ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ೬೦೦ರಲ್ಲಿ ೫೯೮ ಅಂಕ ಪಡೆದ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್.ಶೆಟ್ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್.ಶೆಟ್ಟಿ ಅವರು ನಾಲ್ಕು ವಿಷಯಗಳಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ. ಐವರು ವಿದ್ಯಾರ್ಥಿಗಳು ೫೯೬ ಅಂಕ, ಮೂವರು ವಿದ್ಯಾರ್ಥಿಗಳು ೫೯೫ ಅಂಕ, ಐವರು ವಿದ್ಯಾರ್ಥಿಗಳು ೫೯೪ ಅಂಕ, ಐವರು ವಿದ್ಯಾರ್ಥಿಗಳು ೫೯೩ ಅಂಕ, ಆರು ವಿದ್ಯಾರ್ಥಿಗಳು ೫೯೨ ಅಂಕ, ಆರು ವಿದ್ಯಾರ್ಥಿಗಳು ೫೯೧ ಅಂಕ, ಎಂಟು ವಿದ್ಯಾರ್ಥಿಗಳು ೫೯೦ ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
೫ ವಿದ್ಯಾರ್ಥಿಗಳು ೪ ವಿಷಯಗಳಲ್ಲಿ, ೨೧ ವಿದ್ಯಾರ್ಥಿಗಳು ೩ ವಿಷಯಗಳಲ್ಲಿ, ೮೩ ವಿದ್ಯಾರ್ಥಿಗಳು ೨ ವಿಷಯಗಳಲ್ಲಿ ಹಾಗೂ ೨೫೪ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್ನಲ್ಲಿ ೨೭ ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ ೫೨, ಬಯೋಲಾಜಿಯಲ್ಲಿ ೮೮, ಮ್ಯಾಥಮೆಟಿಕ್ಸ್ನಲ್ಲಿ ೧೫೩, ಕಂಪ್ಯೂಟರ್ ಸೈನ್ಸ್ನಲ್ಲಿ ೨೬, ಇಲೆಕ್ಟ್ರಾನಿಕ್ಸ್ನಲ್ಲಿ ೧, ಸ್ಟ್ಯಾಟ್ನಲ್ಲಿ ೩, ಹೋಮ್ ಸೈನ್ಸ್ನಲ್ಲಿ ೫, ಸಂಸ್ಕೃತದಲ್ಲಿ ೧೧೭, ಕನ್ನಡದಲ್ಲಿ ೨೯, ಹಿಂದಿಯಲ್ಲಿ ೫, ಫ್ರೆಂಚ್ನಲ್ಲಿ ೧, ಇಂಗ್ಲೀಷ್ನಲ್ಲಿ ೧ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಎಕ್ಸ್ಪರ್ಟ್ನ ಶೈಕ್ಷಣಿಕ ಶ್ರೇಷ್ಠತೆಗೆ ಫಲಿತಾಂಶ ಸಾಕ್ಷಿ: ಪ್ರೊ.ನರೇಂದ್ರ ಎಲ್.ನಾಯಕ್ : ಪ್ರತಿ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ. ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ಸಾಧಿಸಿರುವ ಅದ್ಭುತ ಫಲಿತಾಂಶ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ರಾಜ್ಯಮಟ್ಟದಲ್ಲಿ ಮೆರೆದಿರುವ ಮೇರು ಸಾಧನೆಗಳು, ಶೇ. ೧೦೦ರ ಉತ್ತೀರ್ಣತೆ ಹಾಗೂ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ಸಾಧನೆ ನಮ್ಮೆಲ್ಲರಿಗೂ ಅಪಾರ ಹೆಮ್ಮೆ ತಂದಿದೆ. ಈ ಯಶಸ್ಸು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಸಮರ್ಪಿತ ಮಾರ್ಗದರ್ಶನ ಮತ್ತು ಪೋಷಕರ ಅಮೂಲ್ಯ ಸಹಕಾರದ ಫಲವಾಗಿದೆ. ಮುಂದಿನ ದಿನಗಳಲ್ಲಿ ಕೂಡ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.