ಬಾಟಂ.. ಕಲಬುರಗಿ ರಸ್ತೆ, ವೃತ್ತಗಳಿಗೆ ಮಹಿಳಾ ಸಾಹಿತಿಗಳ ಹೆಸರಿಡಿ: ಶಕುಂತಲಾ

KannadaprabhaNewsNetwork |  
Published : Aug 18, 2026, 01:30 AM IST
ಫೋಟೋ- ಕಾವ್ಯ 1 ಮತ್ತು ಕಾವ್ಯ 2 | Kannada Prabha

ಸಾರಾಂಶ

ಸಮಾಜ ಪ್ರಗತಿಗೆ ಸ್ತ್ರೀವಾದಿ ಸಾಹಿತ್ಯ ಪೂರಕ. ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಕೊರತೆಯಿಲ್ಲ. ಆದರೆ ಮಹಿಳಾ ಸಾಹಿತಿಗಳಿಗೆ ವೇದಿಕೆಯ ಕೊರತೆ, ಅಕಾಡೆಮಿಗಳಲ್ಲಿ ಸ್ಥಾನಮಾನ ದೊರೆಯುತ್ತಿಲ್ಲ. ನಶಿಸುತ್ತಿರುವ ಮಹಿಳಾ ವಚನಕಾರ್ತಿಯರ ಸ್ಮಾರಕಗಳು, ದೇಗುಲಗಳ ಸಂರಕ್ಷಣೆ ಅವಶ್ಯವಾಗಿದೆ. ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಮ್ಮೇಳನಾಧ್ಯಕ್ಷ ಶಕುಂತಲಾ ಪಾಟೀಲ ಜಾವಳಿ ಮನವಿ ಮಾಡಿದರು.

-ಸ್ಮಾಲ್‌ ಕಿಕ್ಕರ್‌

ವಚನಕಾರ್ತಿಯರ ಸ್ಮಾರಕ ರಕ್ಷಿಸಿ

--

-ಅದ್ಧೂರಿ ಕಾವ್ಯ ಮಹಿಳಾ ಸಮ್ಮೇಳನ: ನೂರಾರು ಜನ ಕವಯಿತ್ರಿಯರ ಸಮಾಗಮ

--

ಕನ್ನಡಪ್ರಭ ವಾರ್ತೆ ಕಲಬುರಗಿ

ಸಮಾಜ ಪ್ರಗತಿಗೆ ಸ್ತ್ರೀವಾದಿ ಸಾಹಿತ್ಯ ಪೂರಕ. ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಕೊರತೆಯಿಲ್ಲ. ಆದರೆ ಮಹಿಳಾ ಸಾಹಿತಿಗಳಿಗೆ ವೇದಿಕೆಯ ಕೊರತೆ, ಅಕಾಡೆಮಿಗಳಲ್ಲಿ ಸ್ಥಾನಮಾನ ದೊರೆಯುತ್ತಿಲ್ಲ. ನಶಿಸುತ್ತಿರುವ ಮಹಿಳಾ ವಚನಕಾರ್ತಿಯರ ಸ್ಮಾರಕಗಳು, ದೇಗುಲಗಳ ಸಂರಕ್ಷಣೆ ಅವಶ್ಯವಾಗಿದೆ. ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಮ್ಮೇಳನಾಧ್ಯಕ್ಷ ಶಕುಂತಲಾ ಪಾಟೀಲ ಜಾವಳಿ ಮನವಿ ಮಾಡಿದರು.

ವಿವಿಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠ ಆರಂಭಿಸಬೇಕು. ಜನಪದ ಸಾಹಿತ್ಯದ ಮಹಿಳಾ ಕಲಾವಿದರಿಗೆ, ಸಂಗೀತಗಾರರಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಜಿಲ್ಲಾ , ತಾಲೂಕು ಕಸಾಪ , ಮಹಿಳಾ ನೌಕರರ ಸಂಘ, ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಿಂಬೆವ್ವ ಪಡಶೆಟ್ಟಿ ವೇದಿಕೆಯಡಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಮಾತನಾಡಿದರು.

ಈ ಭಾಗದ 371 (ಜೆ) ಕಲಂ ನಡಿ ಮಹಿಳೆಯರಿಗಾಗಿ ವಿಶೇಷ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ ಮತ್ತು ಬಡಾವಣೆಗಳಿಗೆ ಮಹಿಳಾ ಹಿರಿಯ ಸಾಹಿತಿಗಳ ಹೆಸರು ಇಡಬೇಕು ಎಂದು ಶಕುಂತಲಾ ಪಾಟೀಲ ಜಾವಳಿ ಹೇಳಿದರು.

