ನಾಡಪ್ರಭುಗಳಿಂದ ಸಣ್ಣ ಸಮುದಾಯಗಳ ಏಳಿಗೆ

KannadaprabhaNewsNetwork |  
Published : Jun 28, 2026, 02:15 AM IST
೨೭ಶಿರಾ೫: ಶಿರಾ ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಅಂಗವಾಗಿ ನಾಡಪ್ರಭು ಕೆಂಪೇ ಗೌಡರ ಪುತ್ತಳಿಗೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ .ಆರ್.ಗೌಡ ಮಾಲಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಸಣ್ಣ ಸಮುದಾಯಗಳು ಕೂಡ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ದೂರ ದೃಷ್ಟಿಯ ಪರಿಕಲ್ಪನೆಯೊಂದಿಗೆ ಕುಂಬಾರಪೇಟೆ, ಬಳೆಪೇಟೆ, ಚಿಕ್ಕಪೇಟೆ ಸೇರಿದಂತೆ ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಶಿರಾ

ಸಣ್ಣ ಸಮುದಾಯಗಳು ಕೂಡ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ದೂರ ದೃಷ್ಟಿಯ ಪರಿಕಲ್ಪನೆಯೊಂದಿಗೆ ಕುಂಬಾರಪೇಟೆ, ಬಳೆಪೇಟೆ, ಚಿಕ್ಕಪೇಟೆ ಸೇರಿದಂತೆ ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಿದ ಕಾರಣ ಸಣ್ಣ ಸಮುದಾಯಗಳ ಆರ್ಥಿಕ ಸುಭದ್ರತೆ ಕಾರಣವಾಯಿತು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ .ಆರ್.ಗೌಡ ಹೇಳಿದರು.

ಅವರು ಶಿರಾ ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಅಂಗವಾಗಿ ನಾಡಪ್ರಭು ಕೆಂಪೇ ಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬೃಹತ್ ಬೆಂಗಳೂರು ಆಗಿ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಲು ನಾಡಪ್ರಭು ಕೆಂಪೇಗೌಡ ದೂರ ದೃಷ್ಟಿ ಯೋಜನೆಗಳು ಹಾಗೂ ಜನಪರ ಆಡಳಿತವೇ ಕಾರಣ, ಇಂದಿನ ಯುವಕರು ಕೆಂಪೇಗೌಡರ ಆದರ್ಶ ಗಳನ್ನು ಮೈಗೂಡಿಸಿಕೊಂಡು ಪ್ರಗತಿಯತ್ತ ಮುನ್ನಡೆಯಬೇಕು ಎಂದು ಹೇಳಿದರು.

ಯುವ ಕಾಂಗ್ರೆಸ್ ಮುಖಂಡ ತಡಕಲೂರು ಕಿರಣ್ ಗೌಡ ಮಾತನಾಡಿ, ಕೆಂಪೇಗೌಡರ ಬೃಹತ್ ಪುತ್ಥಳಿಯನ್ನು ಚಿಕ್ಕ ಹುಲಿಕುಂಟೆ ಗ್ರಾಮದಲ್ಲಿ ಯುವಕರು ನಿರ್ಮಾಣ ಮಾಡಿದ್ದು ಅವರ ಸೇವೆ ಅಭಿಮಾನ ಮೆಚ್ಚುವಂತಹದ್ದು ಎಂದರು. ಈ ಸಂದರ್ಭದಲ್ಲಿ ಚಂದ್ರಶೇಖರ್, ಸುಧಾಕರ ಗೌಡ, ಜನಾರ್ಧನ್, ಮಂಜುನಾಥ್, ರವಿಕುಮಾರ್, ದಯಾನಂದ ಗೌಡ, ಗಿಡುಗನಹಳ್ಳಿ ಪವನ್ ಗೌಡ, ಹುಲಿಕುಂಟೆ, ಗಿರೀಶ್, ಶಿವರಾಂ, ಜಿ. ಆರ್. ರಮೇಶ್ ಪಟೇಲ್, ನಟರಾಜು, ಅರುಣ ಕುಮಾರ, ರತ್ನಮ್ಮ ಬಾಲಕೃಷ್ಣ ಗೌಡ, ಲಕ್ಷ್ಮಣ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ
ಬೇಲೂರಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