ್ದರಿಂದ ಬೆಂಗಳೂರು ಈ ಮಟ್ಟಕ್ಕೆ ಬೆಳೆದು ಪರಿಪೂರ್ಣ ನಗರ ಆಗಿದೆ ಎಂದರು.

ಬೆಂಗಳೂರನ್ನು ನಿರ್ಮಿಸುವಾಗ ಪ್ರತಿ ಕಸುಬಿನ ಜನಾಂಗಕ್ಕೂ ಒಂದೊಂದು ಪೇಟೆ, ಗುಡಿ ಗೋಪುರ, ರೈತರ ಅನುಕೂಲಕ್ಕೆ ಕೆರೆಗಳನ್ನು ನಿರ್ಮಿಸಿ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟದಂತೆ ಬೆಂಗಳೂರು ನಗರವನ್ನು ಸರ್ವ ಜನಾಂಗದ ಮಹಾನಗರವನ್ನಾಗಿ ಮಾಡಿ ನಾಡಪ್ರಭುಗಳಾಗಿದ್ದಾರೆ. 500 ವರ್ಷಗಳ ಹಿಂದೆ ಇದ್ದಂತಹ ಕೆಂಪೇಗೌಡರನ್ನು ಇಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಅವರ ಕೆಲಸಗಳು ಮಾಡಿವೆ. ಕೆಂಪೇಗೌಡರ ವಿಚಾರಧಾರೆಗಳನ್ನು ಯುವ ಜನಾಂಗಕ್ಕೆ ತಿಳಿಸಿ ಕೊಡಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಹುಚ್ಚಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗಯ್ಯ, ಪದಾಧಿಕಾರಿಗಳಾದ ಯು.ವಿ. ಸ್ವಾಮಿಗೌಡ, ಟಿ.ಎನ್. ರಾಮಯ್ಯ, ಹೊಂಬಾಳೆಗೌಡ, ಬೈರೇಗೌಡ, ಶಿವರಾಮೇಗೌಡ, ರಮೇಶ್, ಓಂಕಾರೇಶ್ವರ, ನಿಂಗೇಗೌಡ, ರಾಮಚಂದ್ರ, ಕಂಡೇಗೌಡ, ಬನ್ನಿಕೊಪ್ಪ ಪ್ರಕಾಶ್, ಅಂಗಡಿ ರಮೇಶ್, ತೋಕತಿಮ್ಮನದೊಡ್ಡಿ ಸುರೇಶ್, ತೊಪ್ಪಗನಹಳ್ಳಿ ನಾಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕೆಂಪೇಗೌಡರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಜಯಂತಿ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು ಪರ್ಯಾಯ ಬೆಳೆ ಬೆಳೆಯಲು ಅರಿವು ಮೂಡಿಸಿ: ಮನೋಜ್ ಕುಮಾರ್ ಮೀನಾ
ರಾಜ್ಯದಲ್ಲಿ ಮುಂದುವರಿದ ‘ಸಾಮೂಹಿಕ’ SIR ಪ್ರಕ್ರಿಯೆ!