ಸಮ್ಮೇಳನವನ್ನು ಸಿಯುಕೆ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ ಉದ್ಘಾಟಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸಮಾಜದಲ್ಲಿ ಮಹಿಳೆಯರ ಧ್ವನಿಗೆ ಗೌರವ ಕೊಡುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯವೆಂದರು.

ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಅಮರೇಶ್ವರಿ ಬಾಬುರಾವ್‌ ಚಿಂಚನಸೂರ ಶಕ್ತಿ ಸಿಂಚನ ಕೃತಿ ಬಿಡುಗಡೆಗೊಳಿಸಿದರು. ಜಗದೀಶ್ವರಿ ನಾಸಿ, ರೇಣುಕಾ ಡಾಂಗೆ, ನಂದಿನಿ ಸನಬಾಳ, ಶಿವಲೀಲಾ ಕಲಗುರ್ಕಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕುಪೇಂದ್ರ ಬರಗಾಲಿ, ವಿಶಾಲಾಕ್ಷಿ ಮಾಯಣ್ಣವರ್, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಎಸ್.ಕೆ. ಬಿರಾದಾರ, ಸುರೇಶ ಲೇಂಗಟಿ, ಸುರೇಶ ದೇಶಪಾಂಡೆ, ಭುವನೇಶ್ವರಿ ಹಳ್ಳಿಖೇಡ, ಶಾರದಾ ಆವಟೆ, ಮಾಯಾದೇವಿ ತುರಂಗ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ಕಲ್ಯಾಣಕುಮಾರ ಶೀಲವಂತ ಮಾತನಾಡಿದರು.

ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆಗೈಯ್ಯುತ್ತಿರುವ ಹಿರಿಯ ಪತ್ರಕರ್ತೆ ಶೀಲಾ ಪಿ.ತಿವಾರಿ, ಡಾ. ಗಂಗಾ ಪೂಜಾರ, ಡಾ. ನಿರ್ಮಲಾ ಸಿ ಕೆಳಮನಿ, ಪದ್ಮಿನಿ ಕಿರಣಗಿ, ಡಾ.ಶರಣಮ್ಮ ಬಿ ಪಾಟೀಲ, ರಾಜೇಶ್ವರಿ ಸಾಹು ಭವಾನಿ ಕಾಡ್ಲೂರ, ಮಾಲಾ ಕಮಲಾಪೂರ, ಶಿಲ್ಪಾ ದಾಸ ಅವರನ್ನು ವಾತ್ಸಲ್ಯ ಕಾವ್ಯ ಗೌರವ ಪುರಸ್ಕಾರ ನೀಡಲಾಯಿತು.

ಗೋಷ್ಟಿಯಲ್ಲಿ ಮಹಿಳೆ ಮತ್ತು ಮೂಢನಂಬಿಕೆ ಕುರಿತು ಡಾ. ಶಿವಲೀಲಾ ಚಟ್ನಳ್ಳಿ, ಸಮಾಜದ ಕಣ್ಣು ತೆರೆಸುವಲ್ಲಿ ಸ್ತ್ರೀವಾದಿ ಸಾಹಿತ್ಯದ ಪಾತ್ರ ಡಾ. ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿದರು. ಲೇಖಕಿ ಡಾ. ಕರುಣಾ ಜಮದರಖಾನಿ ಅಧ್ಯಕ್ಷತೆಯಲ್ಲಿ ನಡೆದ ಶಕ್ತಿ ಕವಿಗೋಷ್ಠಿಯಲ್ಲಿ ನೀತಾ ಡಿ ಕಾಬಾ ಅವರ ಅವಳು ವೇಶ್ಯೆ ಅಲ್ಲ ಕವನ ಕೇಳುಗರ ಮನ ಸೆಳೆಯಿತು.

ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಸಮಾರೋಪ ನುಡಿಗಳನ್ನಾಡಿದರು. ಪ್ರಿಯಾಂಕಾ ಪಾಟೀಲ, ರೂಪಾ ಪೂಜಾರಿ, ಭಾಗ್ಯಶ್ರೀ ಮರಗೋಳ ವೇದಿಕೆ ಮೇಲಿದ್ದರು.

ಫೋಟೋ- ಕಾವ್ಯ 1 ಮತ್ತು ಕಾವ್ಯ 2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಡಲ್‌ ಪಕ್ಕ...ಕಮಲನಗರದಲ್ಲಿ ಸಂಭ್ರಮದ ನಾಗರ ಪಂಚಮಿ
ದೇವೇಗೌಡರ ಮುಖ ತೋರಿಸದೇ ಗೆದ್ದು ಬನ್ನಿ