ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ನೊಳಂಭ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ಸರ್ವ ಸದಸ್ಯರ 23ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಂದಿ ಪತ್ತಿನ ಸಹಕಾರ ಸಂಘ ಸಮಾಜದಲ್ಲಿನ ಆರ್ಥಿಕ ದುರ್ಬಲರ ಏಳ್ಗೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು ಈ ದಿಸೆಯಲ್ಲಿ ಸಂಘದ ಆರ್ಥಿಕ ನೆರವಿನಿಂದ ಹಲವರು ಸದೃಡ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದ ಅವರು ಸಮಾಜದ ಎಲ್ಲ ವರ್ಗದ ಜನತೆಗೆ ಆರ್ಥಿಕ ಶಕ್ತಿಯನ್ನು ಕಲ್ಪಿಸಿಕೊಡುವ ಉದ್ದೇಶಕ್ಕೆ ಪೂರಕವಾಗಿ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.ಪ್ರತಿ ವರ್ಷ ಸಂಘದ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದ್ದು,ಸಂಘದ ವ್ಯವಹಾರ ಅಗಾಧವಾಗಿ ವಿಸ್ತಾರಗೊಂಡಿದೆ ಎಂದ ಅವರು ಪ್ರಮುಖ ಸ್ಥಳದಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸದಸ್ಯರು,ಆಡಳಿತ ಮಂಡಳಿಯ ಜತೆಗೆ ನೊಳಂಭ ವೀರಶೈವ ಲಿಂಗಾಯತ ಸಮಾಜ ಬಾಂಧವರು ಸಹಕರಿಸಿದ್ದನ್ನು ಸಂಘ ಸದಾ ಸ್ಮರಿಸಲಿದೆ. ಸಾರ್ವಜನಿಕರ ಪ್ರಶಂಸೆಗೆ ಕಾರಣವಾದ ಸಂಘದ ಎಲ್ಲ ಯಶಸ್ಸಿಗೆ ಷೇರುದಾರರು ಬಹು ಮುಖ್ಯ ಕಾರಣಕರ್ತರಾಗಿದ್ದಾರೆ ಎಂದರು.
ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಂಘ ತಾಲೂಕಿನಲ್ಲಿ ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಸ್ಪಂದಿಸುತ್ತಿದ್ದು ಶ್ರೀ ಮಠ ಈ ದಿಸೆಯಲ್ಲಿ ಸಂಘದ ಕಾರ್ಯವನ್ನು ಬೆಂಬಲಿಸಲಿದೆ ಎಂದರು.
ಶ್ರೀಗಳನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಬಸವರಾಜಪ್ಪ, ನಿರ್ದೇಶಕ ಸುರೇಶ್, ಮಂಜಪ್ಪ, ಸಂಗಪ್ಪ, ರವಿಕುಮಾರ್, ಯುವರಾಜ, ಸುಚಿತ್ರ, ಸುವರ್ಣ ಕಾರ್ಯದರ್ಶಿ ಹೂವಣ್ಣ, ಸಿಬ್ಬಂದಿ ವಸಂತಕುಮಾರ್, ನಿರಂಜನ ತಟ್ಟೆಹಳ್ಳಿ, ಮೋಹನಕುಮಾರ್, ರಾಮಲಿಂಗಪ್ಪ, ಮಧುಕೇಶ್ವರ್, ರಾಜು ಮತ್ತಿತರರು ಹಾಜರಿದ್ದರು.