ಜೋಯಿಡಾ: ತಾಲೂಕಿನ ನಂದಿಗದ್ದಾ ಸೇವಾ ಸಹಕಾರಿ ಸಂಘ ಯರಮುಖದಿಂದ ನಂದಿಗದ್ದೆ ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆ, ಅಂಗನವಾಡಿ, ಹೈಸ್ಕೂಲ್ ಗೆ ಅಗತ್ಯವಿರುವ ಅವಶ್ಯಕ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಳೆದ 12 ವರ್ಷಗಳಿಂದ ನೂರಕ್ಕೆ ನೂರು ಫಲಿತಾಂಶ ನೀಡುತ್ತಿರುವ ಗುಂದ ಹೈಸ್ಕೂಲ್ ನ ಎಲ್ಲ ಶಿಕ್ಷಕರಿಗೆ ಹಾಗೂ ನಿವೃತ್ತರಾದ ನಂದಿಗದ್ದೆ ಶಾಲೆ ಶಿಕ್ಷಕ ಜನಾರ್ಧನ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಆರ್.ವಿ. ದಾನಗೇರಿ ಮಾತನಾಡಿ, ಸಂಘವು ಲಾಭದಿಂದ ಇರಲು ಇಲ್ಲಿರುವ ರೈತರು ಮತ್ತು ಸಂಘದ ಹಿತೈಷಿಗಳೇ ಕಾರಣ. ಧರ್ಮಾರ್ಥ ನಿಧಿಯಿಂದ ನಮ್ಮ ಊರಿನ ಶಾಲೆ, ಅಂಗನವಾಡಿಗೆ ಬೇಕಾಗುವ ಅತ್ಯಗತ್ಯ ವಸ್ತುಗಳನ್ನು ಪೂರೈಸಿದ್ದೇವೆ. ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ನಾವು ಈ ಸಹಾಯ ಮಾಡುತ್ತಿದ್ದೇವೆ ಎಂದರು.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೋಸೆಫ್ ಗೋನ್ಸಾಲವಿಸ್, ಎಸ್ಡಿಎಂಸಿ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಸಹಕಾರಿ ಸಂಘದ ಉಪಾಧ್ಯಕ್ಷ ಸುದರ್ಶನ ಭಾಗ್ವತ್, ವ್ಯವಸ್ಥಾಪಕ ಶಿವರಾಮ ದಬ್ಗಾರ, ಸಲಹೆಗಾರ ಎಸ್.ಟಿ. ದಾನಗೇರಿ, ಸದಸ್ಯರಾದ ಶ್ರೀನಾಥ್ ದೇಸಾಯಿ, ಸಂದೇಶ ದೇಸಾಯಿ, ರೇಖಾ ಉಪಾಧ್ಯ, ಅರ್ಚನಾ ಹೆಗಡೆ ಇದ್ದರು.